ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಬುಧವಾರ ತಡ ರಾತ್ರಿ ನುಗ್ಗಿರುವ ಕಳ್ಳರು,ಸಾಯಿಬಾಬ ವಿಗ್ರಹದ ಮೇಲಿನ ಆಭರಣಗಳನ್ನು ಮತ್ತು ಹುಂಡಿಯನ್ನು ದೋಚಿದ್ದಾರೆ. ದೇವಾಲಯದ ಪ್ರವೇಶ ದ್ವಾರ ಬೀಗ ಹೊಡೆದು ದೇವಾಲಯಕ್ಕೆ ನುಗ್ಗಿರುವ ಕಳ್ಳರು ವಿಗ್ರಹದ ಮೇಲಿದ್ದ ಸುಮಾರು 1 ಕೆಜಿ ತೂಕದ ಬೆಳ್ಳಿಯ ಕಡಗಗಳು ಒನ್ ಗ್ರಾಮ್ ಬೆಳ್ಳಿ ವಡವೆಗಳು ಮತ್ತು ಹುಂಡಿಯನ್ನು ಹೊತ್ತೈದಿದ್ದಾರೆ ಎಂದು ದೇವಾಲಯ ಸಮಿತಿ ಸದಸ್ಯರು ತಿಳಿಸಿದ್ದಾರೆ.ಹುಂಡಿಯಲ್ಲಿ ದೊಡ್ಡ ಮೊತ್ತದ ಹಣ ಇತ್ತೆಂದು ಹೇಳುತ್ತಾರೆ ಈ ಸಂಬಂದ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಥಳಕ್ಕೆ ಶ್ವಾನ ದಳ ಕರೆಸಿದ್ದ ಪೋಲಿಸರು ಪರಶೀಲನೆ ನಡೆಸಿದ್ದು ಪೋಲಿಸ್ ಶ್ವಾನ ದೇವಾಲಯದ ಹಿಂಬಾಗದಲ್ಲಿರುವ ಕಬರ್ಸ್ಥಾನ್ ಮೂಲಕ ನಲ್ಲಪಲ್ಲಿ ರಸ್ತೆಯಲ್ಲಿರುವ ಜಮೀನುಗಳ ವರಿಗೂ ತೆರಳಿ ವಾಪಸ್ಸು ಆಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



