ಶ್ರೀನಿವಾಸಪುರ:ಸತ್ಸಂಗ ಬಳಗ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತವಾಗಿ ಶ್ರೀನಿವಾಸಪುರದ ಶಂಕರಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಶ್ರೀ ದುರ್ಗಾ ಹೋಮ ನಡೆಸಲಾಯಿತು.
ಶಂಕರ ಮಠದ ಆವರಣದಲ್ಲಿ ಆಯೋಜಿಸಿದ್ದ ಹೋಮ ಕುಂಡಕ್ಕೆ ಸತ್ಸಂಗ ಬಳಗದ ಮುಖ್ಯಸ್ಥರಾದ ಸತ್ಯಮೂರ್ತಿ-ಮಂಗಳಾ ದಂಪತಿ ಪೂಜೆ ಸಲ್ಲಿಸಿದ ನಂತರ ಅರ್ಚಕರಾದ ವೇದಬ್ರಹ್ಮ ಕುರುಮಾಕಲಹಳ್ಳಿ ಪ್ರಕಾಶ್ ರವರು ಪೂಜಾ ವಿಧಿವಿಧಾನಗಳನ್ನು ನಡೆಸಿ ಹೋಮ ನಡೆಸಿಕೊಟ್ಟರು.
ಸತ್ಸಂಗ ಬಳಗದ ಮುಖ್ಯಸ್ಥ ಸತ್ಯಮೂರ್ತಿ ಮಾತನಾಡಿ ದುರ್ಗಾದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ದುಷ್ಟ ಶಿಕ್ಷಕಿ ಶಿಷ್ಠ ರಕ್ಷಕಿಯಾದ ಮಾತೆಯನ್ನು ನವರಾತ್ರಿಗಳಂದು 9 ರೂಪಗಳಾಗಿ ಪೂಜಿಸುವುದು ವಿಶೇಷ ಹಾಗೆ ದುರ್ಗಾ ಮಂತ್ರಗಳನ್ನು ಪಠಿಸುವುದರಿಂದ ಮತ್ತು ಹೋಮ ಹವನಾದಿಗಳನ್ನು ನಡೆಸುವುದರಿಂದ ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟಗಳು ದೂರವಾಗುತ್ತದೆ ಭಯ ಮತ್ತು ಅಡೆತಡೆಗಳು ನಿವಾರಣೆಯಾಗುತ್ತದೆ ಅದರಂತೆ ವಿಜಯದಶಮಿಯಂದು ಸಮಸ್ತ ಜನರ ಶ್ರೆಯಸ್ಸಿಗಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾಹೋಮ ನಡೆಸಲಾಯಿತು ಎಂದರು.
ಇದೆ ಸಂದರ್ಭದಲ್ಲಿ ಕನ್ಯಕಾ ಪೂಜೆಯನ್ನು ನೇರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ,ಶಂಕರ ಸೇವಾ ಸಮಿತಿಯ ಜೆ.ಕೆ.ಮಂಜುನಾಥ್, ಪುರಸಭೆ ಸದಸ್ಯೆ ಶಾಂತಮ್ಮ, ಶಿಕ್ಷಕಿ ಸುಧಾಮಣಿ, ಸತ್ಸಂಗ ಬಳಗದ ಸದಸ್ಯರು ಹಾಗು ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



