ಶ್ರೀನಿವಾಸಪುರ:ಸತ್ಸಂಗ ಬಳಗ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತವಾಗಿ ಶ್ರೀನಿವಾಸಪುರದ ಶಂಕರಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ದುರ್ಗಾ ಹೋಮ ನಡೆಸಲಾಯಿತು.
ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಹೋಮ ಕುಂಡಕ್ಕೆ ಸತ್ಸಂಗ ಬಳಗದ ಮುಖ್ಯಸ್ಥರಾದ ಸತ್ಯಮೂರ್ತಿ-ಮಂಗಳಾ ದಂಪತಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವೇದಬ್ರಹ್ಮ ಕುರುಮಾಕಲಹಳ್ಳಿ ಪ್ರಕಾಶ್ ರವರು ಪೂಜಾ ವಿಧಿವಿಧಾನಗಳನ್ನು ನಡೆಸಿ ಹೋಮ ನಡೆಸಿಕೊಟ್ಟರು.
ಸತ್ಸಂಗ ಬಳಗದ ಮುಖ್ಯಸ್ಥ ಸತ್ಯಮೂರ್ತಿ ಮಾತನಾಡಿ ದುರ್ಗಾದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ದುಷ್ಟ ಶಿಕ್ಷಕಿ ಶಿಷ್ಠ ರಕ್ಷಕಿಯಾದ ಮಾತೆಯನ್ನು ನವರಾತ್ರಿಗಳಂದು 9 ರೂಪಗಳಾಗಿ ಪೂಜಿಸುವುದು ವಿಶೇಷ ಹಾಗೆ ದುರ್ಗಾ ಮಂತ್ರಗಳನ್ನು ಪಠಿಸುವುದರಿಂದ ಮತ್ತು ಹೋಮ ಹವನಾದಿಗಳನ್ನು ನಡೆಸುವುದರಿಂದ ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟಗಳು ದೂರವಾಗುತ್ತದೆ ಭಯ ಮತ್ತು ಅಡೆತಡೆಗಳು ನಿವಾರಣೆಯಾಗುತ್ತದೆ ಅದರಂತೆ ವಿಜಯದಶಮಿಯಂದು ಸಮಸ್ತ ಜನರ ಶ್ರೆಯಸ್ಸಿಗಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾಹೋಮ ನಡೆಸಲಾಯಿತು ಎಂದರು.
ಇದೆ ಸಂದರ್ಭದಲ್ಲಿ ಕನ್ಯಕಾ ಪೂಜೆಯನ್ನು ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ,ಶಂಕರ ಸೇವಾ ಸಮಿತಿಯ ಜೆ.ಕೆ.ಮಂಜುನಾಥ್, ಪುರಸಭೆ ಸದಸ್ಯೆ ಶಾಂತಮ್ಮ, ಶಿಕ್ಷಕಿ ಸುಧಾಮಣಿ, ಸತ್ಸಂಗ ಬಳಗದ ಸದಸ್ಯರು ಹಾಗು ಮುಂತಾದವರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Wednesday, June 18