ಶ್ರೀನಿವಾಸಪುರ:ರಾಜ್ಯ ಲೋಕಾಯುಕ್ತ ಜಿಲ್ಲಾಡಳಿತ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಶ್ರೀನಿವಾಸಪುರ-ಹೊಗಳಗೆರೆ ರಸ್ತೆಯ ಮಜರಾ ಚಿಂತಕುಂಟ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವಕ್ಕೆ ಗಿಡ ನೆಡುವ ಮೂಲಕ ಕರ್ನಾಟಕ ಉಪ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಇಂದು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತಾ ನ್ಯಾಯಮೂರ್ತಿ ಬಿ.ವೀರಪ್ಪ ಅರಣ್ಯ ಎಂದರೆ ಕೇವಲ ಮರಗಳ ಸಮೂಹವಲ್ಲ, ಪ್ರಕೃತಿಯ ಸಂಪತ್ತು ಅದನ್ನು ಮಕ್ಕಳ ರೀತಿಯಲ್ಲಿ ಪೋಷಿಸುವ ಮೂಲಕ ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ ಮಾಡಬೇಕಿದೆ.ಇದರಿಂದ ಜೀವಸಂಕುಲದ ಉಳಿವು ಹಾಗು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಅರಣ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ, ಅಪರ ಜಿಲ್ಲಾಧಿಕಾರಿ ಮಂಗಳ, ಎಸ್.ಪಿ ಕನ್ಯಕಾ ಸಿಕ್ರಿವಾಲ, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧಿಶ ಆನಂದಶೆಟ್ಟಿ, ಕಾನೂನು ಸೇವಾಪ್ರಾಧಿಕಾರದ ನ್ಯಾಯಧಿಶ ಪ್ರಭು ನಿಲಾಚಾರ್,ಡಿವೈಎಸ್.ಪಿ ಮನಿಷಾ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಲೋಕಾಯುಕ್ತ ಇನ್ಸಪೇಕ್ಟರ್ ರೇಣುಕಾ,ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್,ತಹಶೀಲ್ದಾರ್ ಸುಧೀಂದ್ರ. ಇಒ ಡಾ.ಸರ್ವೇಶ್,ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಹರ್ಷವರ್ಧನ್ ಪೋಲಿಸ್ ಇನ್ಸಪೇಕ್ಟರ್ ಶಂಕರಾಚಾರಿ ಮುಂತಾದವರು ಇದ್ದರು.
Trending
- ಯಲ್ದೂರು ಆಸ್ಪತ್ರೆಗೆ ಆಂಬುಲೆನ್ಸ್: ಆರೋಗ್ಯ ಸಚಿವ ಖಾದರ್ ಭರವಸೆ
- ಗಂಗರೇಕಾಲುವೆ ಬಸವೇಶ್ವರ, ವೀರಾಂಜನೇಯ ದೇವಾಲಯ ಜೀರ್ಣೋದ್ಧಾರ
- ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಸಂಪರ್ಕ ಹೊಂದಿದ್ದ AC ಮೆಕ್ಯಾನಿಕ್ ಬಂಧನ!
- ಶ್ರಾವಣ ಶನಿವಾರ ವೆಂಕಟೇಶಾಯ ಮಂಗಳಂ ಎಂದು ಪಡಿ ಬೇಡುವುದು ಯಾಕೆ ಏನು?
- ಬುದ್ದಿ ಹೇಳಿದ ಪ್ರಿನ್ಸಿಪಾಲ್ ರನ್ನ ಹತ್ಯೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು!
- ಲಕ್ಷ್ಮೀಸಾಗರ:ಅಧಿಕಾರಿ ನಿರ್ಲಕ್ಷ್ಯ ಮೂಲಸೌಕರ್ಯ ಇಲ್ಲ ಗ್ರಾಮಸ್ಥರ ಆಕ್ರೋಶ!
- ಶ್ರೀನಿವಾಸಪುರ:ದೇವರಾಜ ಅರಸು ಜಯಂತಿ ಆಚರಣೆಗೆ ನಿರ್ಲಕ್ಷ್ಯ ಆರೋಪ!
- ಬಿಜೆಪಿ ಯುವಮೊರ್ಚಾ ಅಧ್ಯಕ್ಷ,ಸೂರ್ಯಗೆ ಗೇಟ್ ಪಾಸ್ ಯಾಕೆ?
Wednesday, August 26



