ಶ್ರೀನಿವಾಸಪುರ:ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕದ ವಿವಿಧ ಕನ್ನಡ ಹಾಗು ಇತರೆ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ರಾಜ್ಯ ಬಂದ್ಗೆ ಶ್ರೀನಿವಾಸಪುರದಲ್ಲಿ ಸ್ಪಂದನೆ ಸಿಗದೆ ಬಂದ್ ನಡೆಯಲೆ ಇಲ್ಲ.ಶ್ರೀನಿವಾಸಪುರ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತಾದರು ಶುಕ್ರವಾರ ಎಲ್ಲವೂ ಎಂದಿನಂತೆ ಮಾಮೂಲಾಗಿತ್ತು,ಸ್ಥಳೀಯವಾಗಿ ಯಾವುದೆ ಕನ್ನಡ ಹಾಗು ಇತರೆ ಸಂಘಟನೆಗಳು ಬಂದ್ ನಿರ್ವಹಣೆಗೆ ಮುಂದಾಗದ ಪರಿಣಾಮ ಮುಂಜಾನೆಯಿಂದಲೆ ಅಂಗಡಿ-ಮುಂಗಟ್ಟುಗಳನ್ನು ತೆರೆದಿದ್ದ ವ್ಯಾಪರಸ್ಥರು ವ್ಯಾಪರ ವಹಿವಾಟನ್ನು ನಡೆಸಿಕೊಂಡಿದ್ದರು,ತಿಂಡಿ ಹೋಟೆಲ್ಗಳು ಟೀ ಅಂಗಡಿಗಳು ತೆರೆದಿದ್ದವು,ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮಾಮೂಲಿನಂತೆ ಸಂಚಿರಿಸಿತಾದರೂ ಜನ ಸಂಚಾರ ಇಲ್ಲದ ಹಿನ್ನಲೆಯಲ್ಲಿ ಮಧ್ಯಾನದ ಹೊತ್ತಿಗೆ ಬಸ್ಸುಗಳ ಓಡಾಟ ನಿಲ್ಲಿಸಲಾಯಿತು.ಬಹುತೇಕ ಖಾಸಗಿ ಶಾಲೆಗಳು ಬಾಗಿಲು ತೆರೆಯಲಿಲ್ಲ, ಬ್ಯಾಂಕ್ ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿದರೆ, ಸದಾ ಗಿಜಗೂಡುತ್ತಿದ್ದ ತಾಲೂಕು ಕಚೇರಿ ಅವರಣದಲ್ಲಿ ಜನ ಸಂಚಾರ ಕಡಿಮೆ ಇದ್ದು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.ಪಟ್ಟಣದಲ್ಲಿ ಸರ್ಕಾರಿ ಶಾಲ-ಕಾಲೇಜುಗಳು ಬಾಗಿಲು ತೆಗೆತ್ತಿದ್ದಾರೂ ವಿಧ್ಯಾರ್ಥಿಗಳು ಬಾರದ ಹಿನ್ನಲೆಯಲ್ಲಿ ಮಧ್ಯಾನಃದ ಹೊತ್ತಿಗೆ ಬಾಗಿಲು ಹಾಕಲಾಯಿತು,ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ಇದ್ದು ವಿದ್ಯಾರ್ಥಿಗಳ ಹಾಜರಿ ಇತ್ತಾದರೂ ಶಿಕ್ಷಕರು ಉಪನ್ಯಾಸಕರ ಹಾಜರಾತಿ ಇರಲಿಲ್ಲ. ಇನ್ಸಪೇಕ್ಟರ್ ದಯಾನಂದ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬೀಗಿ ಪೋಲಿಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



