ಶ್ರೀನಿವಾಸಪುರ:ದಾಯದಿಗಳ ನಡುವಿನ ಜಮೀನಿನ ವಿವಾದ ಗಲಾಟೆಗಳಾಗಿ ಎರಡು ಕುಟುಂಬದವರು ಬಡಿದಾಡಿಕೊಂಡಿರುವ ಘಟನೆ ರೋಣೂರು ಹೋಬಳಿಯ ದಿಂಬಾಲ ಗ್ರಾಮದಲ್ಲಿ ನಡೆದಿರುತ್ತದೆ.
ದಾಯಾದಿ ಕಲಹದಲ್ಲಿ ದಂಪತಿ ಗಾಯಗೊಂದ್ದು ಇವರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ವಿನಾಕಾರಣ ಬಂದು ಹಲ್ಲೇ ಮಾಡಿದ್ದಾರೆಂದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಾರೆಡ್ಡಿ ಆರೋಪ ಮಾಡಿರುತ್ತಾರೆ.
ಅಣ್ಣ-ತಮ್ಮಂದಿರ ನಡುವಿನ ಜಮೀನು ವಿವಾದ ನ್ಯಾಯಾಲಯದಲ್ಲಿದೆ,ಇದನ್ನು ದಾಖಲು ಮಾಡಿರುವುದನ್ನೆ ದೃಷ್ಟಿಯಲ್ಲಿರಿಸಿಕೊಂಡು
ಅಗಾಗ ಖ್ಯಾತೆ ತಗೆದು ಜಗಳ ಕಾಯುತ್ತಿದ್ದರು ಎಂದು ಶಿವಾರೆಡ್ಡಿ ಹೇಳುತ್ತಾರೆ.
ಶಿವಾರೆಡ್ಡಿ ತನ್ನ ಸ್ವಂತ ದೊಡ್ಡಪ್ಪನ ಮಕ್ಕಳಾದ ಸುಧಾಕರ್, ಶ್ರೀದರ್, ಚಂದ್ರಾ ರೆಡ್ಡಿ, ಬೈರೆಡ್ಡಿ ಒಗ್ಗೂಡಿ ನನ್ನ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



