ಶ್ರೀನಿವಾಸಪುರ:ತಾಲೂಕಿನ ಹೊದಲಿ ಗ್ರಾಮದ ನಿವಾಸಿ ರೇಷ್ಮೆ ಇಲಾಖೆ ಅಧಿಕಾರಿ ಎನ್.ಶ್ರೀನಿವಾಸಯ್ಯ ರವರ ಮಗ ಎಸ್.ವೇಣುಕುಮಾರ್ ಅವರು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ತೋಟಗಾರಿಕೆ ವಿಶ್ವವಿದ್ಯಾನಿಲಯ ಸಹ ಪ್ರಾದ್ಯಪಕರಾದ ಎ.ಎಂ.ನಡಾಫ್ ಮಾರ್ಗದರ್ಶನದಲ್ಲಿ ಎಸ್.ವೇಣುಕುಮಾರ್ ಮಂಡಿಸಿದ ಕೀಟಶಾಸ್ತ್ರ ಪ್ರಬಂಧಕ್ಕೆ ಡಾಕ್ಟರೇಟ್ ಪುರಸ್ಕಾರ ಮಾಡಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಉಪಕುಲಪತಿ ವಿಷ್ಣುವರ್ಧನ್ ಹಾಗು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ರವರು ಡಾಕ್ಟರ್ ಆಪ್ ಫಿಲಾಸಫಿ(PHD)ಪದವಿಯನ್ನು ಎಸ್.ವೇಣುಕುಮಾರ್ ಗೆ ನೀಡಿರುತ್ತಾರೆ.
Author: Srinivas_Murthy
ನ್ಯೂಜ್ ಡೆಸ್ಕ್:ಮಹಾರಾಷ್ಟ್ರ ಸರ್ಕಾರ ಗೋವನ್ನು ‘ರಾಜ್ಯ ಮಾತಾ’ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಗೋವಿನ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗುರುತಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಕೃಷಿಯಲ್ಲಿ ಹಸುವಿನ ಸಗಣಿ ಬಳಸುವುದರಿಂದ ಆಹಾರದಲ್ಲಿ ಪೋಷಕಾಂಶಗಳು ಸೇರುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ.ಚುನಾವಣೆ ಹೊತ್ತಿನಲ್ಲಿ ನಿರ್ಧಾರಮಹಾರಾಷ್ಟ್ರದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಸದ್ಯದಲ್ಲಿ ಚುನಾವಣಾ ದಿನಾಂಕವೂ ಘೋಷಣೆಯಾಗಲಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಸೋಮವಾರ ಗೋವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿ ಆದೇಶ ಹೊರಡಿಸಿದ್ದು ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.ಇನ್ನು ರಾಜ್ಯ ಮಾತೆ ಎಂದು ಘೋಷಿಸಿದ ಅಧಿಕೃತ ಆದೇಶದಲ್ಲಿ, ಏಕನಾಥ್ ಶಿಂಧೆ ನೇತೃತ್ವದ NDAಸರ್ಕಾರ ಹಸು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ ಗೋವಿಗೆ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವವಿದೆ ಎಂದು ಹೇಳಲಾಗಿದೆ.ಭಾರತದಾದ್ಯಂತ ಕಂಡುಬರುವ ವಿವಿಧ ತಳಿಯ ಹಸುಗಳನ್ನು ಎತ್ತಿ ತೋರಿಸಿರುವ ಮಹಾರಾಷ್ಟ್ರ ಸರ್ಕಾರವು…
ಅತಿಯಾಗಿ ಉಪ್ಪು ಸೇವನೆ ರಕ್ತದೊತ್ತಡ ಹೆಚ್ಚುತ್ತದೆ ಹೃದಯ ಕಾಯಿಲೆ,ಪಾರ್ಶ್ವವಾಯು ಕಿಡ್ನಿ ಸಮಸ್ಯೆ ಕಾಡುತ್ತದೆ ನ್ಯೂಜ್ ಡೆಸ್ಕ್:ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೆ 1 ಟೀಚಮಚ ಉಪ್ಪನ್ನು ಮಾತ್ರ ಶಿಫಾರಸು ಮಾಡುತ್ತದೆ. ಅದಕ್ಕಿಂತ ಹೆಚ್ಚು ತಿಂದರೆ ರಕ್ತದೊತ್ತಡ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.ಉಪ್ಪು ಇಲ್ಲದೆ ಊಟ ರುಚಿಸುವುದಿಲ್ಲ ಆದರೆ ಉಪ್ಪು ಹಿತ ಮಿತವಾಗಿ ಸೇವನೆ ಮಾಡಬೇಕು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ,ಅದು ಹೆಚ್ಚಾದರೆ ಸಾಕಷ್ಟು ಸಮಸ್ಯೆಗಳು ಕಾಡಬಹುದಾಗಿದೆ.ಮುಖ್ಯವಾಗಿ ರಕ್ತದೊತ್ತಡ,ಹೃದಯದ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಉಪ್ಪಿನಾಂಶವನ್ನು ಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು ಎಂದು ಅಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಿದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ಪದೇ ಪದೇ ನೀರು ಕುಡಿಯಬೇಕು ಎಂದು ಅನಿಸುತ್ತದೆ ಅತಿಯಾದ ಬಾಯಾರಿಕೆ ಆಗುತ್ತಲಿರುತ್ತದೆ,ದೇಹದಲ್ಲಿ ಅತಿಯಾದ ನೀರು ಶೇಖರಣೆಯಾದರೆ ಹೊಟ್ಟೆಉಬ್ಬರ ಉಂಟಾಗುತ್ತದೆ ಹೊಟ್ಟೆ ಉಬ್ಬರದಿಂದ ಹೊಟ್ಟೆಯಲ್ಲಿ ಬಿಗಿತ್ವ ಉಂಟಾಗುವುದು.ಶಿಫಾರಸು ಮಾಡಲಾದ ಮಿತಿಗೆ…
ನ್ಯೂಜ್ ಡೆಸ್ಕ್:ತಿರುಮಲ-ತಿರುಪತಿ ದೇವಾಲಯದ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದ್ದು ಇದರ ಅನ್ವಯ ಆಂಧ್ರಪ್ರದೇಶದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಅವರು ಗುಂಟೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ತಗೆದುಕೊಂಡಿದ್ದರು.ವೆಂಕಟೇಶ್ವರನ ಸನ್ನಿಧಾನದಲ್ಲಿ ದೀಕ್ಷೆ ತರೆಯಲಿದ್ದಾರೆ.ಪವನ್ ಕಲ್ಯಾಣ್ ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ತಿರುಪತಿ ರೇಣಿಗುಂಟಾ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ಸಂಜೆ 5 ಗಂಟೆಗೆ ರಸ್ತೆ ಮೂಲಕ ಅಲಿಪಿರಿಗೆ ತೆರಳಿ ಅಲ್ಲಿಂದ ಮೆಟ್ಟಿಲು ಮಾರ್ಗವಾಗಿ ತಿರುಮಲಕ್ಕೆ ನಡೆದುಕೊಂಡು ರಾತ್ರಿ 9 ಗಂಟೆಗೆ ತಿರುಮಲ ತಲುಪಿ ಅಂದು ರಾತ್ರಿ ತಿರುಮಲ ಬೆಟ್ಟದಲ್ಲಿ ತಂಗಲಿದ್ದಾರೆ. ಮರುದಿನ ಅಂದರೆ ಅಕ್ಟೋಬರ್ 3 ರಂದು ಬೆಳಿಗ್ಗೆ ಶ್ರೀವಾರಿ ದರ್ಶನದ ನಂತರ ದೀಕ್ಷೆಯನ್ನು ತೆರೆಯಲಿದ್ದಾರೆ.ನಂತರ ಸಂಜೆ ತಿರುಪತಿ ಮಹಾನಗರದಲ್ಲಿ ನಡೆಯುವ ವಾರಾಹಿ ಸಭೆಯಲ್ಲಿ ಪವನ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ತಿರುಮಲ ಲಡ್ಡು ಕಲಬೆರಕೆ ಕುರಿತ ಟೀಕೆಗಳ ಬಗ್ಗೆ ಮಾತನಾಡ ಬಹುದು…
ಡಿಗ್ರಿ ಹಾಸ್ಟಲ್ ನಿರ್ವಹಣೆ ಇಲ್ಲದೆ ದನದ ಕೊಟ್ಟಿಗೆಯಂತಾಗಿದೆ ಮೇಲ್ವಿಚಾರಕ ಪತ್ತೆ ಇಲ್ಲ ಶ್ರೀನಿವಾಸಪುರ:ಪಟ್ಟಣದ ಸರ್ಕಾರಿ ಪದವಿ ಹಾಸ್ಟಲ್ ನಿರ್ಹಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಅಸಡ್ಡೆ ತೋರುತ್ತಿದ್ದಾರೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಗರಂ ಆಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ದೂರವಾಣಿ ಮೂಲಕ ತರಾಟೆಗೆ ತಗೆದುಕೊಂಡರು.ಇಂದು ಭಾನುವಾರ ಉಪಲೋಕಾಯುಕ್ತ ಬಿ.ವೀರಪ್ಪ ಮತ್ತು ಎಸ್.ಪಿ ಧನಂಜಯ್ ಡಿ.ವೈ.ಎಸ್.ಪಿ ಸೂರ್ಯನಾರಯಣ್ ತಂಡ ಅವರು ಶ್ರೀನಿವಾಸಪುರದ ಸರ್ಕಾರಿ ಪದವಿ ಹಾಸ್ಟಲ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಕೆಂಡಾಮಂಡಲವಾದರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಅವರು ಇಂತಹ ವಾತವರಣದಲ್ಲಿ ವಿದ್ಯಾರ್ಥಿಗಳು ವಾಸ ಮಾಡಲು ಯೋಗ್ಯವಾಗಿಲ್ಲ ಇಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ ಅಡುಗೆ ಕೋಣೆಯಲ್ಲಿ ಸ್ವಚ್ಚತೆ ಇಲ್ಲ ಕಟ್ಟಡದ ಕಾಂಪೌಂಡಿಗೆ ಗೇಟ್ ಹಾಳಾಗಿದ್ದರು ಸರಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ ಹಾಸ್ಟಲ್ ಮೇಲ್ವಿಚಾರಕ ನಾಪಪತ್ತೆ ಆಗಿದ್ದಾನೆ ದನಗಳ ಕೊಟ್ಟಿಗೆಯಂತಿದೆ ಇಲ್ಲಗಳ ನಡುವೆ ಮಕ್ಕಳು ವಿದ್ಯಾಭ್ಯಾಸ ಮಾಡುವಂತ ಶೋಚನೀಯ ಪರಿಸ್ಥಿತಿ ಇದೆ ಇದಕ್ಕೆ…
ಬೆಂಗಳೂರು:ದಶಕಗಳ ಕನಸಾಗಿದ್ದ ಗ್ರಾಮೀಣ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸ್ ಪಾಸ್ ಬಗ್ಗೆ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತು ಕೊಟ್ಟಿದ್ದೆ. ಅದರಂತೆ ನಿಮ್ಮ ಬೇಡಿಕೆ ಈಡೇರಿಸಿ ಜಾರಿಗೆ ನೀಡಿದ್ದೇನೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಘಟಕದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಟಿವಿ9 ರಾಜಕೀಯ ವಿಭಾಗ ಮುಖ್ಯಸ್ಥ ಪ್ರಮೋದ್ ಶಾಸ್ತ್ರಿ, ನ್ಯೂಸ್18 ರಾಜಕೀಯ ಬ್ಯೂರೋ ಮುಖ್ಯಸ್ಥ ಚಿದಾನಂದ ಪಟೇಲಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆ.ವಿ.ಪ್ರಭಾಕರ್ ಗೆ ಸನ್ಮಾನಬಸ್ ಪಾಸ್ ಸೌಲಭ್ಯವನ್ನು ದೊರಕಿಸಿ ಕೊಡಲು ಸಹಕರಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನೂ ಕೆಯುಡಬ್ಲೂಜೆ ಸನ್ಮಾನಿಸಿತು
ಬೆಂಗಳೂರು:ಬೆಂಗಳೂರು ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಲವು ದಿನಗಳಿಂದ ಸಾರ್ವಜನಿಕವಾಗಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.ಕೆಲ ದಿನಗಳ ಹಿಂದೆ ಚಿರತೆಯೊಂದು ಹೆದ್ದಾರಿ ಕ್ರಾಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರೊಂದಿಗೆ ಐಟಿಬಿಟಿಗೆ ಖ್ಯಾತಿ ಪಡೆದು ಹಲವಾರು ಸಾಫ್ಟ್ವೇರ್ ಸಂಸ್ಥೆಗಳು ಇರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಳೀಯರು ಹಾಗೂ ಟೆಕ್ಕಿಗಳು ಆತಂಕಕ್ಕೆ ಒಳಗಾಗಿದ್ದರು.ಚಿರತೆ ಓಡಾಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮರಾಗಳನ್ನ ಅಳವಡಿಸಿ ಚಿರತೆ ಓಡಾಟದ ಬಗ್ಗೆ ನಿಗಾ ವಹಿಸಿದ್ದರು.ಕ್ಯಾಮೆರಾದಲ್ಲಿ ಹಲವು ಕಡೆಗಳಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು ಅದರ ಜಾಡು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೋನ್ ಗಳನ್ನ ಇಟ್ಟು ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಎಲಿಪ್ಯಾಡ್ ಜಾಗದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದ ಚಿರತೆ, ಅಲ್ಲಿ ನಿರ್ಜನ ಪ್ರದೇಶದಲ್ಲಿಯೇ ಹೆಚ್ಚಾಗಿ ಬಿಡುಬಿಟ್ಟಿರುವುದು ಖಚಿತವಾಗಿ ಎಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.ಬೋನಿಗೆ ಬಿದ್ದಿರುವ ಚಿರತೆಗೆ ಐದು ವರ್ಷದ…
ನ್ಯೂಜ್ ಡೆಸ್ಕ್:ತಿರುಪತಿ-ತಿರುಮಲ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇರುವ ಬಗ್ಗೆ ವಿವಾದ ದೇಶಾದ್ಯಂತ ಜೀವಂತವಾಗಿರುವಾಗಲೆ ತಮಿಳುನಾಡಿನ ಪ್ರಖ್ಯಾತ ಪಳನಿ ಮುರುಗನ್(ಸುಬ್ರಮಣ್ಯ) ದೇವಾಲಯ ಪ್ರಸಾದಲ್ಲಿ ಕಲಬೆರಕೆಯಾಗಿದೆ ಎಂದು ಖ್ಯಾತ ತಮಿಳು ಚಿತ್ರ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಆರೋಪಿಸಿದ್ದು, ಈ ಸಂಬಂಧ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಪ್ರಸಾದದಲ್ಲಿ ಮಕ್ಕಳಾಗದೇ ಇರುವ ಔಷದಿ ಮಿಶ್ರಣ!ಬಕಾಸುರನ್,ದ್ರೌಪದಿ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು, ಅಲ್ಲಿ ಕೆಲಸ ಮಾಡುವ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು. ಇದರ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರೇ ಹೇಳಿಕೊಂಡಿರುವ ವಿಷಯ ಇದು ಎಂದು ಹೇಳಿದ್ದರು ಇದಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ತೀವ್ರಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದು, ಇದರಿಂದ ಎಚ್ಚೆತ್ತ ತಿರುಚ್ಚಿ ಪೊಲೀಸರು…
ನ್ಯೂಜ್ ಡೆಸ್ಕ್:ದೇವರು ಇದ್ದಾನೆ ಎಂಬುದಕ್ಕೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.ಆರು ವರ್ಷದ ಬಾಲಕಿಯನ್ನು ಅತ್ಯಾಚಾರಿಯಿಂದ ಕೋತಿಗಳ ಗುಂಪು ರಕ್ಷಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಪಾಳುಬಿದ್ದ ಮನೆಯೊಳಗೆ ಎಳೆದೊಯಿದು ಇನ್ನೇನು ಬಾಲಕೀಯ ಮೇಲೆ ದುರುಳ ದಾಳಿಮಾಡಬೇಕು ಎನ್ನುವ ಸಮಯದಲ್ಲಿ ಕೋತಿಗಳ ಗುಂಪು ಬಂದು ಅವನನ್ನು ಅಲ್ಲಿಂದ ಓಡಿಸಿವೆ ಹೀಗಾಗಿ ಬಾಲಕಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು,ದುಷ್ಕರ್ಮಿ ಬಾಲಕೀಯನ್ನು ಕರೆದೊಯುತ್ತಿರುವ ದೃಶ್ಯಾವಳಿ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದ್ದು ದುರುಳನನ್ನು ಗುರುತಿಸಬೇಕಿದೆ. ಅಲ್ಲದೇ ನನ್ನ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಬಾಲಕೀಯ ತಂದೆ ಹೇಳಿಕೊಂಡಿದ್ದಾರೆ.
ಶಾಂತಿ,ವಾಸ್ತು ಹೋಮ ಮಾಡಿದ ಅರ್ಚಕರು ಪಂಚಗವ್ಯದಿಂದ ಅನ್ನ ಪ್ರಸಾದ,ಲಡ್ಡು ತಯಾರಿಕಾ ಗೋದಾಮಿನಲ್ಲಿ ಸಂಪ್ರೋಕ್ಷಣೆ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ನ್ಯೂಜ್ ಡೆಸ್ಕ್:ಕಲಬೆರಕೆ ತುಪ್ಪ ಬಳಸಿ ತಿರುಮಲ ಶ್ರೀನಿವಾಸನ ದೇವಸ್ಥಾನದಲ್ಲಿ ಲಡ್ಡು ತಯಾರಿಗೆ ಮಾಡಿದ್ದು ದೇವಾಲಯದ ಪಾವಿತ್ರತೆಗೆ ಧಕ್ಕೆಯಾಗಿದೆ ಎಂಬ ಹಿನ್ನಲೆಯಲ್ಲಿ ಶ್ರೀನಿವಾಸನ ದೇವಸ್ಥಾನದ್ದಲ್ಲಿ ಸೋಮವಾರ ಶುದ್ಧೀಕರಣ ಕಾರ್ಯದ ಅಂಗವಾಗಿ ಮಹಾಶಾಂತಿ ಯಾಗ ಮುಕ್ತಾಯಗೊಂಡಿದೆ. ಪೂರ್ಣಾಹುತಿಯೊಂದಿಗೆ ಹೋಮವು ಶಾಸ್ತ್ರೋಕ್ತವಾಗಿ ಪೂರ್ಣಗೊಂಡಿದ್ದು ಸೋಮವಾರ ಶ್ರೀನಿವಾಸ ದೇವರಿಗೆ ರೋಹಿಣಿ ನಕ್ಷತ್ರದ ಮುಹೂರ್ತ ಪ್ರಬಲವಾಗಿದ್ದ ಕಾರಣ ಬೆಳಗ್ಗೆ 6ರಿಂದ ಆಗಮ ಪಂಡಿತರು ಹಾಗೂ ಅರ್ಚಕರು ದೇವಾಲಯದ ಯಾಗಶಾಲೆಯಲ್ಲಿ (ವಾಸ್ತು, ಸಭ್ಯಂ,ಪೌಂಡರೀಕ) ಮೂರು ಹೋಮಕುಂಡಗಳನ್ನು ಸ್ಥಾಪಿಸಿ ಹೋಮ ನೆರವೇರಿಸಿದರು. ಮೊದಲಿಗೆ ಮಹಾಶಾಂತಿ ಯಾಗ ಮತ್ತು ವಾಸ್ತು ಹೋಮ ನಡೆಸಲಾಯಿತು.ಆಗಮ ಪಂಡಿತರು ಭಗವಂತನಿಗಾಗಿ ನಡೆಯುತ್ತಿರುವ ಕಾರ್ಯಗಳಿಂದ ದೇವರ ದರ್ಶನಕ್ಕೆ ಬರುವಂತ ಸಾಮನ್ಯ ಭಕುತರಿಗೆ ತೊಂದರೆಯಾಗದಂತೆ ಒಂದು ದಿನದಲ್ಲಿ ಯಾಗ ಮಾಡಲು ನಿರ್ಧರಿಸಿ ಮಹಾ ಶಾಂತಿ ಯಾಗ ಮುಗಿಸಿದ್ದಾರೆ.ಹೋಮದ ನಂತರದಲ್ಲಿ ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ತಯಾರಿಸಿದ…