ಶ್ರೀನಿವಾಸಪುರ:ಕ್ಷುಲ್ಲಕ ಕಾರಣಕ್ಕಾಗಿ ಯುವಕರ ನಡುವೆ ಬಡಿದಾಟವಾಗಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ತರಕಾರಿ ರೈತರು ಹೆಚ್ಚಾಗಿ ಇರುವ ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿರುತ್ತದೆ.ಯುವಕರ ನಡುವೆ ನಡೆದಂತ ಗಲಾಟೆಯಲ್ಲಿ ಮೂರು ಯುವಕರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಶೀಗೆಹಳ್ಳಿ ಗ್ರಾಮದಲ್ಲಿ ಪವನ್ ಎಂಬುವರು ತಮ್ಮ ಸ್ನೇಹಿತ ಮಾತನಾಡಿಕೊಂಡು ಕುಳತಿದ್ದಾಗ ಅಲ್ಲೆ ಇದ್ದ ಬಾಬು ಎನ್ನುವರು ಜೋರಾಗಿ ಮಾತನಾಡ ಬೇಡವೆಂದು ರಗಳೆ ತಗೆದಿದ್ದಾನೆ ಇದಕ್ಕೆ ಪವನ್ ನಾನು ಮಾತನಾಡಿಕೊಳ್ಳುತ್ತಿದ್ದರೆ ನಿನಗೇನು ಅಬ್ಯಂತರ ಎಂದಿದ್ದಕ್ಕೆ ಬಾಬು ತೀವ್ರ ಸ್ಥಾಯಿಯಲ್ಲಿ ಗಲಾಟೆಮಾಡಿದ್ದಾನೆ ಈ ಸಂದರ್ಭದಲ್ಲಿ ಪವನ್ ಅಣ್ಣ ಮೋಹನ್ ಹಾಗು ರವಿ ಎಂಬುವರು ಗಲಾಟೆ ಬಿಡಿಸಲು ಮುಂದಾಗ ಬಾಬು ಗಲಾಟೆ ಬೀಡಿಸಲು ಬಂದ ಇಬ್ಬರ ಮೇಲು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಗಲಾಟೆಯಲ್ಲಿ ಪವನ್ ಸೇರಿದಂತೆ ಮೂರು ಮಂದಿ ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



