ಶ್ರೀನಿವಾಸಪುರ :ಪೆಟ್ರೋಲ್ ಹಾಗು ಡೀಸಲ್ ಬಳಕೆಯಿಂದ ಪ್ರಕೃತಿಯ ಮೇಲೆ ತೀವ್ರ ಪರಿಣಾಮ ಬಿರುತ್ತಿದೆ ಪ್ರಕೃತಿಯನ್ನು ಉಳಸಿಕೊಳ್ಳಲು ಪರ್ಯಾಯ ಇಂದನ ಬಳಕೆಗೆ ವಾಹನ ಬಳಕೆದಾರರು ಮುಂದಾಗಬೇಕಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಅವರು ಪಟ್ಟಣದ ಚಿಂತಾಮಣಿ ರಸ್ತೆಯ ರಾಜಧಾನಿ ಪೆಟ್ರೋಲ್ ಬಂಕ್ ನಲ್ಲಿ ಸಿಎನ್ಜಿ ಗ್ಯಾಸ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಜಿಪಿ ಸಿ.ಎನ್.ಜಿ ಗ್ಯಾಸ್ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ ಡೀಸೆಲ್, ಪೆಟ್ರೋಲ್ ಗೆ ಪರ್ಯಾಯವಾಗಿ ಸಿ.ಎನ್.ಜಿ ಬಳಕೆ ಹೆಚ್ಚುತ್ತಿದೆ ಎಂದರು ಸಿ.ಎನ್.ಜಿ ಮೀಥೇನ್ನಿಂದ ಕೂಡಿದ
ನೈಸರ್ಗಿಕ ಅನಿಲವಾಗಿದ್ದು ವಿಶೇಷವಾಗಿ ವಾತಾವರಣ ಕಲುಷಿತಗೊಳಿಸದೆ ಪರಿಣಾಮಕಾಯಾಗಿ ಬಳಸಬಹುದಾಗಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ 6 ಸಿ.ಎನ್.ಜಿ ಕೇಂದ್ರಗಳು ಪ್ರಾರಂಭವಾಗಲಿದ್ದು ಪ್ರಥಮ ಕೇಂದ್ರವಾಗಿ ಶ್ರೀನಿವಾಸಪುರದ ರಾಜಧಾನಿ ಬಂಕ್ ನಲ್ಲಿ ನಮ್ಮ ಎಜಿಪಿ ಸಂಸ್ಥೆಯ ಸಿಎನ್ಜಿ ಗ್ಯಾಸ್ ಬಂಕ್ನ್ನು ತೆರೆಯಲಾಗಿದ್ದು, ಅವಶ್ಯಕತೆ ಇರುವವರಿಗೆ
ಸಿ.ಎನ್.ಜಿ ಗ್ಯಾಸ್ ಕಿಟ್ ಅನ್ನು ಸಬ್ಸಿಡಿ ದರದಲ್ಲಿ ಕೊಡಲಾಗುವುದು . ಗ್ರಾಹಕರು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಿಜನಲ್ ಮುಖ್ಯಸ್ಥ ಕೆಆರ್ ವೆಂಕಟೇಶ್ ಮಾತನಾಡಿ ನಮ್ಮ ಕಂಪನಿಯಿಂದ ಗ್ರಾಹಕರ ಗ್ಯಾಸ್ಗೆ ಸಂಬಂದಿಸಿದ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ 24×7ಅವಧಿಯಲ್ಲಿ ಸೇವೆಗಳನ್ನು ನಮ್ಮ ಸಿಬ್ಬಂದಿಗಳು ಓದಗಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರಾಜಧಾನಿ ಸಂಸ್ಥೆ ಮುಖ್ಯಸ್ಥ ಮುಜಾಹಿದ್ ಅನ್ಸಾರಿ,ಪುರಸಭೆ ಉಪಾಧ್ಯಕ್ಷೆ ಆಯೀಷನಯಾಜ್, ಸದಸ್ಯ ಏಜಾಜ್ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಸದ್ಯಸ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಲಕ್ಷ್ಮಣರೆಡ್ಡಿ,ಮನು,ಎಪಿಜಿ ಗ್ಯಾಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ ಎಸ್.ಆರ್.ಅಶಿತ್ ಇನ್ನು ಹಲವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



