ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯದ ಬಾಟಿಲ್ ಹಾಗು ರಸ್ತೆಯಲ್ಲಿ ಸ್ಥಾಪಿಸಿದ್ದ ಪ್ಲಾಸ್ಟಿಕ್ ರಸ್ತೆ ವಿಭಜಕಗಳನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ.ಬಡಿದಾಟದ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.
ಘಟನೆ ನಡೆದು ಎರಡು ದಿನವಾದರು ಪೋಲಿಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಯುವಕರು ರೌಡಿ ಗ್ಯಾಂಗುಗಳಂತೆ ಸಾರ್ವಜನಿಕವಾಗಿ ಮದ್ಯದ ಬಾಟಲಗಳಲ್ಲಿ ಬಡೆದಾಡಿಕೊಂಡು ಸಾರ್ವಜನಿಕವಾಗಿ ಭಿಕರತೆಯಿಂದ ನಡೆದುಕೊಂಡಿದ್ದನ್ನು ಜನ ನೋಡಿದ್ದಾರೆ ದಾರಿ ಹೊಕರು ಘಟನೆಯನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದು ಎನ್ನಲಾದ ಬಿದಿಕಾಳಗದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.ಅದರ ಅಧಾರದಲ್ಲಿ,ವಿಡಿಯೋದಲ್ಲಿ ಇರುವ ದ್ವಿಚಕ್ರ ವಾಹನದ ನಂಬರ್ ಅಧಾರದಲ್ಲಿ ಘಟನೆಯಲ್ಲಿ ಪಾಲ್ಗೋಂಡವರನ್ನು ಹುಡುಕಿ ಹೆಡೆ ಮುರಿ ಕಟ್ಟಲು ಪೋಲಿಸರಿಗೆ ಸಾಧ್ಯ ಇಲ್ಲವ ಎಂದು ಜನತೆ ಪ್ರಶ್ನಿಸಿದ್ದಾರೆ.
ಸಿನಿಮಾ ವಿಲಗಳ ರಿತಿ ಫೊಸು
ಜನ ನೋಡು ನೋಡುತ್ತಿದ್ದಂತೆ ಬಡಿದಾಡಿಕೊಂಡು ಯುವಕರು ಪ್ಲಾಸ್ಟಿಕ್ ವಿಭಜಕಗಳನ್ನು ಗದೆಯಂತೆ ಎತ್ತಿಕೊಂಡು ಸಿನಿಮಾಗಳಲ್ಲಿನ ಭಯಂಕರ ವಿಲನಗಳ ರೀತಿ ಫೋಸು ಕೊಟ್ಟಿದ್ದು ಸಾರ್ವಜನಿಕರನ್ನು ಆತಂಕಕ್ಕೆ ಈಡುಮಾಡಿದೆ
ಶ್ರೀನಿವಾಸಪುರ ಪೋಲಿಸರು ಒತ್ತಾಯಕ್ಕೆ ಎನ್ನುವಂತೆ ಇಬ್ಬರನ್ನು ಬಂಧಿಸಿ ಕೈತೊಳೆದುಕೊಂಡಿದ್ದಾರೆ ಎನ್ನುವ ಮಾತು ಎಲ್ಲಡೆ ಕೇಳಿಬರುತ್ತಿದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Monday, June 16