ಶ್ರೀನಿವಾಸಪುರ : KSRTC ಬಸ್ಸುಗಳನ್ನು ಮದುವೆ ರಾಜಕೀಯ ಸಮಾವವೇಶಗಳಿಗೆ ಒಪ್ಪಂದದ ಮೇರೆಗೆ
ದೊಡ್ದ ಸಂಖ್ಯೆಯಲ್ಲಿ ಬಸ್ಸುಗಳನ್ನು ಕಳೆಸುತ್ತಿರುವುದರಿಂದ, ಮಾರ್ಗದಲ್ಲಿ ರೆಗ್ಯೂಲರ್ ಆಗಿ ಒಡಾಡುತ್ತಿದ್ದ ಬಸ್ಸುಗಳಿಲ್ಲದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಹಾಗು ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಒಡಾಡಲು ಪ್ರಯಾಸ ಪಡುವಂತಾಗಿದೆ ಎಂದು ಆರೋಪಿಸಿ ಕೂರಿಗೇಪಲ್ಲಿ ಮುದಿಮಡಗು ಭಾಗದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಬಂದಂತ ಬಸ್ ಅನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲೂಕಿನ ಬಹುತೇಕ ಗಡಿಯಂಚಿನ ಗ್ರಾಮಗಳಿಗೆ ಶ್ರೀನಿವಾಸಪುರ ಹಾಗು ಚಿಂತಾಮಣಿಯಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಗಳನ್ನು ಕೆ ಎಸ್ ಆರ್ ಟಿ ಸಿ ಒದಗಿಸಿದೆ. ಇತ್ತಿಚಿಗೆ ರಾಜಕೀಯ ಸಮಾವೇಶಗಳು ಇತರೆ ಖಾಸಗಿ ಕಾರ್ಯಕ್ರಮಗಳು ಸಬೆ ಸಮಾರಂಬಗಳಿಗೆ ತೆರಳಲು KSRTC ಸಂಸ್ಥೆ ಬಸ್ಸುಗಳನ್ನು ಒಪ್ಪಂದದ ಮೇರೆಗೆ ಕಳಿಸುತ್ತಿರುವ ಹಿನ್ನಲೆಯಲ್ಲಿ ರೆಗ್ಯೂಲರ್ ಆಗಿ ಒಡಾಡುವ ಮಾರ್ಗದಲ್ಲಿ ಬಸ್ ಇಲ್ಲದಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳು ಪಾಸ್ ಇದ್ದರು ಇಂತಹ ಸಂದರ್ಬದಲ್ಲಿ ದುಬಾರಿ ಹಣ ತೆತ್ತು ಒಡಾಡಲು ಕಷ್ಟವಾಗುತ್ತದೆ ಎಂದು ದೂರಿದರು.
ಬಸ್ ತಡೆದ ಆಕ್ರೋಶಿತರು ಈ ಬಗ್ಗೆ ಶ್ರೀನಿವಾಸಪುರ ಘಟಕದ ವ್ಯವಸಾಪಕರಿಗೆ ಹೇಳಿದರೆ ನಿಮ್ಮಿಂದ ಬರುವಂತ ದೂರು ನಾನು ಸ್ವೀಕರಿಸಿದರೆ ನಿಮಗೆ ನನ್ನಿಂದ ಯಾವುದೇ ಉಪಯೋಗವಾಗುದಿಲ್ಲ ಎಂದು ತಲೆ ಜಾರಿಕೊಳ್ಳುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



