ಶ್ರೀನಿವಾಸಪುರ:ಸ್ವಾತಂತ್ರ ಹೋರಾಟಗಾರರನ್ನು ನಿರ್ಲಕ್ಷಿಸಿ ಸ್ಥಳೀಯ ಸಂಪ್ರದಾಯ ಮುರಿದು ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ದೇಶಾದ್ಯಂತ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಯೋಜಿಸುವುದು ಅದರಲ್ಲಿ ಸ್ವಾತಂತ್ರ ಹೋರಾಟಗಾರರ ಕುಟುಂಬಗಳ ಸದಸ್ಯರನ್ನು ಪಾಲ್ಗೋಳ್ಳಲು ಅವಕಾಶ ನೀಡುವುದು ದೇಶದ ಸಂಪ್ರದಾಯ ಹಾಗೆ ಇದು ಶ್ರೀನಿವಾಸಪುರದಲ್ಲಿ ಮೊದಲಿನಿಂದಲೂ ಇರುವಂತ ಪದ್ದತಿಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಹಿಂದೊಮ್ಮೆ ರಾಜ್ಯಪಾಲರ ಭವನಕ್ಕೂ ಶ್ರೀನಿವಾಸಪುರದ ಸ್ವಾತಂತ್ರ ಹೋರಾಟಗಾರರನ್ನು ಅಹ್ವಾನಿಸಿದ್ದು ಇತಿಹಾಸ ಈ ಬಾರಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಆಯೋಜನೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ಹೋರಾಟಗಾರರ ಕುಟುಂಬಸ್ಥರನ್ನು ನಿರ್ಲಕ್ಷಿಸಿ ಕಾರ್ಯಕ್ರಮ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿಮರ್ಶಗೆ ಒಳಗಾಗಿದೆ.ಇದುವರಿಗೂ ನಡೆದಂತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೆ ಸ್ವತಃ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಸಿ ಸ್ವಾತಂತ್ರ್ಯ ಹೋರಾಟದ ಅನುಭವಗಳನ್ನು ಸಾರ್ವಜನಿಕರಿಗೆ ಭಾಷಣದ ಮೂಲಕ ತಿಳಿಸಲು ಅವಕಾಶ ಕಲ್ಪಿಸಿ ಗೌವರವಿಸುತ್ತಿದ್ದರು ಹೋರಾಟಗಾರರು ಕಾಲವಾದ ನಂತರದಲ್ಲಿ ಸ್ಥಳೀಯವಾಗಿ ಇದ್ದಂತ ಸ್ವಾತಂತ್ರ್ಯ ಹೋರಾಟಗಾರ…
Author: Srinivas_Murthy
ನ್ಯೂಜ್ ಡೆಸ್ಕ್:ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ನಡೆದಿರುವ ಸಾಮೂಹಿಕ ಹತ್ಯಾಚಾರ ದೇಶದಲ್ಲಿ ದೊಡ್ದ ಮಾಡಿದ್ದು ಅದು ಮಾಸುವ ಮುನ್ನವೆ ಉತ್ತರಪ್ರದೇಶದಲ್ಲಿ ಒಂಟಿಯಾಗಿ ಹೋಗುತ್ತಿದ್ದ ನರ್ಸ್ ಮೇಲೆ ಹಲ್ಲೆ ನಡೆಸಿ ನಂತರ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಧಾರುಣ ಘಟನೆ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶದ ಬಿಲಾಸಪುರ ಪೊಲೀಸರ ಪ್ರಕಾರ ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿ ಬಳಿಯ ತನ್ನ ಮನೆಗೆ ಹಿಂದಿರುಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ. 33 ವರ್ಷದ ಮಹಿಳೆ ತನ್ನ 11 ವರ್ಷದ ಮಗಳೊಂದಿಗೆ ಬಿಲಾಸ್ಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದು ಅವರು ರುದ್ರಪುರದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಜುಲೈ 30ರಂದು ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿರುವಾಗ ಘಟನೆ ನಡೆದಿದೆ.ರಾತ್ರಿಯಾದರು ಮನೆಗೆ ಬಾರದೆ ಇದ್ದ ಕಾರಣ ಮೃತಳ ಸಹೋದರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಎಂಟು ದಿನಗಳ ನಂತರ ದಿಬ್ದಿಬಾ…
ನ್ಯೂಜ್ ಡೆಸ್ಕ್:ಪ್ರತಿ ಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಒಂದು ಭಾಗವಾಗಿಬಿಟ್ಟಿದೆ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ರಾತ್ರಿ ಮಲಗುವತನಕ ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು.ಬಾತ್ ರೂಮ್ ಗೆ ಹೋದರೂ ಸರಿ ಫೋನ್ ತೆಗೆದುಕೊಂಡು ಹೋಗಿ ಕಮೋಡ್ ಮೇಲೆ ಕೂತು ಪೋನ್ ಬಳಸುವಂತವರಿದ್ದಾರೆ. ಕಮೋಡ್ ಮೇಲೆ ಕೂತು ಸಮಯ ಕಳೆದರೆ, ಹಲವಾರು ರಿತಿಯ ಸೋಂಕುಗಳಿಗೆ ಒಳಗಾಗುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.ಶೌಚಾಲಯ ಸೇರಿದಂತೆ ಸ್ನಾನಗೃಹದಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಹೊತ್ತು ಇರಬೇಡಿ ಏಕೆಂದರೆ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತರೆ, ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬ ಎಚ್ಚರಿಕೆ ನೀಡಿರುತ್ತಾರೆ.ಶೌಚಾಲಯದಲ್ಲಿ ನಮ್ಮ ದೇಹದ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ಏಕೆಂದರೆ ಟಾಯ್ಲೆಟ್ ಸೀಟಿನಲ್ಲಿ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಸೊಂಟದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬೆನ್ನುನೋವಿನ ಸಮಸ್ಯೆಗೆ ಕಾರಣವಾಗುತ್ತದೆ ನೋವು ಹೆಚ್ಚಾದರೆ, ಇನ್ನಿತರೆ ಸಮಸ್ಯೆಗಳು ಕಾಡುತ್ತದೆ ಸಮರ್ಪಕವಾಗಿ ನಡೆಯಲು ಆಗದ ಸ್ಥಿತಿ ತಲುಪುವ ಅವಕಾಶ ಇರುತ್ತದೆ ಸ್ನಾಯುಗಳಲ್ಲಿ ಊತ ಮತ್ತು ಸೆಳೆತದ ಸಮಸ್ಯೆಗಳ ಉಂಟಾಗಬಹುದು…
ನ್ಯೂಜ್ ಡೆಸ್ಕ್:ಜಾಗತಿಕ ಮಟ್ಟದಲ್ಲಿ ಔಷಧಿ ಸಸ್ಯಗಳ ಕುರಿತಾಗಿ ಬಹುರಾಷ್ಟ್ರೀಯ ಸಂಸ್ಥೆಯಾಗಿ ರೂಪಗೊಂಡಿರುವ ಬೆಂಗಳೂರು ಮೂಲದ ಸಮಿ-ಸಬಿನ್ಸಾ ಗ್ರೂಪ್ ಕಂಪನಿ ತನ್ನ ನಿರ್ವಹಣಾ ತಂಡಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶ್ರೀನಿವಾಸಪುರ ಮೂಲದ ಡಾ.ದೇವರಾಜ್ ರೆಡ್ಡಿ ಅವರನ್ನು ಘೋಷಿಸಿದೆ. “ಸಮಿ-ಸಬಿನ್ಸಾ ಗ್ರೂಪ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬಹು ಎತ್ತರಕ್ಕೆ ಬೆಳೆದಿದೆ,ಸಮಿ ಸಬಿನ್ಸಾ ಗುಂಪು ಸಂಶೋಧನಾ ಆಧಾರಿತ ಜಾಗತಿಕ (MNC) ಹರ್ಬಲ್ ಔಷಧ ತಯಾರಿಕಾ ಸಂಸ್ಥೆಯಾಗಿದ್ದು ಸುಮಾರು 18 ದೇಶಗಳಲ್ಲಿ ಕಾರ್ಯಚಟುವಟುವಟಿಕೆ ವಿಸ್ತರಿಸಿದೆ, ಗುಣಮಟ್ಟದ ಸಸ್ಯಧಾರಿತ ಉತ್ಪನ್ನಗಳಿಂದ ವಿಶ್ವಾದ್ಯಂತ ತನ್ನದೆ ಆದಂತ network ಹೊಂದಿದೆ. ಡಾ.ದೇವರಾಜ್ ರೆಡ್ಡಿ ಔಷಧಿ ಸಸ್ಯಗಳ ಕುರಿತಾಗಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಜಾಗತಿಕ B2B ಮಾರುಕಟ್ಟೆಯಲ್ಲಿ ಪ್ರಮಾಣಿತ ಗಿಡಮೂಲಿಕೆಗಳ ಸಾರಗಳು ಮತ್ತು ಸಂಶ್ಲೇಷಿತ ಅಣುಗಳ ತಯಾರಿಕೆಗೆ ಸಂಬಂಧಿಸಿದ ಗಮನಾರ್ಹ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.ಉತ್ಪಾದನೆ ಮತ್ತು ಗುಣಮಟ್ಟದ ಕಾರ್ಯಾಚರಣೆಗಳ ಯೋಜನೆಗಳನ್ನು ಅಭಿವೃದ್ಧಿಪಡಿದ್ದಾರೆ.ಇವರು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿರುತ್ತಾರೆ.ಬೆಂಗಳೂರು ಪೀಣ್ಯದಲ್ಲಿನ ಸಮಿ-ಸಬಿನ್ಸಾ ಗ್ರೂಪ್ನ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯಚಟುವಟಿಕೆ ಇದ್ದು ಎಲ್ಲಾ ಉತ್ಪನ್ನಗಳು,…
ಶ್ರೀನಿವಾಸಪುರ:ತಾಲೂಕಿನ ಮಣಿಗಾನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಒಟ್ಟು 12 ನಿರ್ದೇಶಕರು ಆಯ್ಕೆಯಾಗಿದ್ದು ಇದರಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರರಕ್ಕೆ ಬಂದಿದೆ.ಮಣಿಗಾನಹಳ್ಳಿ ಶ್ರೀನಿವಾಸ್ ರೆಡ್ಡಿ, ಕಿರುವಾರ ಲಕ್ಷ್ಮಣರೆಡ್ಡಿ, ತಿಮ್ಮಸಂದ್ರ ನಾರಾಯಣಸ್ವಾಮಿ, ತಿಮ್ಮಸಂದ್ರ ಬೈರೆಡ್ಡಿ , ಆಲವಾಟ ವೆಂಕಟೇಶ್ ರೆಡ್ಡಿ ಆಯ್ಕೆಯಾಗಿದ್ದು ಹಿಂದುಳಿದ ವರ್ಗ “ಎ” ಕ್ಷೇತ್ರದಿಂದ ಆರಿಕುಂಟೆ ಚಿಕ್ಕರಾಮಪ್ಪ, ಹಿಂದುಳಿದ ವರ್ಗ “ಬಿ” ಕ್ಷೇತ್ರದಿಂದ ಬಂಡಪಲ್ಲಿ ಸುರೇಶ್ ರೆಡ್ಡಿ , ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜೆ ವಿ ಕಾಲೋನಿಯ ಲಕ್ಷ್ಮೀದೇವಮ್ಮ , ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಣಿಗಾನಹಳ್ಳಿ ಅಂಜಪ್ಪ,ಮಹಿಳೆ ಕ್ಷೇತ್ರದಿಂದ ದೊಡಮಲದೊಡ್ಡಿ ವಿಜಯಮ್ಮ, ಹಾಗು ಆರಿಕುಂಟೆ ಸುಕನ್ಯ, ಸಾಲಗಾರರಲ್ಲದ ಕ್ಷೇತ್ರದಿಂದ ಮಣಿಗಾನಹಳ್ಳಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಒಟ್ಟು 12 ನಿರ್ದೇಶಕರ ಪೈಕಿ 11 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೆ ಆಯ್ಕೆಯಾಗಿದ್ದು ಒರ್ವ ನಿರ್ದೇಶಕ ಮಾತ್ರ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೇಸ್ ಮುಖಂಡರು…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯ ಇಲ್ಲದೆ ಶ್ರೀನಿವಾಸನ ಭಕ್ತರು ಇಲ್ಲಿ ಪರಿತಪಿಸುತ್ತಿದ್ದರು,ಈಗ ಭಕ್ತರ ಬಕುತಿಗೆ ದೇವ ದೇವ ಶ್ರೀನಿವಾಸ ಒಲಿದಿದ್ದಾನೆ, ಶ್ರೀನಿವಾಸಪುರ ಪಟ್ಟಣದ ವಲ್ಲಭಾಯ್ ರಸ್ತೆಯ ಕಟ್ಟೆಕೆಳಗಿನ ಪಾಳ್ಯದಲ್ಲಿ ಶ್ರೀ ನೀಳಾ ಮತ್ತು ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯ ನೂತನ ಶಿಲಾ ಬಿಂಬದೊಂದಿಗೆ ಜಿರ್ಣೋದ್ಧಾರವಾಗಿ ಇಂದು ಶ್ರಾವಣದ ಪ್ರಥಮ ಶುಕ್ರವಾರ ವೇಧಘೋಷಗಳೊಂದಿಗೆ ಪಂಚಸೂತ್ರಗಳೊಂದಿಗೆಮೂಲಮೂರ್ತಿಗಳಿಗೆ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿ ಲೋಕಾರ್ಪಣೆ ಮಾಡಲಾಯಿತು.ದೇವಾಲಯದ ಆವರಣದಲ್ಲಿ ಶ್ರೀ ಅಭಯಾಂಜನೇಯಸ್ವಾಮಿ,ಮಹಾಗಣಪತಿ ಮತ್ತು ಗರುಡ ದೇವರುಗಳು ಸೇರಿದಂತೆ ಶ್ರೀನಿವಾಸ ದೇವರ ದ್ವಾರಪಾಲಕರಾದ ಜಯ-ವಿಜಯ ವಿಗ್ರಹಗಳ ನೂತನ ಶಿಲಾ ಬಿಂಬಗಳ ಪ್ರತಿಷ್ಠಾಪನೆಯಾಗಿದೆ.ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಹೋಮ ಹವನ ಆಯೋಜಿಸಲಾಗಿತ್ತು. ದೇವಾಲಯ ಜಿರ್ಣೋದ್ಧಾರ ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್,ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್,ಕೈವಾರ ಕ್ಷೇತ್ರ ಮಠದ ಸಂಚಾಲಕ ಬಾಲಕೃಷ್ಣ ಭಾಗವತರ್,ಬಿ.ಎಲ್. ಕುಟುಂಬದ ಹಿರಿಯ ಸದಸ್ಯರಾದ ಬಿ.ಎಮ್.ರಾಮಚಂದ್ರಯ್ಯ, ಬಿ.ಎಲ್.ಸೂರ್ಯನಾರಾಯಣ, ಬಿ.ಎಂ.ಪ್ರಕಾಶ್, ಸ್ಥಳೀಯ…
ಬೆಂಗಳೂರು:ಆಂಧ್ರದ ಉಪಮುಖ್ಯಮಂತ್ರಿ ಹಾಗು ಖ್ಯಾತ ನಟ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಔನೊಪಚಾರಿಕವಾಗಿ ಮಾತನಾಡಿದ್ದಾರೆ. ಆಂಧ್ರ ಪ್ರದೇಶ ಚುನಾವಣೆ ಗೆಲುವಿನ ಹಾಗೂ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಪವನ್ ಅವರಿಗೆ ಸಿಎಂ ಶುಭಾಶಯ ತಿಳಿಸಿದ್ದಾರೆ.ಆನೆ ಮಾನವ ಸಂಘರ್ಷದ ಸಭೆಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾನವ ಆನೆ ಸಂಘರ್ಷ ನಿರ್ವಹಣೆ ಸಮ್ಮೇಳನದ ಕುರಿತಾಗಿ ಆಂಧ್ರ ಅರಣ್ಯ ಇಲಾಖೆ ಸಚಿವರು ಆಗಿರುವ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು.ಆಗಸ್ಟ್ 12 ಕ್ಕೆ ಸಮ್ಮೇಳನಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಆನೆ ಹಾವಳಿ ತಪ್ಪಿಸಲು ಆಗಸ್ಟ್ 12 ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪವನ್ ಕಲ್ಯಾಣ್ ಕರ್ನಾಟಕ ಅರಣ್ಯ ಸಚಿವ ಈಶ್ವರಖಂಡ್ರೆಯೊಂದಿಗೆ ಸೇರಿ ಬಿಡುಗಡೆ ಮಾಡಿದ್ದಾರೆ.ಸಮ್ಮೇಳನದಲ್ಲಿ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ಅನುಸರಿಸಿರುವ ಪರಿಹಾರ ಮಾರ್ಗಗಳ…
ಶ್ರೀನಿವಾಸಪುರ: ವಿಶ್ವ ಪ್ರಸಿದ್ಧ ಮಾವಿನ ಹಣ್ಣನ ನಗರ ಪ್ರಮುಖ ತಾಲೂಕು ಮುಖ್ಯಕೇಂದ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೆಸರಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಹಾಗಾಗಿ ಇಲ್ಲಿನ ಜನ ರಸ್ತೆಯಲ್ಲೆ ಸಂಚರಿಸುತಿದ್ದು ಇಲ್ಲಿ ಎಲ್ಲವೂ ಆಯೋಮಯವಾಗಿದೆ.ಸದಾ ಗಿಜಗುಟ್ಟುವ ರಸ್ತೆಗಳಿಗೆ ಪುಟ್ ಪಾತ್ ಮಾಡಬೇಕು ಎಂಬ ಆಲೋಚನೆ ರಸ್ತೆ ಮಾಡುವಂತ ಇಂಜನಿಯರ್ ಗಳಿಗೆ ಇಲ್ಲ ಎನ್ನುವುದಾದರೆ ಅವರು ಒದಿದ್ದಾರು ಏನನ್ನು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತ ಮಾತುಗಳು.ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ,ಪಟ್ಟಣದ ಹೃದಯ ಭಾಗದಲ್ಲಿನ ಮಾರುಕಟ್ಟೆ ಮುಂಬಾಗ ಹಾಗೂ ಪುಂಗನೂರು ರಸ್ತೆ ಎನ್ನುವ ಎಂ.ಜಿ.ರಸ್ತೆಯಲ್ಲಿ ಫುಟ್ ಪಾತ್ಗಳು ಅತಿಕ್ರಮಣಗೊಂಡಿವೆ,ಇದರಿಂದ ಪಾದಚಾರಿಗಳು ರಸ್ತೆ ಮಧ್ಯೆ ಸಾಗುವಂತಾಗಿದ್ದು, ವಾಹನಗಳ ಸಂಚಾರ ಸಹ ಅಸ್ತವ್ಯಸ್ತಗೊಂಡಿದೆ.ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಫುಟ್ ಪಾತ್ ಸೇರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಪಾದಚಾರಿಗಳು,ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.ಇದರಿಂದ ನಗರದ ಅಂದವೂ ಹಾಳಾಗುತ್ತಿದೆ.ಇಲ್ಲಿ ಯಾವ ನಿಯಮಗಳು ಅಚ್ಚುಕಟ್ಟಾಗಿ ಪಾಲನೆಯಾಗುವುದಿಲ್ಲ.ಇದಕ್ಕೆಲ್ಲ ಕಾರಣ ಆಡಳಿತದಲ್ಲಿ ಸ್ಥಳೀಯ ರಾಜಕಾರಣಿಗಳು ನಂದೆಲ್ಲಿಡಲಿ ಎಂದು…
ತಿರುಪತಿ:ದಕ್ಷಿಣ ಭಾರತದ ಪ್ರಖ್ಯಾತ ರಾಹು-ಕೇತು ಪೂಜೆ ನಡೆಯುವ ಆಂಧ್ರದ ಶ್ರೀಕಾಳಹಸ್ತೀಶ್ವರ ದೇವಾಲಯದಲ್ಲಿ ಭಾನುವಾರ ನಡೆದಂತ ರಾಹು-ಕೇತು ಪೂಜೆಗಳು ಸಾರ್ವಕಾಲಿಕ ದಾಖಲೆಯಾಗಿದೆ.ದೇವಸ್ಥಾನದಲ್ಲಿ ಐದು ವಿವಿಧ ಧರದ ಟಿಕೆಟ್ ಗಳಲ್ಲಿ ರಾಹು-ಕೇತು ಸರ್ಪದೋಷ ನಿವಾರಣಾ ಪೂಜೆಗಳು ನಡೆಯುತ್ತವೆ ರಾಹು-ಕೇತು ಪೂಜೆಗಳ ದಾಖಲೆರಾಹು-ಕೇತು ಪೂಜಾ ಟಿಕೆಟ್ ಗಳು ಭಾನುವಾರ ಒಂದೇ ದಿನ 9,168 ಟಿಕೆಟ್ಗಳು ಮಾರಾಟವಾಗಿವೆ. 14 ತಿಂಗಳ ಹಿಂದೆ ಐದು ವಿಭಾಗಗಳಲ್ಲಿ ದಾಖಲೆಯ 7,200 ಟಿಕೆಟ್ಗಳು ಮಾರಾಟವಾಗಿದ್ದು, ಆಷಾಢ ಮಾಸದ ಭಾನುವಾರ ಅಮಾವಾಸ್ಯೆ ಬಂದಿದ್ದರಿಂದ ಜನತೆ ದೇವಾಲಯದಲ್ಲಿ ಪೂಜೆ ಮಾಡಲು ಮುಗಿಬಿದಿದ್ದು ಒಂದೇ ದಿನ 9,168 ರಾಹುಕೇತು ಪೂಜೆಯ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶ್ರೀಕಾಳಹಸ್ತೀಶ್ವರ ದೇವಸ್ಥಾನದ ರಾಹುಕೇತು ಮಂಟಪಗಳು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕಾಡುತಿತ್ತು 5,000 ರೂ ಮೊತ್ತದ 154 ಟಿಕೆಟ್ ಗಳು,2,500 ರೂ ಮೊತ್ತದ 610ಟಿಕೆಟ್ ಗಳು,1,500 ರೂ ಮೊತ್ತದ 933ಟಿಕೆಟ್ ಗಳು,750 ರೂ ಮೊತ್ತದ 2,288 ಟಿಕೆಟ್ ಗಳು,500 ರೂ ಮೊತ್ತದ 5,183ಟಿಕೆಟ್ ಗಳು,,. ಸೇರಿ ಒಟ್ಟು…
ಚಿತ್ತೂರು:ಒಂದು ಟನ್ ನೀಲಂ ಮಾವು 1.10 ಲಕ್ಷ ರೂಗಳಿಗೆ ಬಿಕರಿಯಾಗಿದೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಬಂಗಾರಪಾಳ್ಯದ ಪ್ರಖ್ಯಾತ ಮಾವು ಮಾರುಕಟ್ಟೆಯಲ್ಲಿ ಭಾನುವಾರ ರೈತರು ತಂದಿದ್ದ ಉತ್ತಮ ಗುಣಮಟ್ಟದ ನೀಲಂ ತಳಿಯ ಮಾವಿನ ಹರಾಜು ನಡೆದು ಒಂದು ಟನ್ ಕಾಯಿ 1.10 ಲಕ್ಷಕ್ಕೆ ವ್ಯಾಪಾರವಾಗಿದೆ.ಪೆದ್ದುಪ್ಪರಪಲ್ಲಿಯ ರೈತ ಖಾದರವಲ್ಲಿ ತಂದಿದ್ದ ಮಾವಿನ ಹಣ್ಣನ್ನು ಚೆನ್ನೈ ಮತ್ತು ಬೆಂಗಳೂರಿನ ವ್ಯಾಪಾರಿಗಳು ಖರೀದಿಸಿದ್ದಾರೆ.