ಶ್ರೀನಿವಾಸಪುರ:ಸತ್ಸಂಗ ಬಳಗ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತವಾಗಿ ಶ್ರೀನಿವಾಸಪುರದ ಶಂಕರಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ದುರ್ಗಾ ಹೋಮ ನಡೆಸಲಾಯಿತು.
ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಹೋಮ ಕುಂಡಕ್ಕೆ ಸತ್ಸಂಗ ಬಳಗದ ಮುಖ್ಯಸ್ಥರಾದ ಸತ್ಯಮೂರ್ತಿ-ಮಂಗಳಾ ದಂಪತಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವೇದಬ್ರಹ್ಮ ಕುರುಮಾಕಲಹಳ್ಳಿ ಪ್ರಕಾಶ್ ರವರು ಪೂಜಾ ವಿಧಿವಿಧಾನಗಳನ್ನು ನಡೆಸಿ ಹೋಮ ನಡೆಸಿಕೊಟ್ಟರು.
ಸತ್ಸಂಗ ಬಳಗದ ಮುಖ್ಯಸ್ಥ ಸತ್ಯಮೂರ್ತಿ ಮಾತನಾಡಿ ದುರ್ಗಾದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ದುಷ್ಟ ಶಿಕ್ಷಕಿ ಶಿಷ್ಠ ರಕ್ಷಕಿಯಾದ ಮಾತೆಯನ್ನು ನವರಾತ್ರಿಗಳಂದು 9 ರೂಪಗಳಾಗಿ ಪೂಜಿಸುವುದು ವಿಶೇಷ ಹಾಗೆ ದುರ್ಗಾ ಮಂತ್ರಗಳನ್ನು ಪಠಿಸುವುದರಿಂದ ಮತ್ತು ಹೋಮ ಹವನಾದಿಗಳನ್ನು ನಡೆಸುವುದರಿಂದ ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟಗಳು ದೂರವಾಗುತ್ತದೆ ಭಯ ಮತ್ತು ಅಡೆತಡೆಗಳು ನಿವಾರಣೆಯಾಗುತ್ತದೆ ಅದರಂತೆ ವಿಜಯದಶಮಿಯಂದು ಸಮಸ್ತ ಜನರ ಶ್ರೆಯಸ್ಸಿಗಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾಹೋಮ ನಡೆಸಲಾಯಿತು ಎಂದರು.
ಇದೆ ಸಂದರ್ಭದಲ್ಲಿ ಕನ್ಯಕಾ ಪೂಜೆಯನ್ನು ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ,ಶಂಕರ ಸೇವಾ ಸಮಿತಿಯ ಜೆ.ಕೆ.ಮಂಜುನಾಥ್, ಪುರಸಭೆ ಸದಸ್ಯೆ ಶಾಂತಮ್ಮ, ಶಿಕ್ಷಕಿ ಸುಧಾಮಣಿ, ಸತ್ಸಂಗ ಬಳಗದ ಸದಸ್ಯರು ಹಾಗು ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



