ಮುಲಕಲೆಚೆರುವು:- ಅದೊಂದು ಸಣ್ಣ ಹಳ್ಳಿ. ಮುಂಜಾನೆ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆಯೊಂದಿಗೆ ಯುವತಿಯೊಬ್ಬಳು ನರಳುತ್ತ ಮನೆಯೊಂದರಿಂದ ಹೋರ ಬರುತ್ತಾಳೆ ಅದೇ ಮನೆಯಲ್ಲಿ ಮೂರು ನಾಯಿಗಳು, ಬೆಕ್ಕು ಮತ್ತು 30 ಕೋಳಿಗಳು ವಿಷಪ್ರಾಷನದಿಂದ ಸಾವನ್ನಪ್ಪಿವೆ. ಈ ಮನ ಕಲಕುವ ಘಟನೆ ನಡೆದಿರುವುದು ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲೂಕಿನ ಗಡಿಯಾಚಗಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೇರುವು ಮಂಡಲದ ಸೋಮಪಲ್ಲೆ ಪಂಚಾಯಿತಿ ವ್ಯಾಪ್ತಿಯ ಗುಟ್ಟುಕಿಂದಪಲ್ಲೆ ಗ್ರಾಮದಲ್ಲಿ,ಎಲ್ಲವೂ ಸರಿಯಾಗಿದ್ದರೆ ಈ ತಿಂಗಳ 25 ರಂದು ಮದುವೆಯಾಗಿ ಮತ್ತೊಬ್ಬರ ಜೀವನದಲ್ಲಿ ಪ್ರವೇಶಿಸಬೇಕಾದ ಮಧುಮಗಳು ಸುಮತಿ ಜೀವ ತೆತ್ತಿದ್ದಾಳೆ. ಸುಮತಿ ಬೆರೋಬ್ಬನನ್ನು ಮದುವೆಯಾಗುತ್ತಿದ್ದಾನೆ ಎಂದು ಸುಮತಿ ಸ್ವಂತ ಅಕ್ಕನ ಗಂಡ ಭಾವ ವೆಂಕಟೇಶ್ ಅಸೂಯೆಯಿಂದ ಕೃತ್ಯ ಎಸಗಿದ್ದು ಆಕೆ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾನೆ ಮನೆಯಲ್ಲಿ ಜಾನುವಾರಗಳಿಗೆ ವಿಷವಿಕ್ಕಿದ್ದಾನೆ ಇದರಿಂದ ಮದುವೆ ಸಂಭ್ರಮದಲ್ಲಿರಬೇಕಾದ ಸುಮತಿ ಕುಟುಂಬ ದುರಂತದಲ್ಲಿ ಮುಳುಗಿದೆ. ಈ ಘಟನೆಯಿಂದ ಒಮ್ಮೆಲೆ ಗ್ರಾಮಸ್ಥರು ಭಯಭೀತರಾಗಿದ್ದು. ಸ್ಥಳೀಯರು ಪೂರ್ಣ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿರುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6


