ಕೋಲಾರ:ಇದೇನು ಹೀಗಾಗ್ತಾ ಇದೆ ಕೋಲಾರದ ಆಡಳಿತ ವ್ಯವಸ್ಥೆ.ಎತ್ತ ಸಾಗುತಿದೆ ಕೋಲಾರದ ಸಂಸ್ಕಾರ, ಹಾಡು ಹಗಲೇ ಕಚೇರಿಯಲ್ಲಿ ಬಾಡೂಟದ ಪಾರಾಯಣ,ಕೆಲಸದ ಹೊತ್ತಿನಲ್ಲೇ ಬರ್ತಡೇ ಸೆಲಬರೇಷನ್,ಏನಾಗಿದೆ ಜಿಲ್ಲಾಡಳಿತಕ್ಕೆ ಎಂಬ ಸಾಲು ಸಾಲು ಪ್ರಶ್ನೆಗಳು ಜನರಿಂದ ಕೇಳಿಬರುತ್ತಿದೆ.ಪ್ರಶ್ನೆ ಮಾಡುತ್ತಿದ್ದ ಚಳುವಳಿಗಳ ತವರೂರು ಕೋಲಾರದಲ್ಲಿ ಆಡಳಿತ ಕುಸಿದು ಬಿದ್ದಿದಿಯಾ ವ್ಯವಸ್ಥೆ ಬಗ್ಗೆ ಯಾಕಿಷ್ಟು ಹಳಿ ತಪ್ಪುತ್ತಿದೆ ಯಾರಿಗೂ ಬೇಡವಾಯಿತ ಕೋಲಾರ ಜಿಲ್ಲೆ!ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಸರ್ಕಾರದ ಆದೇಶ ಇದ್ದರೂ ಕೋಲಾರ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದಿಯಾ? ಇದರ ಜೊತೆಗೆ ಸರ್ಕಾರಿ ಕಚೇರಿ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಬಾಡೂಟದ ಪಾರಾಯಣ ಹೊರಗೆ ಸಂವಿಧಾನ ಬದ್ದ ರಾಷ್ಟ್ರ ಲಾಂಚನದ ತ್ರಿವವರ್ಣ ಧ್ವಜ ಹಾರಾಟ ಪಂಚಾಯಿತಿ ಕಚೇರಿಯ ಒಳಗೆ ಭರ್ಜರಿ ಬಾಡೂಟ ಸವಿಧ ಅಧಿಕಾರಿಗಳು ನೌಕರರು.ಸರ್ಕಾರಿ ಕಚೇರಿಯಲ್ಲಿ ಕೆಕ್ ಕತ್ತರಿಸಿ ಸಂಭ್ರಮಕೋಲಾರ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೌಕರ ಹರೀಶ್ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಕೆಲಸದ ಅವಧಿಯಲ್ಲಿ ಸಾರ್ವಜನಿಕರ…
Author: Srinivas_Murthy
ನ್ಯೂಜ್ ಡೆಸ್ಕ್:ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಲಿಂಗ ರೂಪದಲ್ಲಿ ಅವತರಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿರುವ ಪುಣ್ಯ ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿದೆ ಎತ್ತರದ ಪರ್ವತ ಶ್ರೇಣಿಗಳು ನಿತ್ಯಹರಿದ್ವರ್ಣ ಕಾಡುಗಳ ನಡುವೆ ಕುಬ್ಜಾ ನದಿಯ ತಟದಲ್ಲಿ ಕಮಲಶಿಲೆ ಎಂಬ ಸುಂದರವಾದ ಊರಿನ ಮಧ್ಯಭಾಗದಲ್ಲಿ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ.ಇಲ್ಲಿನ ದೇವಾಲಯದ ವೈಶಿಷ್ಠತೆ ಏನು ಎಂದರೆ ಜಗನ್ಮಾತೆ ಶ್ರೀ ದುರ್ಗಾಮರಮೇಶ್ವರಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ ಲಿಂಗ ಸ್ವರೂಪಿ ಮಹಾಕಾಳಿ,ಸರಸ್ವತಿ ಮತ್ತು ಮಹಾಲಕ್ಷ್ಮಿ ದೇವಿಯ ಮೂರು ಶಕ್ತಿಗಳ ಸಂಗಮ ಎನ್ನುತ್ತಾರೆ.ಪ್ರಮುಖ ಶಕ್ತಿ ಆರಾಧನಾ ಕೇಂದ್ರಗಳಲ್ಲಿ ಒಂದಾಗಿರುವ ದೇವಾಲಯದಲ್ಲಿ ಲಿಂಗದ ರೂಪದ ಶಿಲೆ ಉದ್ಭವವಾಗಿದ್ದು ವಿಶೇಷ ಪೂಜೆಗಳು ಹಾಗು ಇಲ್ಲಿ ಪ್ರತಿನಿತ್ಯ ಚಂಡಿಕಾ ಹೋಮ ಹವನಗಳು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ.ಈ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ಪುನೀತರಾಗುತ್ತಾರೆ.ಕಮಲಶಿಲೆಯ ಇತಿಹಾಸಲಿಂಗರೂಪಿ ದರ್ಶನದ ಸಂದರ್ಭದಲ್ಲಿ ಆಸ್ಥಾನದ ನರ್ತಕಿ ಪಿಂಗಳಾ ಎಂಬ ಸದ್ರೂಪಿ ಚಲುವೆ ಕೈಲಾಸ ಪರ್ವತದ ಮೇಲೆ ಶಿವ ಮತ್ತು ಪಾರ್ವತಿ ದೇವಿಯ…
ಶ್ರೀನಿವಾಸಪುರ:ಇದು ಪ್ರಪಂಚ ಪ್ರಸಿದ್ಧ ಮಾವಿನ ಕಾಯಿ ಮಾರುಕಟ್ಟೆ ಭಾರತದ ಬಹುತೇಕ ಮಾವು ಮಾರುಕಟ್ಟೆಗಳಿಗೆ ನೇರಸಂಪರ್ಕ ಹೊಂದಿರುವಂತ ಬೃಹತ್ ಮಾವು ಮಾರುಕಟ್ಟೆ ಆದರೆ ಇಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವ ಸೌಜನ್ಯ ಕರ್ನಾಟಕ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಇಲ್ಲದಿರುವುದು ದುರಂತ ಎನ್ನಬಹುದು.ರಾಷ್ಟ್ರೀಯ ಹೆದ್ದಾರಿ 64 ಶ್ರೀನಿವಾಸಪುರ-ಚಿಂತಾಮಣಿ ರಸ್ತೆಗೆ ಹೊಂದಿಕೊಂಡಂತೆ ಸುಮಾರು 19.5 ಎಕರೆಯಲ್ಲಿ ಖಾಸಗಿ ವ್ಯಕ್ತಿಗಳು 7.5 ಅತಿಕ್ರಮಿಸಿಕೊಂಡಿದ್ದು ಅದರಲ್ಲಿ ಸುಮಾರು 2 ಎಕರೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವಾಪಸ್ಸು ಪಡೆದರಾದರು ಉಳಿದ 5.5 ಎಕರೆ ಬಲಿಷ್ಟ ಖಾಸಗಿ ವ್ಯಕ್ತಿಗಳಿಂದ ಬಿಡಿಸಿ ಕೊಳ್ಳಲಾಗದೆ ಬಿಟ್ಟಿದ್ದಾರೆ ಉಳಿದ 10 ಎಕರೆ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು ಮೂರು ಎಕರೆಯಲ್ಲಿ ಟಮ್ಯಾಟೊ ಹಾಗು ದಿನಹಿ ತರಕಾರಿ ಹರಾಜು ಹೊರತು ಪಡಿಸಿದರೆ ಉಳಿದ ಎಲ್ಲಾ ಭಾಗದಲ್ಲಿ ಮ್ಯಾಂಗೊ ಸಿಸನಬಲ್ ಕೃಷಿ ಉತ್ಪನ್ನ ಮಾರುಕಟ್ಟೆ ನಡೆಯುತ್ತದೆ,ಮಾವಿನ ಫಸಲಿನ ಸಂದರ್ಭದಲ್ಲಿ ಮಾತ್ರ ಬಿಝಿ ಉಳಿದಂತೆ ಯಾವುದೆ ಗಿಜಗುಟ್ಟುವ ವಹಿವಾಟು ನಡೆಯುವುದಿಲ್ಲಮೂಲಭೂತ ಸೌಕರ್ಯಗಳು ಇಲ್ಲದ ಮಾರುಕಟ್ಟೆಮಾವಿನ ಸುಗ್ಗಿಯಲ್ಲಿ ಮಾತ್ರ…
ಕೋಲಾರ:ಕೋವಿಡ್ ನಂತರದಲ್ಲಿ ಆಗುತ್ತಿರುವ ಹೃದಯಾಘಾತಗಳಿಗೆ ಕೊರೊನಾ ಲಸಿಕೆಯೇ ಇದಕ್ಕೆ ನಿಶ್ಚಿತ ಕಾರಣವಲ್ಲ ಎಂದು ಜಾಲಪ್ಪ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮುರಳಿ ಬಾಬು ಹೇಳಿದರು ಅವರು ಕೋಲಾರ ನಗರದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆರ್.ಎಲ್.ಜಾಲಪ್ಪ ನಾರಾಯಣ ಹೃದಯಾಲಯ 14 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆದ್ಯತೆ ಮೇಲೆ ಹಾಗೂ ರಿಯಾಯಿತಿ ದರದ ಚಿಕಿತ್ಸೆಗಾಗಿ ಪ್ರಿವಿಲೇಜ್ ಕಾರ್ಡ್ (ಹೆಲ್ತ್ ಕಾರ್ಡ್) ಅನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿಜುಲೈ 1ರಂದಿನ ಪತ್ರಿಕಾ ದಿನಾಚರಣೆ ಕೊಡುಗೆಯಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತವಾಗಿ ಕೋಲಾರ ನಗರದ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ನೀಡಲಾಗಿದ್ದು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯ ಘಟಕವು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 8 ತಿಂಗಳ ಮಕ್ಕಳಿಂದ ಹಿಡಿದು 72 ವರ್ಷ ವಯೋವೃದ್ಧರವರೆಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆ ನೀಡಿದ್ದೇವೆ. 11 ಸಾವಿರ ಆ್ಯಂಜಿಯೊಗ್ರಾA, 8 ಸಾವಿರ…
ನ್ಯೂಜ್ ಡೆಸ್ಕ್: ಸುಮಾರು ಎರಡು ವರೆ ವರ್ಷಗಳ ಹಿಂದೆ ಈಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಪಥ ಮಾಡಿದ್ದರು ಮತ್ತೆ ನಾನು ಮುಖ್ಯಮಂತ್ರಿ ಆಗುವವರಿಗೂ ಅಸಂಬ್ಲಿಗೆ ಕಾಲಿಡಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ಅವರು ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗು ಮಂತ್ರಿಗಳ ವಿರುದ್ದ ತೀವ್ರಧಾಟಿಯಲ್ಲಿ ವಾಗ್ದಾಳಿ ನಡೆಸಿ ನನ್ನ ಹಾಗು ನನ್ನ ಪತ್ನಿಯನ್ನು ಸಾರ್ವಜನಿಕವಾಗಿ ಕೇವಲವಾಗಿ ಮಾತನಾಡುವ ಮೂಲಕ ನನ್ನ ವೈಯುಕ್ತಿಕ ಜೀವನದ ಬಗ್ಗೆ ಅಸಹ್ಯಕರವಾಗಿ ವ್ಯಂಗ್ಯವಾಗಿ ಮಾತನಾಡಿ ಅಪಮಾಸಿದ್ದಾರೆ.ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಸುತ್ತಿಲ್ಲ ಇದು ಗೌರವ ಸಭೆ ಅಲ್ಲ, ಕೌರವರ ಸಭೆ ಎಂದು ಕಣ್ಣಿರಿಡುತ್ತ ಅಸೆಂಬ್ಲಿಯಿಂದ ಹೊರಬಂದಿದ್ದರು.ಅಂದು ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೆಶಂ ಪಕ್ಷ ಕೆವಲ 23 ಸೀಟುಗಳನ್ನು ಸ್ಥಾನಗಳಿಗೆ ಸೀಮಿತವಾಗಿತ್ತು.ಈದಾದ ನಂತರ ರಾಜಕೀಯ ಬೆಳವಣಿಗೆಯಲ್ಲಿ ಭ್ರಷ್ಠಾಚಾರದ ಆರೋಪದಲ್ಲಿ ಚಂದ್ರಬಾಬು ನಾಯ್ಡು ಬಂಧನವಾಯಿತು ಇದನ್ನು ವಿರೋಧಿಸಿ ಆಂಧ್ರದಲ್ಲಿ ಅಷ್ಟೆ ಅಲ್ಲ ತೆಲಂಗಾಣ ತಮಿಳುನಾಡು ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ತೆಲಗುದೆಶಂ ಕಾರ್ಯಕರ್ತರು ಹಾಗು ದಿವಂಗತ ಎನ್.ಟಿ.ಆರ್…
ನ್ಯೂಜ್ ಡೆಸ್ಕ್:ಕರ್ನಾಟಕದ ಹೆಮ್ಮೆಯ HMT ಸಂಸ್ಥೆಗೆ ಪುನರ್ ವೈಭವ ತರುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆಗಳ ಸಚಿವ ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಇದಕ್ಕೆ ಪೂರಕ ಎನ್ನುವಂತೆ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮೆಷಿನ್ ಅಂಡ್ ಟೂಲ್ಸ್ (HMT) ನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನಾರೋಗ್ಯದ ಪರಿಸ್ಥಿತಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ HMTಯನ್ನು ಪುನಶ್ಚೇತನಗೊಳಿಸಲು ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸಂಸ್ಥೆಯ ಹಣಕಾಸಿನ ಬಿಕ್ಕಟ್ಟು,ಎದುರಿಸುತ್ತಿರುವ ಮೊಕದ್ದಮೆಗಳು,ವಿವಿಧ ರಿತಿಯ ಸಮಸ್ಯೆಗಳು ಮತ್ತು ಒಟ್ಟಾರೆ ನಷ್ಟ ಸೇರಿದಂತೆ ವಿವರಿಸಿದ್ದಾರೆ ಎನ್ನಲಾಗಿದ್ದು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯತೆಯನ್ನು ಅವರು ವಿವರಿಸಿದ್ದಾರೆ. ಒಂದು ಕಾಲದಲ್ಲಿ ಘನ ವೈಭವದಲ್ಲಿದ್ದ HMT ಪ್ರಸ್ತುತ ಈಗಿನ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಎಚ್ ಡಿ ಕುಮಾರಸ್ವಾಮಿ ಸಂಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ಶಕ್ತಿ ತುಂಬಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು…
ಶ್ರೀನಿವಾಸಪುರ:ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೋಲಿಸರು ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದವರನ್ನು ಬಂಧಿಸಿ 4 ದ್ವಿಚಕ್ರ ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.ಶ್ರೀನಿವಾಸಪುರ ತಾಲ್ಲೂಕಿನ ಅಲಂಬಗಿರಿ ಗ್ರಾಮದ ಸಮೀಪ ಮಾವಿನ ತೋಟದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್ ನೇತೃತ್ವದಲ್ಲಿ ಶ್ರೀನಿವಾಸಪುರ ಪೋಲಿಸ್ ಸರ್ಕಲ್ ಇನ್ಸಪೇಕ್ಟರ್ ಮೊಹಮದ್ ಗೊರವನಕೊಳ್ಳ,ಮುಳಬಾಗಿಲು ಗ್ರಾಮಾಂತರ ಪಿ.ಎಸ್.ಐ ವಿಠ್ಠಲ್ ತಳವಾರ್.ರಾಯಲ್ಪಾಡ್ ಪಿ.ಎಸ್.ಐ ಯೋಗಿಶ್ ಕುಮಾರ್ ತಂಡ ದಾಳಿ ನಡೆಸಿ ನೇತೃತ್ವದಲ್ಲಿ ದಾಳಿ ಮಾಡಿದ್ದು ಏಳು ಮಂದಿ ಇಸ್ಪೀಟ್ ಆಡುತ್ತಿದ್ದವರನ್ನು ಬಂಧಿಸಿರುತ್ತಾರೆ ಇಸ್ಪೀಟ್ ಆಟದಲ್ಲಿ ಪಣಕ್ಕಿಟ್ಟಿದ್ದ 42200/- ಹಣ ಹಾಗು ಅಲ್ಲಿದ್ದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಬಂದಿತ ಆರೋಪಿಗಳಲ್ಲಿ ಚಿಂತಾಮಣಿ,ಶ್ರೀನಿವಾಸಪುರ ತಾಲೂಕಿನವರು ಇದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.ತಾಲೂಕಿನಲ್ಲಿ ಇತ್ತಿಚಿಗೆ ಇಸ್ಪೀಟ್ ದಂದೆ ಎಗ್ಗು ಸಿಗ್ಗಿಲ್ಲದೆ ಎಲ್ಲಂದರಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ತೀವ್ರಧಾಟಿಯಲ್ಲಿ ಆರೋಪಿಸುತ್ತಾರೆ.
ನ್ಯೂಜ್ ಡೆಸ್ಕ್:ಅಪ್ಪಟ ಕನ್ನಡ ಪ್ರತಿಭೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಮಗಳ ಮದುವೆ ಚನೈ ನಗರದಲ್ಲಿ ಅದ್ದೂರಿಯಾಗಿ ನೇರವೇರಿದೆ.ನಟ ಅರ್ಜುನ್ ಸರ್ಜಾ ಮಗಳು,ನಟಿ ಐಶ್ವರ್ಯ ಅರ್ಜುನ್ ಮತ್ತು ತಮಿಳು ಸಿನಿಮಾ ರಂಗದ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಯುವ ನಾಯಕ ಉಮಾಪತಿ ಅವರೊಂದಿಗೆ ನಟಿ ಐಶ್ವರ್ಯಾ ಅರ್ಜುನ್ ಸರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಅರ್ಜುನ್ ಸಂಬಂಧಿಕರು ಹಾಗೂ ಕೆಲ ಗಣ್ಯರ ಸಮ್ಮುಖದಲ್ಲಿ ಈ ಮದುವೆ ನಡೆದಿರುವುದು ವಿಶೇಷ.ಚೆನ್ನೈನ ಗೇರುಗಂಬಕ್ಕಂನಲ್ಲಿ ಅರ್ಜುನ್ ಸರ್ಜಾ ತಮ್ಮ ಇಷ್ಟ ದೇವರು ಹನುಮಂತನ ಆಲಯ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಕಟ್ಟಿಸಿದ್ದು ಅಲ್ಲೇ ಮಗಳ ಮದುವೆ ಜೂನ್ 10 ರಂದು ನಡೆದಿದೆ,ಇದೇ ತಿಂಗಳ 14ರಂದು ಚೆನ್ನೈನ ಲೀಲಾ ಪ್ಯಾಲೇಸ್ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸೆಲೆಬ್ರಿಟಿಗಳನ್ನು ಅರ್ಜುನ್ ಸರ್ಜಾ ಆಹ್ವಾನಿಸಲಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ನಡೆದಿತ್ತು.ಈ ಜೋಡಿ ಅಕ್ಟೋಬರ್ 28, 2023 ರಂದು ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ವಿಶಾಲ್…
ಶ್ರೀನಿವಾಸಪುರ:ಬೆಂಗಳೂರು ಸೆಂಟ್ರೆಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರನ್ನು ಅವರ ಕಛೇರಿಯಲ್ಲಿ ಭೇಟಿಮಾಡಿದ ಶ್ರೀನಿವಾಸಪುರದ ಕೈವಾರ ತಾತಯ್ಯ ಬಳಗದ ಯುವಕರು ಶುಭಾಶಯ ಕೋರಿದ್ದಾರೆ.ಈ ಸಂದರ್ಭದಲ್ಲಿ ಶ್ರೀನಿವಾಸಪುರ ಪುರಸಭೆ ಸದಸ್ಯ ಭಾಸ್ಕರ್ ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಿ. ಸಿ. ಮೋಹನ್ ಅವರು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದು ಇದು ಬಲಿಜ ಸಾಮಜಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.ಬಲಿಜ ಸಮಾಜದ ಯುವಕರಾದ ಬಿ.ಎಲ್.ದುರ್ಗಾಪ್ರಸಾದ್,ಹೆಮಂತ್ ಕುಮಾರ್ ಮುಂತಾದವರು ಇದ್ದರು.
ಕೋಲಾರ:ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ, ಯುಕವರಿಗೆ ಉದ್ಯೋಗ ಸೃಷ್ಟಿಸಿ ಕುರಿತಂತೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಮೊದಲ ಆಧ್ಯತೆಯನ್ನು ನೀಡುವುದಾಗಿ ಸಂಸದ ಮಲ್ಲೇಶ್ಬಾಬು ಹೇಳಿದರು.ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಅವರು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರ ಜನತೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಗೌರ್ಹಾನಿತವಾಗಿ ನಿಭಾಯಿಸುತ್ತೇನೆ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಅವರ ಜೊತೆ ಇದ್ದು ಅವರ ಕಾರ್ಯಶೈಲಿಯಂತೆ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವುದಾಗಿ ತಿಳಿಸಿದರು.ಕುಮಾರಸ್ವಾಮಿಯವರಿಗೆ ಯಾವ ಖಾತೆ ನೀಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ನೀರಾವರಿ ಯೋಜನೆಗಳು ಅನುಷ್ಠನಗೊಳಿಸಲು ಸೂಕ್ತವಾದ ಸಚಿವ ಸ್ಥಾನ ನೀಡಿದರೆ ಉತ್ತಮ ಎಂದು ತಿಳಿಸಿದರು.ಕಳೆದ 5 ವರ್ಷಗಳಲ್ಲಿ ಬಿಜೆಪಿ ಸಂಸದರಾಗಿದ್ದ ಎಸ್ ಮುನಸ್ವಾಮಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಸಮಯದ ಅಭಾವದಿಂದ…


