ಶ್ರೀನಿವಾಸಪುರ:ಪೋಲಿಸರೆಂದು ನಂಬಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಪಟ್ಟಣದ ಜನಬಿಡದಿ ವೃತ್ತ ಆಗಿರುವ ಪವನ್ ಆಸ್ಪತ್ರೆ ಬಳಿ ನಡೆದಿದೆ.
ಕಲ್ಲೂರು ಗ್ರಾಮದ ವೃದ್ದೆ ವೆಂಕಟಲಕ್ಷ್ಮಮ್ಮ ಮನೆಗೆ ಸರಕು ಖರೀದಿಸಲು ಆಸ್ಪತ್ರೆ ವೃತ್ತದ ಬಳಿ ನಡೆದು ಹೋಗುತ್ತಿರುವಾಗ ಅಪರಿಚಿತರು ವೆಂಕಟಲಕ್ಷ್ಮಮ್ಮನನ್ನು ಪರಿಚಿತರಂತೆ ಮಾತನಾಡಿ ಕಳ್ಳತನಗಳು ಹೆಚ್ಚಾಗುತ್ತಿವೆ ಮಾಂಗಲ್ಯ ಸರ ತೆಗೆದು ಬ್ಯಾಗ್ ನಲ್ಲಿ ಇಟ್ಟು ಕೊಳ್ಳಿ ಎಂದು ವೃದ್ದೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ತೆಗಿಸಿ ಬ್ಯಾಗ್ ನಲ್ಲಿ ಇಡಿಸಲು ಸಹಾಯ ಮಾಡುವರಂತೆ ಮಾಡಿ ಸರವನ್ನು ಎಗರಿಸಿದ್ದಾರೆ, ಇದಾದ ನಂತರ ಬ್ಯಾಗಲ್ಲಿ ಬಂಗಾರದ ಸರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ವೃದ್ದೆ ಪರಿಚಯಸ್ಥರ ಅಂಗಡಿ ಬಳಿ ಹೋಗಿ ಬ್ಯಾಗ್ ತಗೆದು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ನೋಡಿ ಗಾಭರಿಯಾಗಿದ್ದಾರೆ ಕೂಡಲೆ ಪರಿಚಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೃದ್ದೆ ಹೇಳುವಂತೆ ಪೊಲೀಸರೆಂದು ನಂಬಿಸಿ ಪರಿಚಯಸ್ಥರಂತೆ ನಟಿಸಿ ನಾನು ಧರಿಸಿದ್ದ 40ಗ್ರಾಂ ಮಾಂಗಲ್ಯ ಚೈನು 6.5 ಗ್ರಾಂ ತಾಳಿ ಬಟ್ಟುಗಳ ಅಂದಾಜು 3ಲಕ್ಷ ಮೌಲ್ಯದ ಸರವನ್ನು ನಂಬಿಸಿ ಮೋಸಮಾಡಿ ಯಾಮಾರಿಸಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



