ಶ್ರೀನಿವಾಸಪುರ:ರಾಮಲಲ್ಲಾನ ಪ್ರಾಣಪ್ರತಿಷ್ಟೆ ನಡೆಯುವ ಜನವರಿ 22 ಹುಟ್ಟುವುದಕ್ಕೆ ಮುಂಚಿತವಾಗಿಯೇ ಶ್ರೀನಿವಾಸಪುರದಲ್ಲಿ ರಾಮನಾಮ ಜಪ ಶುರುವಾಗಿದೆ ಇಂದು ಭಾನುವಾರ ಅರಕೇರಿ ಶ್ರೀಕೋದಂಡರಾಮ ದೇವರ ಉತ್ಸವವನ್ನು ಇಂದು ಶ್ರೀನಿವಾಸಪುರ ಪಟ್ಟಣದ ರಥಬೀಧಿಗಳಲ್ಲಿ ಮೆರವಣಿಗೆ ಮಾಡಲಾಯಿತು ಅರಕೇರಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ನೇತೃತವದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಸಪ್ತಾಶ್ವ ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಕೋದಂಡರಾಮ ದೇವರನ್ನು ಕೂರಿಸಿ ಶೋಭಾಯಾತ್ರೆ ಮಾಡಲಾಯಿತು ಶೋಭಾಯಾತ್ರೆಯಲ್ಲಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಮುಖ್ಯಸ್ಥ ಡಾ.ರಮಾನಂದ ಸಾರಥ್ಯದಲ್ಲಿ ಮಹಿಳೆಯರು ಸೇರಿದಂತೆ ರಾಮಭಕ್ತರು ರಾಮನಾಮದ ಹಾಡುಗಳಿಗೆ ರಸ್ತೆಯಲ್ಲೆ ಹೆಜ್ಜೆ ಹಾಕಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಟೆ ಅಂಗವಾಗಿ ಅರಿಕೇರಿಯಲ್ಲಿ ನಾಳೆ ನಡೆಯುವ ಶ್ರೀ ರಾಮರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ರಾಮನ ಭಕ್ತರು ಆಗಮಿಸುವಂತೆ ರಾಜಣ್ಣ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹಾಲು ಡೈರಿ ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ,ನಂಬಿಹಳ್ಳಿರಮೇಶ್,ಶ್ರೀ ನಗರೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಕಪಾಲಿ ಮೋಹನ್,ರಾಜಶೇಖರ್,ಕಪಾಲಿ ಶಿವು,ಹರಿ,ಬಿಜೆಪಿ ಮುಖಂಡ ಲಕ್ಷ್ಮಣಗೌಡ,ಟಿ.ನಾರಯಣಸ್ವಾಮಿ,ಸತ್ಸಂಗ ಬಳಗದ ಲೊಕೇಶ್,ರಘು,ಗುರುಮೂರ್ತಿ,ರಾಘವೇಂದ್ರ ಮುಂತಾದವರು ಇದ್ದರು
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27