Author: Srinivas_Murthy

ಕೋಲಾರ:RSS ಪಥ ಸಂಚಲನ ಕೋಲಾರ ನಗರದ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿ ಬಂದಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನಲೆಯಲ್ಲಿ ಕೋಲಾರ ವಿಭಾಗದ ವತಿಯಿಂದ ಸುಮಾರು 16 ಕಿಮೀ ದೀಘ್ರ ಪಥ ಸಂಚಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದು ಕೋಲಾರ ತಾಲೂಕಿನ ವಕ್ಕಲೇರಿಯಿಂದ ಪ್ರಾರಂಭವಾದ ಪಥ ಸಂಚಲನಕ್ಕೆ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ವಿಭಾಗೀಯ ಸಂಚಾಲಕ್ ಡಾ.ಶಂಕರ್ ನಾಯಕ್ ಚಾಲನೆ ನೀಡಿದರು. ಯಾತ್ರೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.ಹೂ ಚಲ್ಲಿ ಸ್ವಾಗತಿಸಿದ ಜನತೆಗಣವೇಶ ತೊಟ್ಟ ಸ್ವಯಂ ಸೇವಕರು ದಂಡ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ದಾರಿಯಲ್ಲಿ ಸಿಗುವ ಗ್ರಾಮಗಳಲ್ಲಿನ ಯುವಕರು ಅವರ ಮೇಲೆ ಹೂಚಲ್ಲಿ ಭಾರತ ಮಾತೆಗೆ ನಮಸ್ಕರಿಸಿ ಸ್ವಾಗತ ಕೋರಿದರು.ಮಾರ್ಗದ ಮಧ್ಯದಲ್ಲಿ ಮೂರು ಕಡೆ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು ಸಂಘಪರಿವಾರದ ಅಭಿಮಾನಿಗಳು ಹಿತೈಶಿಗಳು ಗಣವೇಶಧಾರಿ ಸ್ವಯಂ ಸೇವಕರಿಗೆ ನೀರು ಕೊಟ್ಟು ಆರೈಸಿದರು ಮೊದಲಿಗೆ ಬೆಟ್ಟಬೆಣಜೇನಹಳ್ಳಿಯಲ್ಲಿ ನೀರು, ಸೌತೆಕಾಯಿ…

Read More

ಹತ್ತಾರು ಅಥಾವ ನೂರಾರು ಜನರು ಭಾಗವಹಿಸಿದ್ದ ಸಣ್ಣಪುಟ್ಟ ಕಾರ್ಯಕ್ರಮಗಳಿರಬಹುದು, ಅಥವಾ ಸಾವಿರಾರು ಜನರು ಪಾಲ್ಗೊಂಡಿದ್ದಂತ ಬಹಿರಂಗ ಸಭೆಗಳೇ ಇರಬಹುದು,ಆ ವೇದಿಕೆಗಳಲ್ಲಿ ಭಾಗವಹಿಸಿದ್ದ ಮುಖಂಡರು ಅನಿವಾರ್ಯ ಪರಿಸ್ಥಿತಿಯಲ್ಲಿ ಆರೋಗ್ಯಕ್ಕಾಗಿ ಔಷಧಿ ಸೇವಿಸುವುದನ್ನು ಕಾಣುತ್ತೇವೆ. ಅನಿವಾರ್ಯವಾಗಿ ಬಿಸ್ಕತ್‌ ಅಥಾವ ಡ್ರೈಫ್ರೂಟ್ಸ್ ನಂಥ ಆಹಾರ ತಿನ್ನುವುದನ್ನು ನೋಡುತ್ತೇವೆ.ಆದರೆ,ಉಸಿರಾಡಲು ಆಮ್ಲಜನಕದ ಸಿಲಿಂಡರ್ ಹೊತ್ತುಕೊಂಡೇ ಸಭೆ-ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ಯಾರನ್ನಾದರೂ ನೋಡಿದ್ದೀರಾ? ಹೌದು, ಅಂಥ ದೃಶ್ಯಗಳನ್ನು ಇತ್ತೀಚೆಗೆ ಬೆಂಗಳೂರು ಹಾಗು ಕೋಲಾರದಲ್ಲೂ ಕಾಣಬಹುದಾಗಿತ್ತು.ಆಮ್ಲಜನಕದ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಮೂಗಿದೆ ಸಿಲಿಂಡರ್ ಪೈಪ್ ಸಿಗಿಸಿಕೊಂಡು ಕೃಕವಾಗಿ ಉಸಿರಾಡುತ್ತ ತಿರುಗುತ್ತಿದ್ದ ವ್ಯಕ್ತಿಯೇ ಕಮಿನಿಸ್ಟ್ ಸಿದ್ದಾಂತದ ಜನಪರ ಹೋರಾಟಗಾರ ಜಿ.ಸಿ. ಬಯ್ಯಾರೆಡ್ಡಿ ಅವರು ಇಂದು ಜನರಿಂದ ಭೌತಿಕವಾಗಿ ದೂರವಾಗಿದ್ದಾರೆ. ನ್ಯೂಜ್ ಡೆಸ್ಕ್:ಜನಪರ ಚಳವಳಿಯ ನೇತಾರ, ಆಪ್ತ ವಲಯದಲ್ಲಿ ಜಿಸಿಬಿ ಎಂದೇ ಚಿರಪರಿಚಿತರಾಗಿದ್ದ ಜಿ.ಸಿ. ಬಯ್ಯಾರೆಡ್ಡಿ ಅವರೇ ಉಸಿರಾಟದ ತೀವ್ರ ತೊಂದರೆಯಿದ್ದರೂ ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ ಊರೂರು ತಿರುಗಾಡುತ್ತಿದ್ದ ಒಬ್ಬನಿತ್ಯ ಹೋರಾಟದ ಒಡನಾಡಿ.ಈ ರೀತಿ, ವೈಯಕ್ತಿಕ ಆರೋಗ್ಯ ವಿಚಾರ ಏನೇ ಇದ್ದರೂ ಜನಪರ ಕಾಳಜಿ ಇಟ್ಟುಕೊಂಡು…

Read More

ಬೆಂಗಳೂರು: ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಗೂ ಅನ್ವಯಿಸುವಂತೆ ಪ್ರಯಾಣದರವನ್ನು ಇಂದು (ಶನಿವಾರ) ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ಅದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪಯಾಣದ ದರ ಪರಿಷ್ಕರಣೆ ಮಾಡಲಾಗಿರುವುದಾಗಿ ಹೇಳಲಾಗಿರುತ್ತದೆ.ಪ್ರತಿದಿನ ಸರಾಸರಿ 116.18ಲಕ್ಷ ಪುಯಾಣಿಕರು ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ ಹಾಗು ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು ಅರವತ್ನಾಲ್ಕು ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿರುವುದಾಗಿ ಎಂದು ಅಂದಾಜಿಸಲಾಗಿದೆ.ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಮತ್ತು ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ಪ್ರಮುಖ ವೆಚ್ಚಗಳಾಗಿದ್ದು, ಸದರಿ ಎರಡು…

Read More

ನ್ಯೂಜ್ ಡೆಸ್ಕ್:ಪಾರಿವಾಳಗಳನ್ನು ಸಾಕುವುದನ್ನು ಕೆಲವರು ಹವ್ಯಾಸವಾಗಿಸಿಕೊಂಡಿದ್ದಾರೆ ಇನ್ನೂ ಕೆಲವರು ತಮ್ಮ ಮಹಡಿಗಳ ಮೆಲೆ ಪಾರಿವಾಳಗಳಿಗಾಗಿ ಕಾಳು ಹಾಕುತ್ತ ಸಂಭ್ರಮಿಸುತ್ತಾರೆ ಅದನ್ನು ತಿನ್ನಲು ಬರುವಂತ ನೂರಾರು ಸಂಖ್ಯೆಯ ಪಾರಿವಾಳಗಳು ಮಹಡಿಗಳ ಮತ್ತು ವಿದ್ಯುತ್ ತಂತಿಗಳ ಮೇಲೆ ಬಂದು ಕೂರುತ್ತವೆ ಇದೊಂದು ಮಾನವೀಯ ಕಾರ್ಯ ಎಂದು ಕೆಲವರು ಭಾವಿಸುತ್ತಾರೆ ಆದರೆ ಅದೆ ಪಾರಿವಾಳಗಳಿಂದ ತೀವ್ರ ಉಸಿರಾಟದ ಕಾಯಿಲೆಗಳು ಬರುವ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.ಪಾರಿವಾಳದಲ್ಲಿ ವಿಭಿನ್ನ ಜೈವಿಕ ವೈವಿಧ್ಯವಿದ್ದು ವಿಶೇಷವಾಗಿ ಪಾರಿವಾಳದ ಗರಿಗಳ ಮೇಲೆ,ವಿಶೇಷ ಬ್ಯಾಕ್ಟೀರಿಯಾಗಳಿವೆ. ದೇಹದ ಇತರ ಭಾಗಗಳಲ್ಲಿ ವಿವಿಧ ರೀತಿಯ ವೈರಸ್ ಗಳಿವೆ. ಅವೆಲ್ಲವೂ ಸೋಂಕನ್ನು ಉಂಟುಮಾಡುವ ರೋಗಲಕ್ಷಣಗಳನ್ನು ಹೊಂದಿದ್ದು ಪಾರಿವಾಳದ ಸಂಪರ್ಕದಿಂದ ಮಾನವನ ದೇಹದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರಿಂದ ತೀವ್ರ ಅಲರ್ಜಿಗೆ ಕಾರಣವಾಗಬಹುದು ಎಂಬುದು ವೈದ್ಯಕೀಯ ಕ್ಷೇತ್ರದ ಮಾತು.ಪಾರಿವಾಳಗಳಿಂದ ಬರುವಂತ ರೋಗಗಳು.ಪಾರಿವಾಳಗಳಿಂದ ವಿವಿಧ ರೀತಿಯ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು. ಎರಡನೆಯದು ನ್ಯುಮೋನಿಯಾ-ಸಿಟ್ಟಾಕೋಸಿಸ್ಗೆ ಕಾರಣವಾಗಬಹುದು, ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು…

Read More

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಕಲ್ಪಿಸಿರುವ ಉಚಿತ ಬಸ್ ಪ್ರಯಾಣದ ಕುರಿತಂತೆ ಅಧ್ಯಯನ ನಡೆಸಲು ಆಂಧ್ರ ಸರ್ಕಾರದ ಮಂತ್ರಿಗಳು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು,ಇದಕ್ಕಾಗಿ ರಚಿಸಿರುವ ಆಂಧ್ರ ಸರ್ಕಾರದ ಉಪ ಸಮಿತಿಯ ಸಚಿವರಾದ ಸಾರಿಗೆ ಮಂತ್ರಿ ಮಂಡಿಪಲ್ಲಿರಾಮಪ್ರಸಾದ್ ರೆಡ್ಡಿ, ಗೃಹಮಂತ್ರಿ ವಂಗಲಪುಡಿ ಅನಿತಾ ಮತ್ತು ಗುಮ್ಮಡಿ ಸಂಧ್ಯಾರಾಣಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಸ್ ಪ್ರಯಾಣ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಅಭಿಪ್ರಾಯಗಳನ್ನು ಶೇಖರಿಸಿದ ಅವರು ಮಹಿಳಾ ಪ್ರಯಾಣಿಕರು ಪಡೆದ ಉಚಿತ ಟಿಕೆಟ್ ಪಡೆದು ಪರಶೀಲನೆ ಮಾಡಿದ್ದಾರೆ ಬಳಿಕ ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಉಚಿತ ಬಸ್ ಪ್ರಯಾಣದ ಕಾರ್ಯಚಟುವಟಿಕೆ ಕುರಿತಾಗಿ ಮಾಹಿತಿ ಪಡೆದಿರುತ್ತಾರೆ.200 ಕೋಟಿ ನಷ್ಟದ ಅಂದಾಜುಆಂಧ್ರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ತಿಂಗಳಿಗೆ ರೂ.300 ಕೋಟಿ ಸಂಬಳಕ್ಕೆ ಖರ್ಚು ಮಾಡುತ್ತಿದ್ದು ಒಂದು ವೇಳೆ ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದೆ ಆದರೆ ತಿಂಗಳಿಗೆ ರೂ.200 ಕೋಟಿ ಆದಾಯ ಕಳೆದುಕೊಳ್ಳಲಿದೆ ಎಂದು…

Read More

ನ್ಯೂಜ್ ಡೆಸ್ಕ್:ಹೊಸ ವರ್ಷಾಚರಣೆ ಸಂಭ್ರದಲ್ಲಿ ಪಟಾಕಿ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾನೆ ಘಟನೆ ಆಂಧ್ರದ ವಿಶಾಖಪಟ್ಟಣ ಮಹಾನಗರದಲ್ಲಿ ನಡೆದಿದೆ.ಪಟಾಕಿ ಅವಘಡದಲ್ಲಿ ಮೃತಪಟ್ತ ವ್ಯಕ್ತಿಯನ್ನು ಶಿವ(41) ಎಂದು ಗುರುತಿಸಲಾಗಿದ್ದು ಡಿ.31ರ ಮಧ್ಯರಾತ್ರಿಯ ನಂತರ ತನ್ನ ಮನೆಯ ಮಹಡಿ ಮೇಲೆ ಹೊಸ ವರ್ಷ2024ನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡು ಪತ್ನಿ ಧನಲಕ್ಷ್ಮಿ, ಪುತ್ರಿ ಹಾಗೂ ಪುತ್ರ ಮತ್ತು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಮಧ್ಯರಾತ್ರಿ 12 ಗಂಟೆಯಾಗಿತ್ತು. ಎಲ್ಲರೂ ಕೂಗುತ್ತ ಖುಷಿಯಿಂದ ಕುಣಿದು ಕುಪ್ಪಳಿಸುತ್ತ ಹೊಸ ವರ್ಷವನ್ನು ಸ್ವಾಗತಿಸಿ ಪರಸ್ಪರ ಶುಭಾಶಯ ಹೇಳಿಕೊಂಡು ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು ಕೇಕ್ ಕತ್ತರಿಸಿದ ನಂತರ ಗನ್ ಶಾಟ್ ಪಟಾಕಿ ಸಿಡಿಸಲು ಬೆಂಕಿ ಹಚ್ಚಿದ್ದಾರೆ ಆದರೆ ಪಟಾಕಿ ಎಷ್ಟೊತ್ತಿಗೂ ಸಿಡಿಯಲಿಲ್ಲ ಹಾಗಾಗಿ ಅದನ್ನು ನೋಡಲು ಮೃತ ಶಿವ ಅದರ ಹತ್ತಿರ ಹೋಗಿ ಮುಖವಿಟ್ಟು ನೋಡುತ್ತಿದ್ದಾಗ ಪಟಾಕಿ ಏಕಾಏಕಿ ಸಿಡಿದಿದೆ, ಸಿಡಿದ ಪಟಾಕಿ ಕಣ್ಣಲ್ಲಿ ದೂರಿ ತಲೆಗೆ ಬಡಿದು ಶಿವ ಸ್ಥಳದಲ್ಲೆ ಕುಸಿದು ಬಿದ್ದಿರುತ್ತಾನೆ…

Read More

ನೂಜ್ ಡೆಸ್ಕ್:ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿ ಮದುವೆಯಾದ ಮೇಷ್ಟ್ರು ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.ಪ್ರೇಮಿಯ ಜೊತೆ ಹೋದ ಮಗಳ ನೆನೆದು ಕಣ್ಣೀರುಡುತ್ತಿರುವ ವಿದ್ಯಾರ್ಥಿನಿಯ ಪೋಷಕರು.ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರು ನಂತರ ಶಾಲೆ ಮೇಷ್ಟ್ರು ಆದರೆ ಇಲ್ಲೊಬ್ಬ ಶಿಕ್ಷಕ ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೇಮ ಪಾಠ ಹೇಳಿ ಪ್ರೀತಿಗೆ ಬೀಳಿಸಿಕೊಂಡು ಮದುವೆಯಾಗಿರುವ ಘಟನೆಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ,ಸ್ಥಳೀಯ ಖಾಸಗಿ ಬಿಎಡ್‌ ಕಾಲೇಜು ಉಪನ್ಯಾಸಕ ಬೆಂಕಿಪುರದ ನಿವಾಸಿ ಯಶೋಧ್‌ ಕುಮಾರ್‌ ಹಾಗೂ ಕಾಲೇಜಿನ ಬಿ.ಎಡ್ ವಿಧ್ಯಾರ್ಥಿನಿ ಚಿಕ್ಕಹುಣಸೂರು ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡಿದ್ದಾರೆ. ನಂತರ ರಕ್ಷಣೆಗಾಗಿ ಪೊಲೀಸರ ಮೊರೆಗೆ ಹೋಗಿದ್ದಾರೆ.ಮಗಳನ್ನು ಶಿಕ್ಷಕಿಯನ್ನು ಮಾಡಬೇಕು ಎಂಬ ಕನಸುಕಂಡ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡುವ ಸಜ್ಜೇಗೌಡ, ಸಾಲ ಸೋಲ ಮಾಡಿ ಮಗಳು ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್‌ ಕಾಲೇಜಿಗೆ ಸೇರಿಸಿದ್ದರು ಡಿಎಡ್‌ ಮುಗಿಸಿದ ಪೂರ್ಣಿಮಾ ಮನೆಯಲ್ಲಿದ್ದಳು. ಡಿಎಡ್‌ ವ್ಯಾಸಂಗ ಮಾಡುವಾಗಲೇ ತನಗೆ ಪಾಠ ಮಾಡುತ್ತಿದ್ದ ಮೇಷ್ಟ್ರೀಗೆ…

Read More

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಸಿಸಿಟಿವಿಯಲ್ಲಿ ಸೆರೆಯಾದ ಚಿರತೆ ಓಡಾಟ ಕ್ಯಾಂಪಸ್ ಪ್ರದೇಶದಲ್ಲಿ ಭಯದ ವಾತಾವರಣ ಇನ್ಫೋಸಿಸ್ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ನ್ಯೂಜ್ ಡೆಸ್ಕ್:ಅರಮನೆ ನಗರಿ ಮಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿ ಸಂಚಲನ ಮೂಡಿಸಿದೆ. ಇದರಿಂದಾಗಿ ಡಿ.31 ರಿಂದ ಕಂಪನಿಯು ಉದ್ಯೋಗಿಗಳಿಗೆ work from Home ಮನೆಯಿಂದಲೇ ಕೆಲಸ ಮಾಡುವಂತೆ ಸಂದೇಶ ಕಳುಹಿಸಿದೆ. ಮಂಗಳವಾರ ಬೆಳಗ್ಗೆ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆಯ ಚಲನವಲನ ಕ್ಯಾಂಪಸ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಸುರಕ್ಷತೆ ದೃಷ್ಟಿಯಿಂದ ಹೊರಗಿನಿಂದ ಯಾರನ್ನೂ ಕ್ಯಾಂಪಸ್‌ಗೆ ಒಳಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ನಿಘಾ ವಹಿಸಿದ್ದು ಕ್ಯಾಂಪಸ್ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಅರಣ್ಯ ಸಿಬ್ಬಂದಿ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಆದರೆ ಇನ್ನೂ ಚಿರತೆ ಪತ್ತೆಯಾಗಿಲ್ಲ ಎಂದು ಕಾರ್ಯಪಡೆ ಅಧಿಕಾರಿಗಳು ತಿಳಿಸಿದ್ದಾರೆ.ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಚರಣೆಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿನ ಇನ್ಫೋಸಿಸ್ ಆವರಣದಲ್ಲಿ ಮಂಗಳವಾರ ಮುಂಜಾನೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬೀದರ್‌ನಲ್ಲಿ…

Read More

ನ್ಯೂಜ್ ಡೆಸ್ಕ್:ಜಗತ್ತನ್ನು ಬೆಚ್ಚಿಬೀಳಿಸಿದ ಕರೋನಾ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ 2019ರ ಈ ದಿನದಂದು, ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದ್ದು ಜನವರಿ ಮೊದಲ ವಾರದಲ್ಲಿ ಇದನ್ನು ನಾವೆಲ್ ಕೊರೊನಾ ವೈರಸ್ ಎಂದು ಘೋಷಿಸಲಾಯಿತು. ನಂತರ ಮಾರ್ಚ್ 2020 ರ ಹೊತ್ತಿಗೆ ಇದು ಪ್ರಪಂಚದಾದ್ಯಂತ ಅನೇಕ ದೇಶಗಳಿಗೆ ಹರಡಿಕೊಂಡಿತು.ಈ ದಿನವನ್ನು ನೆಟ್ಟಿಗರು ಇಂದಿನ ದಿನವನ್ನು ನೆನಪಿಸಿಕೊಂಡು ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ. ಸಾಂಕ್ರಮಿಕ ರೋಗ ಪ್ರಪಂಚದಾದ್ಯಂತ ಕೊಟ್ಯಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಸಾವಿರಾರು ಜನರನ್ನು ಅನಾಥರನ್ನಾಗಿ ಮಾಡಿದ ಕಹಿ ಘಟನೆ ಸಾರ್ವಜನಿಕ ವಲಯದಲ್ಲಿ ದುರಂತವಾಗಿ ಕಾಡಿತ್ತು.

Read More

ಟೆಕ್ ನೂಜ್:ಹಳೆಯ ಆಂಡ್ರಾಯ್ಡ್​ ಫೋನ್ ಬಳಕೆದಾರರಾಗಿದ್ದರೆ ಜನವರಿಯಿಂದ WhatsApp ಕೆಲಸ ಮಡುವುದಿಲ್ಲ ಎಂಬ ಸುದ್ಧಿ ಹೊರಬಂದಿದೆ ಮುಂಬರುವ ವರ್ಷದಿಂದ ಕೆಲವು ಆಂಡ್ರಾಯ್ಡ್ ಹ್ಯಾಂಡ್‌ಸೆಟ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ ವಾಟ್ಸಾಪ್​ ಘೋಷಿಸಿದೆ.ಜನವರಿ 1, 2025 ರಿಂದ ಕಿಟ್‌ಕ್ಯಾಟ್ ಚಾಲನೆಯಲ್ಲಿರುವ ಆಂಡ್ರಾಯ್ಡ್​ ಫೋನ್‌ಗಳಲ್ಲಿ ವಾಟ್ಸಾಪ್​ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಈ ಫೋನ್‌ಗಳು ದಶಕದ ಹಳೆಯ ಆಪರೇಟಿಂಗ್ ಸಿಸ್ಟಂ ಅನ್ನು ಚಾಲನೆ ಮಾಡುತ್ತಿವೆ ಮತ್ತು ಯಾವುದೇ ಹೊಸ ಅಪ್​ಡೇಟ್​ಗಳು ಬರುವುದಿಲ್ಲ.ಸರಳ ಭಾಷೆಯಲ್ಲಿ ಹೇಳುವುದಾದರೆ ನಿಮ್ಮ ಬಳಿ 9 ರಿಂದ 10 ವರ್ಷಗಳ ಹಿಂದೆ ಬಿಡುಗಡೆಯಾದ ಆಂಡ್ರಾಯ್ಡ್​ ಫೋನ್ ಇದ್ದರೆ, ಅದರಲ್ಲಿ ವಾಟ್ಸಾಪ್​ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ. ನೀವು ವಾಟ್ಸಾಪ್​ ಬಳಸುವುದನ್ನು ಮುಂದುವರಿಸಲು ಬಯಸಿದರೆ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಹೊಸ ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಆ್ಯಪ್‌ನ ಸುರಕ್ಷತೆ ಮತ್ತು ಕಾರ್ಯನಿರ್ವಹಣೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್​ ಹೇಳಿದೆ.ಹಳೆಯ ಆಪರೇಟಿಂಗ್ ಸಿಸ್ಟಮ್ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಖಾತ್ರಿಪಡಿಸದ ಕಾರಣ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ ವಾಟ್ಸಾಪ್​ ತನ್ನ ಸಪೋರ್ಟ್​ ನಿಲ್ಲಿಸಲಿದೆ. ಹಳೆಯ…

Read More