ಶ್ರೀನಿವಾಸಪುರ:ತಾಲೂಕಿನ ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಹುಳ ಬಿದ್ದ ಅಕ್ಕಿಯಲ್ಲಿ ಅಡುಗೆ ಮಾಡಿದ್ದು ಅದನ್ನೇ ವಿದ್ಯಾರ್ಥಿಗಳು ತಿನ್ನುತ್ತಿದ್ದಾರೆಂಬ ಆರೋಪಕ್ಕೆ ಸಂಬಂದಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾರೆಡ್ಡಿ ಸ್ಪಂದಿಸಿದ್ದು ಅಕ್ಕಿಯಲ್ಲಿ ಉಳ ಬಿದ್ದಿಲ್ಲ ಸಾರಿಗೆ ಬಳಸುವ ಬೆಳೆಯಲ್ಲಿ ಮಾತ್ರ ಮೂಕುಳಗಳು ಬಂದಿದೆ ಅದು ಸಹ ಹೊಸದಾಗಿ ಬಂದಿರುವ ಸ್ಟಾಕ್ ನಲ್ಲಿ ಇಲ್ಲ ಹಳೆಯ ಸ್ಟಾಕ್ ನ ಬೆಳೆಯಲ್ಲಿ ಹುಳ ಇದ್ದು ಅದನ್ನು ಹಳೆಯ ಬೇಳೆಯ ಪೊಟ್ಟಣದ ಜೊತೆಯಲ್ಲಿ ಇಟ್ಟ ಪರಿಣಾಮ ಬೆಳೆ ಹಾಗು ಅಕ್ಕಿ ಮೂಟೆ ಮೇಲೂ ಹರಿದಾಡಿದೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ ಇದಕ್ಕೆ ಸಂಬಂದಿಸಿದಂತೆ ವರದಿ ನೀಡುವಂತೆ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಸೊಲೋಚನ ಅವರಿಗೆ ಸೂಚಿಸಲಾಗಿದೆ ಅವರು ಇಂದು ಶನಿವಾರ ಮುಂಜಾನೆಯೇ ಪೆಗಳಪಲ್ಲಿ ಶಾಲೆಗೆ ತೆರಳಿದ್ದಾರೆ ಅವರು ನೀಡುವ ವರದಿಯಂತೆ ಶಾಲಾ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಶ್ರೀನಿವಾಸಪುರದ ಪೆಗಳಪಲ್ಲಿ ಶಾಲೆ ಬಿಸಿಯೂಟಕ್ಕೆ ಹುಳ ಬಿದ್ದ ಅಕ್ಕಿ ಬಳಕೆ ವರದಿಗೆ ಬಿಇಒ ಸೂಚನೆ
ಸೋಮಯಾಜಲಹಳ್ಳಿ ಪಂಚಾಯಿತಿ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಘಟನೆ



