ಶ್ರೀನಿವಾಸಪುರ: ಜನ್ಮಭೂಮಿ ವೇದಿಕೆ ವತಿಯಿಂದ ಭಾನುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆಯಲಿರುವ ಸಿಂಹಾಚಲದ ಶ್ರೀ ವರಾಹ ನರಸಿಂಹಸ್ವಾಮಿ ಕಲ್ಯಾಣೋತ್ಸವದ ಅಂಗವಾಗಿ ಹಿಂದಿನ ದಿನವಾದ ಶನಿವಾರ ರಾತ್ರಿ ವರಾಹ ಶ್ರೀ ನರಸಿಂಹಸ್ವಾಮಿ ದೇವಾಲಯದ ರಥವನ್ನು ಪಟ್ಟಣದ ಪುರಬಿದಿಗಳಲ್ಲಿ ಶೋಭಾಯಾತ್ರೆ ಮೂಲಕ ಮೆರವಣಿಗೆ ಮಾಡಲಾಯಿತು.
ಸಂಜೆ 6 ಗಂಟೆಗೆ ಸುಮಂಗಲಿಯರಿಂದ ಪೂರ್ಣಕುಂಭಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಜಾನಪದ ಕಲಾತಂಡಗಳೊಂದಿಗೆ ಸಾಗಿದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು .
![](https://www.vcsnewz.com/wp-content/uploads/2022/06/28523.jpg)
ಆಂಧ್ರಪ್ರದೇಶದ ವಿಶಾಕಪಟ್ಟಣಂ ಬಳಿಯ ಸಿಂಹಾಚಲದ ಶ್ರೀ ವರಾಹ ನರಸಿಂಹಸ್ವಾಮಿ ದೇವಾಲಯದ ಉತ್ಸವ ಮೂರ್ತಿಗಳು ಹಾಗು ಪ್ರಚಾರ ರಥ ಶನಿವಾರ ಮ.3ಗಂಟೆಗೆ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳೀಯರು ಜನ್ಮಭೂಮಿ ವೇದಿಕೆ ಸಂಘಟಕರು ಸೇರಿ
ಮಂಗಳವಾಧ್ಯಗಳೊದಿಗೆ ಉತ್ಸವ ಮೂರ್ತಿಗಳನ್ನು ಸ್ವಾಗತಿಸಿದರು.
![](https://www.vcsnewz.com/wp-content/uploads/2022/06/2837.jpg)
ಶಂಕರಮಠದ ಬಳಿ ವಿಪ್ರ ಸಂಘದವರಿಂದ ಶೊಭಾಯಾತ್ರೆಯಲ್ಲಿ ಪಾಲ್ಗೋಂಡಿದ್ದವರಿಗೆ ಮಜ್ಜಿಗೆ ಪೊಟ್ಟಣಗಳನ್ನು ವಿತರಿಸಿದರು.