ಶ್ರೀನಿವಾಸಪುರ:ಹೆತ್ತ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಿದ ಮಗುವಿನ ತಂದೆ ತಾಯಿ ಬ್ರೋಕರ್ ಸೇರಿದಂತೆ ಶ್ರೀನಿವಾಸಪುರ ಪೋಲಿಸರು ಐದು ಮಂದಿಯ ವಿರುದ್ದ ಕೇಸು ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನೀತು ಹಾಗೂ ರಾಘವೇಂದ್ರ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಇದರ ಜೊತೆಗೆ ಕಳೆದ ಆರೇಳು ದಿನಗಳ ಹಿಂದೆ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಮತ್ತೊಂದು ಗಂಡು ಮಗುವಿಗೆ ನೀತು ಜನ್ಮ ನೀಡಿದ್ದಾಳೆ.ಬಡತನದ ಹಿನ್ನಲೆಯಲ್ಲಿ ನೀತು ಹಾಗೂ ರಾಘವೇಂದ್ರ ದಂಪತಿ ಹುಟ್ಟಿದ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಲು ನಿರ್ಧರಿಸಿ ನಾರಾಯಣಸ್ವಾಮಿ ಎಂಬ ವ್ಯಕ್ತಿಯ ಮೂಲಕ ಮಗು ಮಾರಾಟ ಮಾಡಿದ್ದಾರೆ.ಇದು ಶ್ರೀನಿವಾಸಪುರ ಪೊಲೀಸರಿಗೆ ಮಾಹಿತಿ ತಲುಪಿದೆ ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರಿಗೆ ಮಧ್ಯವರ್ತಿ ಹಾಗೂ ಮಗುವನ್ನು ಖರೀದಿ ಮಾಡುತ್ತಿದ್ದವರು ಸೇರಿ ಒಟ್ಟು 5 ಮಂದಿ ಸಿಕ್ಕಿಬಿದಿದ್ದಾರೆ.
ಮಗು ಮಾರಾಟ ಬಯಲಿಗೆ ಬಂದಿದ್ದು ಹೇಗೆ?
ಶುಕ್ರವಾರ ಮಧ್ಯರಾತ್ರಿ 12.30ರ ಸಮಯದಲ್ಲಿ ಪೊಲೀಸರು ಕೊಳ್ಳೂರು ರಸ್ತೆ ಕಡೆಯಿಂದ ಗಸ್ತು ಮುಗಿಸಿ ವೆಂಕಟೇಶ್ವರ ಬಡಾವಣೆಯ ಕಡೆ ಬರುತ್ತಿರುವಾಗ ಅನುಮಾನಸ್ಪದವಾಗಿ ಇದ್ದವರನ್ನು ವಿಚಾರಿಸಿದಾಗ ಮಗು ಮಾರಾಟ ಮಾಡುವ ಕೃತ್ಯ ಬೆಳಕಿಗೆ ಬಂದಿದೆ.ಈ ಬಗ್ಗೆ ವಿಚಾರಣೆ ನಡೆಸಿದಾಗ ಮಗುವನ್ನು ಮಾರಾಟ ಮಾಡುವ ವ್ಯವಹಾರದ ಗುಟ್ಟು ಬಯಲಾಗಿದೆ. ಪೋಷಕರ ಬಳಿ ಬ್ರೋಕರ್ ನಾರಾಯಣಸ್ವಾಮಿ 2 ಲಕ್ಷ ರೂ.ಗೆ ಮಗುವನ್ನು ಖರೀದಿಸಿ ಚಿಂತಾಮಣಿ ತಾಲೂಕಿನ ಕೃಷ್ಣ ಹಾಗೂ ಮಂಜುಳಾ ಎಂಬ ದಂಪತಿಗೆ 5 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡುವ ವ್ಯವಹಾರ ಕುದರಿದ್ದು ಇದನ್ನು ಪೋಲಿಸರು ಬಯಲಿಗೆ ಎಳೆದಿದ್ದಾರೆ.
ಶ್ರೀನಿವಾಸಪುರದ ಮಗು ಪೋಷಕರಾದ ನೀತು, ರಾಘವೇಂದ್ರ, ಮಧ್ಯವರ್ತಿ,ನಾರಾಯಣಸ್ವಾಮಿ ಹಾಗೂ ಖರೀದಿದಾರ ಚಿಂತಾಮಣಿಯ ಕೃಷ್ಣ, ಮಂಜುಳಾ ದಂಪತಿ ವಿರುದ್ಧ ಶ್ರೀನಿವಾಸಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಅಕ್ರಮವಾಗಿ ಮಗು ಮಾರಾಟ ಜಾಲವನ್ನು ಶ್ರೀನಿವಾಸಪುರ ಪೊಲೀಸರು ಪತ್ತೆ ಮಾಡಿ, ಮಾರಾಟ, ಖರೀದಿದಾರರನ್ನು ಹಾಗೂ ಬ್ರೋಕರ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ಈ ಬಗ್ಗೆ ಇನ್ನೂ ಯಾರದರೂ ಭಾಗಿಯಾಗಿದ್ದಾರ ಎಂಬ ಬಗ್ಗೆ ಉನ್ನತ ತನಿಖೆ ಕೈಗೊಳ್ಳಲಾಗಿದೆ ಎಂದು ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



