ನ್ಯೂಜ್ ಡೆಸ್ಕ್:ದಾರಿ ತಪ್ಪಿದ ಒಂಟಿ ಆನೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಮತ್ತೆ ಕಾಡಿಗೆ ಹೋಗಲು ದಾರಿಕಾಣದೆ ಜನರನ್ನು ನೋಡಿ ಗಾಭರಿಯಿಂದ ರಾದಾಂತ ಸೃಷ್ಟಿಸಿದ ಘಟನೆ ಆಂಧ್ರದ ಚಿತ್ತೂರು ಜಿಲ್ಲೆ ಪಲಮನೇರು ನಗರದ ಹೊರಭಾಗದ ಪ್ರಶಾಂತ ನಗರದಲ್ಲಿ ನಡೆದಿದ್ದು ಅನೆ ದಾಳಿಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರಲ್ಲದೆ ಹಸುವಿನ ಕರುವು ಮೇಲು ಆನೆ ದಾಳಿ ಮಾಡಿದ ಹಿನ್ನಲೆಯಲ್ಲಿ ಕರು ಸ್ಥಳದಲ್ಲೆ ಸಾವನಪ್ಪಿದೆ.
ಬೆಳಿಗ್ಗೆ 6 ಗಂಟೆಗೆ ಸಮಯದಲ್ಲಿ ನಗರದ ಹೋರವಲಯದ ಹೆದ್ದಾರಿ ಬಳಿ ಮಲವಿಸರ್ಜನೆ ಮಾಡುತ್ತಿದ್ದ ಒಂಟಿ ಆನೆಯನ್ನು ನೋಡಿದ ಕೆಲವರು ಮೊಬೈಲ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಇದರಿಂದ ಗುಂಪು ಗುಂಪಾಗಿ ಜನರು ಹೆಚ್ಚಾಗಿ ಬಂದ ಹಿನ್ನಲೆಯಲ್ಲಿ ಗಾಭಾರಿಯಾದ ಆನೆ ಸುಮಾರು 5 ಗಂಟೆಗಳ ಕಾಲ ದಿಕ್ಕೆಟ್ಟು ಎಲ್ಲೆಂದರಲ್ಲಿ ಒಡಾಡುತ್ತ ಅರಣ್ಯ ಅಧಿಕಾರಿಗಳನ್ನು ಕಾಡಿಸಿದೆ ಇನ್ನೊಂದಡೆ ಸ್ಥಳಿಯ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ ಇದರಿಂದಾಗಿ ಸತ್ಯನಾರಾಯಣ ದೇವಸ್ಥಾನದ ಬಳಿಯ ಚಿನ್ನೂರು ಸೇತುವೆಯಿಂದ ಗಂಗಾವರಂ ಕಡೆಗೆ ವಾಹನವನ್ನು ಕಾಡಿಗೆ ತಿರುಗಿಸಲು ಪ್ರಯತ್ನಿಸುತ್ತಿದ್ದ ಅರಣ್ಯ ವಿಭಾಗಾಧಿಕಾರಿ ಸುಕುಮಾರ್ ಮೇಲೆ ಆನೆ ದಾಳಿ ಮಾಡಿದ್ದು ಇದರಿಂದ ಅವರ ಕಾಲಿಗೆ ಗಂಭೀರ ಗಾಯವಾಗಿದೆ ಸುಮಾರು 5 ಗಂಟೆಗಳ ಕಾಲ ಕಾಡಿಸಿದ ಆನೆಯನ್ನು ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ, ಆನೆಯನ್ನು ಗಂಗಾವರಂನಿಂದ ಆಂಜನೇಯ ಸ್ವಾಮಿ ದೇವಾಲಯದ ಹಿಂದಿನ ಕಾಡಿಗೆ ಸುಮಾರು ಒಂದು ಮೈಲಿ ದೂರದಲ್ಲಿ ಸ್ಥಳಾಂತರಿಸಿದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



