ನ್ಯೂಜ್ ಡೆಸ್ಕ್:ರಾಜ್ಯದ ಎಲ್ಲಾ ಕೆಲಸಗಳಲ್ಲೂ ಹಿಂದಿಯವರದೆ ಮೆಲೂಗೈ ಆಗಿದೆ ಅದು ಮಾಲ್ ಇರಬಹುದು ಆಫಿಸ್ ಬಾಯ್ ಆಗಿರಬಹುದು ಸಾಫ್ಟವೇರ್, ಬಯೋಟೆಕ್ನಾಲಜಿ, ಫೈನಾನ್ಸ್, ಎಚ್ಆರ್ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದಿಯವರ ಕಾರುಬಾರು ಜೋರಾಗಿದೆ, ಕಾರ್ಪೆಂಟರಿಂಗ್, ಪೈಟಿಂಗ್, ಬ್ಯಾಂಕಿಂಗ್, ಟ್ರಾನ್ಸಪೋರ್ಟ್ ಕ್ಷೇತ್ರಕ್ಕೂ ವಿಸ್ತರಿಸಲಾರಂಭಿಸಿದ್ದು ಗ್ರಾಮೀಣ ಭಾಗದಲ್ಲಿ ಇಟ್ಟಿಗೆ ಭಟ್ಟಿ, ಹಸು ಸಾಕಾಣಿಕೆ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದಿ ವಾಲಗಳದೆ ಪಾರು ಪತ್ಯೆ.
ಬೆಂಗಳೂರಿನ ಹೋಟೆಲ್ ಗಳಿಗೂ ಹಿಂದಿ ವಾಲಗಳು ಎಂಟ್ರಿ ಕೊಟ್ಟಿದ್ದು ಆರಂಭದಲ್ಲಿ ಸ್ವಚ್ಚತೆಯಲ್ಲಿ ಮಾತ್ರ ಇದ್ದ ಇವರ ಕಾರ್ಯ ಇತ್ತಿಚಿಗೆ ದರ್ಶಿನಿ ಹೋಟೆಲ್ ಉಡುಪಿ ಹೋಟೆಲ್ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಹಿಂದಿ ಭಾಷಿಕರು ಕೌಂಟರ್ ನಿಂದ ಹಿಡಿದು ಎಲ್ಲಾ ಕಡೆ ವಿಭಾಗಗಳಲ್ಲೂ ತುಂಬಿದ್ದಾರೆ.
ನಮ್ಮ ರಾಜ್ಯದ ಹೆಮ್ಮೆಯ ತಿಂಡಿಗಳಾದ ಇಡ್ಲಿ ವಡೆ ದೋಸೆ ಸೇರಿದಂತೆ ಇನ್ನಿತರೆ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ಹಿಂದಿವಾಲಗಳು ಸೈ ಎನಿಸಿಕೊಂಡಿದ್ದಾರಂತೆ ಹಿಗೆಂದು ಕೆಲ ಹೋಟೆಲ್ ಮಾಲಿಕರು ಹೇಳುತ್ತಾರೆ.
ಹಿಂದೆಲ್ಲಾ ದರ್ಶಿನಿ ಹೋಟೆಲ್ ಗಳು ಕರಾವಳಿ ಭಾಗದವರದೆ ಹೆಚ್ಚಾಗಿತ್ತು ಅಲ್ಲಿ ಅಡುಗೆ ಭಟ್ಟರಿಂದ ಹಿಡಿದು ಕ್ಲೀನರ್ ತನಕ, ತಮ್ಮ ಊರುಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದು ವಾಡಿಕೆಯಾಗಿತ್ತು ಬೆರೆಯಾರುಗೂ ಅವಕಾಶವೆ ಇರಲಿಲ್ಲ ಈಗ ಎಕಾಏಕಿ ಹಿಂದಿವಾಲಾಗಳಿಗೆ ಕೆಲಸ ಸೇರಿಕೊಳ್ಳಲು ಸಂದರ್ಭ ಒದಗಿದೆ. ಇದು ಸ್ಥಳೀಯರಿಗೆ ಎಚ್ಚರಿಕೆಯ ಗಂಟೆ ಭಾರಿಸಿದಂತೆ ಎಂಬ ಅಭಿಪ್ರಾಯ ಮೂಡುತ್ತಿದೆ ಎನ್ನುವ ಮಾತು ಎಲ್ಲಡೆ ಕೇಳಿಬರುತ್ತಿದೆ. ಮಾಲಿಕರಿಂದ ಹಿಡಿದು ಎಲ್ಲರೂ ಹಿಂದಿಯವರನ್ನು ಭಯ್ಯಾ ಎಂದೆ ಕರೆಯುವುದು ಇದು ಸಾಮನ್ಯ.
ಯಾಕೆ ಹಿಂದಿ ಭಾಷಿಕರಿಗೆ ಆದ್ಯತೆ
ಸ್ಥಳಿಯರನ್ನು ಕೆಲಸಕ್ಕೆ ಇಟ್ಟುಕೊಂಡರೆ, ಅವರು ಯಾವಾಗ ಕೆಲಸ ಬಿಡುತ್ತಾರೋ ಎನ್ನುವ ಟೆನ್ಸನ್ ಇರುತ್ತದೆ, ದೂರದ ರಾಜ್ಯಗಳ ಹಿಂದಿಯವರನ್ನು ಕೆಲಕ್ಕೆ ಸೇರಿಸಿಕೊಂಡರೆ ಕನಿಷ್ಠ ವರ್ಷಕ್ಕೊಮ್ಮೆ ಇಲ್ಲವೇ ಎರಡು ಬಾರಿ ಮಾತ್ರ ಅವರು ತಮ್ಮ ಊರಿಗೆ ಹೋಗುತ್ತಾರೆ. ಅವರಿಗೆ ಮುಖ್ಯವಾಗಿ, ಊಟ ವಸತಿ ವ್ಯವಸ್ಥೆ ಮಾಡುವುದರಿಂದ, ಅವರು ಬೇರೆ ಉದ್ಯೋಗ ಅರಸಿ ಇತರಡೆ ಹೋಗುವುದಿಲ್ಲ. ಅವರು ಕನ್ನಡ ಕಲಿಯಬೇಕು ಎಂದು ನಾವೆಲ್ಲಾ ಅವರ ಜೊತೆ ಕನ್ನಡದಲ್ಲೇ ಮಾತುಕತೆ ನಡೆಸುತ್ತೇವೆ “ಎಂದು ಉದ್ಯಮಿಗಳು ಹೇಳುತ್ತಾರೆ.ಅದೇನೆಂದರೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನಿರುದ್ಯೋಗಿಗಳಿಗೆ ಕರ್ನಾಟಕ ಸಮೃದ್ದವಾಗಿದೆಯೆಂಬ ಅಭಿಪ್ರಾಯ ಇದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



