ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಲ್ಲಿ ನಿರುದ್ಯೊಗ ಸಮಸ್ಯೆ ನಿವಾರಣೆಗೆ ಪಟ್ಟಣಕ್ಕೆ ಹೊಂದಿಕೊಂಡಂತೆ ಕೈಗಾರಿಕ ಪ್ರದೇಶ ನಿರ್ಮಾಣ ಮಾಡಲು ಯೋಜನೆ ಸಿದ್ದಪಡಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ವಿಕ್ಷಿಸಿ ಮಾತನಾಡಿದ ಅವರು ತಾಲೂಕಿಗೆ ಕೈಗಾರಿಕೆಗಳು ಬಂದರೆ ಇಲ್ಲಿನ ನಿರುದ್ಯೊಗಿ ಯುವಕರ ಸಮಸ್ಯೆ ಬಗೆಹರೆಯಲು ಸಹಕಾರಿಯಾಗುತ್ತದೆ ಎಂದರು.
ತಾಲೂಕಿನ ಮುಳಬಾಗಿಲು ರಸ್ತೆ ಅಥಾವ ಪುಂಗನೂರು ರಸ್ತೆಯಲ್ಲಿ ಜಮೀನು ಗುರುತಿಸಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವ ಕುರಿತಾಗಿ ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೂಪು ರೇಷೆ ಸಿದ್ದಪಡಿಸುವುದಾಗಿ, ಮಾವು ಟಮ್ಯಾಟೊ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ನಿರ್ಮಾಣ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.
ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣ
ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ಕೆ ಸಂಸದ ಮುನಿಶಾಮಿ ತಮ್ಮ ನಿಧಿಯಿಂದ ಹಣ ನೀಡಲಿದ್ದು ಇದಕ್ಕೆ ಸಂಬಂದಿಸಿದಂತೆ ಜಮೀನು ನೀಡುವುದಾಗಿ ತಿಳಿಸಿದ ಶಾಸಕ ವೆಂಕಟಶಿವಾರೆಡ್ಡಿ ಪಟ್ಟಣದ ಜನರ ಕ್ರೀಡಾಚಟುವಟಿಕೆಗಾಗಿ ಅತ್ಯಾಧುನಿಕವಾಗಿ ಕ್ರೀಡಾಂಗಣ ಸರ್ವರೀತಿಯಲ್ಲೂ ನವೀಕರಣವಾಗುತ್ತಿದೆ ಹಾಗೆ ಸುಸಜ್ಜಿತ ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ಕೆ ಸದ್ಯದಲ್ಲಿಯೆ ಭೂಮಿ ಪೂಜೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ,ಲೋಕೋಪಯೋಗಿ ಇಲಾಖೆ ಅಭಿಯಂತರ ಟಿ.ನಾಗರಾಜ್,ಗುತ್ತಿಗೆದಾರರಾದ ಶಿವಾರೆಡ್ಡಿ,ಕಂಬಾಲಹಳ್ಳಿ ಶ್ರೀನಿವಾಸರೆಡ್ಡಿ,ಯುವ ಮುಖಂಡರಾದ ದುರ್ಗಾಪ್ರಸಾದ್,ಗುರುಮೂರ್ತಿ ಮುಂತಾದವರು ಇದ್ದರು.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27