ಶ್ರೀನಿವಾಸಪುರ:ಕೋಲಾರ ಜಿಲ್ಲೆಯಲ್ಲಿ ಇತ್ತಿಚಿಗೆ ಹೆಚ್ಚುತ್ತಿರುವ ಕ್ರೈಮ್ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಂತಿದೆ ಇತ್ತಿಚಿಗೆ ನಡೆದಂತ ನಾಲ್ಕೈದು ಕೊಲೆ ಕೆಸುಗಳ ವಿಚಾರವಾಗಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆ ವಿರುದ್ದ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೋಲಿಸ್ ಅಧಿಕಾರಿಗಳು ಸಡನ್ ಆಗಿ ಅಲರ್ಟ್ ಆಗಿದ್ದಾರೆ ಪೋಕರಿಗಳು ಪಟಾಲಂಗಳು ಕೂರುವ ಅಡ್ದೆಗಳ ಮೇಲೆ ಏಕಾಏಕಿ ದಾಳಿ ಮಾಡಿರುವ ಪೋಲಿಸರು ಬೀಡಾಡಿ ಪೋಕರಿಗಳಿಗೆ ತಕ್ಕ ಪಾಠಾ ಕಲಿಸಿದ್ದಾರೆ ಇಂದು ಶ್ರೀನಿವಾಸಪುರದ ಹಳೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಕ್ಕೆ ಜೀಪ್ ನುಗ್ಗಿಸಿದ ಪೋಲಿಸರು ನಂದಿನಿ ಪಾರ್ಲರ್ ಹಿಂಬಾಗದಲ್ಲಿ ಅರಾಮಾಗಿ ಸಿಗರೇಟ್ ಹೊಡೆಯುತ್ತಿದ್ದ ಬಿಲ್ಡ್ ಪ ಕೊಡುತ್ತ ಕೂತು ಹರಟೆ ಹೊಡೆಯುತ್ತಿದ್ದ ಕಾಲೇಜು ಹುಡುಗರಿಗೆ ಬೆತ್ತ ಬೀಸಿ ಅಲ್ಲಿಂದ ಓಡಿಸಿದ್ದಾರೆ ಬಾಲಕಿಯರ ಕಾಲೇಜು ಆವರಣದಲ್ಲಿ ಗುಂಪುಗಳು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಯುವಕರಿಗೆ ಇನ್ನೊಮ್ಮೆ ಇತ್ತ ಬರಬಾರದು ಎಂದು ಎಚ್ಚರಿಸಿ ಕಳಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಗಳಾದ ಜೈರಾಮ್ ಹಾಗೂ ನಂಜುಂಡಪ್ಪ ರವರು ಬಾಲಕೀಯರ ಕಾಲೇಜಿಗೆ ಹೋಗಿ ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ ಆತಂಕವಿಲ್ಲದೆ ಕಾಲೇಜುಗಳಿಗೆ ಬಂದು ವಿದ್ಯಾಭ್ಯಾಸವನ್ನು ಮಾಡಿ ಹೆತ್ತವರಿಗೆ ಗೌರವ ತರುವ ನಿಟ್ಟಿನಲ್ಲಿ ಕಷ್ಟಪಟ್ಟು ಓದುವ ಮೂಲಕ ಉತ್ತಮ ಸಾಧನೆ ಮಾಡಿ ಪುಂಡು ಪೋಕರಿಗಳಿಗೆ ಹೆದರಬೇಡಿ ನಿಮಿಗ್ಯಾರಿಗಾದರು ತೊಂದರೆ ಆದರೆ ನೇರವಾಗಿ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡುವಂತೆ ಹೇಳಿದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



