ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ಅದೇಷ್ಟೊ ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಆಸರೆ ನೀಡಿ ಅನ್ನ ಶಿಕ್ಷಣ ನೀಡಿದ ಅವರು ಶ್ರೀ ಭೈರವೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಕರಾಗಿದ್ದ ಖ್ಯಾತ ಶಿಕ್ಷಣ ತಜ್ಞ,ಪರಿಸರ ಪ್ರೇಮಿ ಶ್ರೀನಿವಾಸಪುರ ತಾಲೂಕಿನಲ್ಲಿ ತ್ರಿದಾಹೋಹಿ ಪರಂಪರೆ ಹುಟ್ಟುಹಾಕಿದ್ದ ಇಮರಕುಂಟ ಶ್ರೀರಾಮರೆಡ್ಡಿ(84)ಮೇಷ್ಟ್ರು ಇನ್ನಿಲ್ಲ.ಹಲವಾರು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ತಡ ಸಂಜೆ ಹೃದಾಘಾತಕ್ಕೆ ಒಳಗಾಗಿದ್ದಾರೆ.
ಇಮರಕುಂಟ ಮೇಷ್ಟ್ರು ಎಂದು ಗ್ರಾಮೀಣ ಭಾಗದಲ್ಲಿ ಹೆಸರು ವಾಸಿಯಾಗಿದ್ದ ಶ್ರೀರಾಮರೆಡ್ಡಿ ಪತ್ನಿ ನಂಜಮ್ಮ,ಇಬ್ಬರು ಪುತ್ರರು ಒರ್ವ ಪುತ್ರಿ ಹಾಗು ದೊಡ್ಡ ಸಂಖ್ಯೆಯಲ್ಲಿ ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಕೋಲಾರದ ಕಲಾಂ ಅಂತಲೆ ಖ್ಯಾತರಾಗಿದ್ದ ಶ್ರೀರಾಮರೆಡ್ಡಿ ಹಲವಾರು ಅವಿಷ್ಕಾರಗಳಿಗೆ ರೂಪ ಕೊಟ್ಟಂತ ಮಹಾನ್ ವ್ಯಕ್ತಿ,ಸರ್ಕಾರಿ ಸೇವೆಯಲ್ಲಿ ಶಿಕ್ಷಕರಾಗಿ ಮೂರುವರೆ ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದ ಅವರು 24 ವರ್ಷಗಳ ಹಿಂದೆ ಭೈರವೇಶ್ವರ ಶಿಕ್ಷಣ ಸಂಸ್ಥೆ ಕಟ್ಟಿ ಬಾನೆತ್ತರಕ್ಕೆ ಬೆಳೆಸಿ ಜಗತ್ತೆ ನನ್ನ ಕುಟುಂಬ ಎಂದು ಕುಟುಂಬವನ್ನೆ ಮರೆತು ಶಿಕ್ಷಣ ಸಂಸ್ಥೆಯಲ್ಲೆ ಜೀವನ ಕಳೆಯುತ್ತಿದ್ದರು,ಶೈಕ್ಷಣಿಕ ಕ್ಷೇತ್ರವೆ ನನ್ನ ಬದುಕು ಎಂದು ಶಿಕ್ಷಕರಾಗಿ ಸುಮಾರು 55 ವರ್ಷಗಳ ಕಾಲ ಮಕ್ಕಳಿಗೆ ಪಾಠ ಹೇಳಿಕೊಡುತ್ತ ಮಕ್ಕಳೊಂದಿಗೆ ಮಗುವಾಗಿ ವಿದ್ಯಾರ್ಥಿಗಳ ಬದುಕಿಗೆ ಅಗತ್ಯ ಕೌಶಲ್ಯಗಳನ್ನು ಕಲಿಸುತ್ತಿದ್ದರು ಇವರಿಂದ ಪ್ರೇರಿಪಿತರಾದ ಹಲವಾರು ವಿದ್ಯಾರ್ಥಿಗಳು ಸ್ವಯಂ ಉದ್ಯೋಗಿಗಳಾಗಿ ಸಣ್ಣ-ಪುಟ್ಟ ಉದ್ಯಮಗಳನ್ನು ನಡೆಸುತ್ತಿದ್ದಾರೆ.ಹಲವಾರು ಮಂದಿ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ನೆಲೆಸಿದ್ದಾರೆ.
ಪ್ರಶಸ್ತಿಗಳ ಮಹಾಪೂರ
ಸರ್ಕಾರಿ ಶಿಕ್ಷಕರಾಗಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ,ಬಸವರಾಜು ಪ್ರತಿಷ್ಠಾನದ ಪ್ರಶಸ್ತಿ,ವೃಕ್ಷ ಮಿತ್ರ ಪ್ರಶಸ್ತಿ,ಶ್ರೀ ಆದಿಚುಂಚನಗಿರಿ ಕ್ಷೇತ್ರ ಕೊಡಮಾಡುವ ಚುಂಚಶ್ರೀ ಪ್ರಶಸ್ತಿ ಸೇರಿದಂತೆ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಅವರು ಇನ್ನು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.ಶ್ರೀನಿವಾಸಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



