ಶ್ರೀನಿವಾಸಪುರ:ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಘಟನೆ ಬೆಂಗಳೂರು-ಕಡಾಪ ಹೈವೆ ರಸ್ತೆಯಲ್ಲಿ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ನಡೆದಿರುತ್ತದೆ.
ಬುಧವಾರ ರಾತ್ರಿ ಸುಮಾರು ಎಂಟುಗಂಟೆ ಸಮಯದಲ್ಲಿ ತಾಡಿಗೋಳ್ ಕ್ರಾಸ್ ಸಮೀಪದಲ್ಲಿರುವ ಭಗವಾನ್ ಶಾಲೆ ಬಳಿಯ ಒಂಟಿಮನೆಯಲ್ಲಿ ಮನೆಯ ಯಜಮಾನ ರೇಷನ್ ತರಲು ಅಂಗಡಿಗೆ ಹೋಗಿದ್ದ ವೇಳೆ ನಾಲ್ಕು ಜನರಿದ್ದ ಅಪರಿಚಿತರ ಗುಂಪು ಮನೆಯ ಬಳಿ ಕುರಿಶೆಡ್ ಜಾಗದಲ್ಲಿ ಅವಿತಿರುತ್ತಾರೆ ಈ ಸಮಯದಲ್ಲಿ ನಾಯಿ ಬೊಗಳಿದ್ದು ಅನುಮಾನಗೊಂಡ ಮನೆಯ ಯಜಮಾನಿ ಶೆಡ್ ಬಳಿ ನೋಡಿದಾಗ ಅಲ್ಲಿದ್ದ ದಾಂಡಿಗರ ಗುಂಪು ಆಕೆಯನ್ನು ಹೆದರಿಸಿದ್ದಾರೆ ಆಕೆ ಭಯದಿಂದ ಮನೆಯತ್ತಿರ ಓಡಿಬಂದಿದ್ದಾರು ದಾಂಡಿಗರ ಗುಂಪು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ್ದಾರೆ ತಮ್ಮಲ್ಲಿದ್ದ ಪಿಸ್ತೂಲ್ ಲಾಂಗುಗಳು ತೋರಿಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಬೆದರಿಸಿದ ಖದೀಮರು ಮನೆ ಯಜಮಾನಿ ಹಾಕಿಕೊಂಡಿದ್ದ ಮಾಂಗಲ್ಯ,3 ಜೊತೆ ಓಲೆ,6 ಉಂಗುರ,1 ನಕ್ಲೆಸ್, 55 ಸಾವಿರ ಹಣವನ್ನು ತಗೆದುಕೊಂಡು ಹೋಗಿದ್ದಾರೆ.ಮನೆಯಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ
ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ಕೊಟ್ಟು ಪರಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



