ನ್ಯೂಜ್ ಡೆಸ್ಕ್:ದಾರಿ ತಪ್ಪಿದ ಒಂಟಿ ಆನೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಮತ್ತೆ ಕಾಡಿಗೆ ಹೋಗಲು ದಾರಿಕಾಣದೆ ಜನರನ್ನು ನೋಡಿ ಗಾಭರಿಯಿಂದ ರಾದಾಂತ ಸೃಷ್ಟಿಸಿದ ಘಟನೆ ಆಂಧ್ರದ ಚಿತ್ತೂರು ಜಿಲ್ಲೆ ಪಲಮನೇರು ನಗರದ ಹೊರಭಾಗದ ಪ್ರಶಾಂತ ನಗರದಲ್ಲಿ ನಡೆದಿದ್ದು ಅನೆ ದಾಳಿಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರಲ್ಲದೆ ಹಸುವಿನ ಕರುವು ಮೇಲು ಆನೆ ದಾಳಿ ಮಾಡಿದ ಹಿನ್ನಲೆಯಲ್ಲಿ ಕರು ಸ್ಥಳದಲ್ಲೆ ಸಾವನಪ್ಪಿದೆ.
ಬೆಳಿಗ್ಗೆ 6 ಗಂಟೆಗೆ ಸಮಯದಲ್ಲಿ ನಗರದ ಹೋರವಲಯದ ಹೆದ್ದಾರಿ ಬಳಿ ಮಲವಿಸರ್ಜನೆ ಮಾಡುತ್ತಿದ್ದ ಒಂಟಿ ಆನೆಯನ್ನು ನೋಡಿದ ಕೆಲವರು ಮೊಬೈಲ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಇದರಿಂದ ಗುಂಪು ಗುಂಪಾಗಿ ಜನರು ಹೆಚ್ಚಾಗಿ ಬಂದ ಹಿನ್ನಲೆಯಲ್ಲಿ ಗಾಭಾರಿಯಾದ ಆನೆ ಸುಮಾರು 5 ಗಂಟೆಗಳ ಕಾಲ ದಿಕ್ಕೆಟ್ಟು ಎಲ್ಲೆಂದರಲ್ಲಿ ಒಡಾಡುತ್ತ ಅರಣ್ಯ ಅಧಿಕಾರಿಗಳನ್ನು ಕಾಡಿಸಿದೆ ಇನ್ನೊಂದಡೆ ಸ್ಥಳಿಯ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ ಇದರಿಂದಾಗಿ ಸತ್ಯನಾರಾಯಣ ದೇವಸ್ಥಾನದ ಬಳಿಯ ಚಿನ್ನೂರು ಸೇತುವೆಯಿಂದ ಗಂಗಾವರಂ ಕಡೆಗೆ ವಾಹನವನ್ನು ಕಾಡಿಗೆ ತಿರುಗಿಸಲು ಪ್ರಯತ್ನಿಸುತ್ತಿದ್ದ ಅರಣ್ಯ ವಿಭಾಗಾಧಿಕಾರಿ ಸುಕುಮಾರ್ ಮೇಲೆ ಆನೆ ದಾಳಿ ಮಾಡಿದ್ದು ಇದರಿಂದ ಅವರ ಕಾಲಿಗೆ ಗಂಭೀರ ಗಾಯವಾಗಿದೆ ಸುಮಾರು 5 ಗಂಟೆಗಳ ಕಾಲ ಕಾಡಿಸಿದ ಆನೆಯನ್ನು ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ, ಆನೆಯನ್ನು ಗಂಗಾವರಂನಿಂದ ಆಂಜನೇಯ ಸ್ವಾಮಿ ದೇವಾಲಯದ ಹಿಂದಿನ ಕಾಡಿಗೆ ಸುಮಾರು ಒಂದು ಮೈಲಿ ದೂರದಲ್ಲಿ ಸ್ಥಳಾಂತರಿಸಿದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



