ಶ್ರೀನಿವಾಸಪುರ:ಗ್ರಾಮದೇವತೆ ಶ್ರೀಚೌಡೇಶ್ವರಿ ದೇವರಿಗೆ ಜೇಷ್ಠಮಾಸದ ಅಮಾವಸ್ಯೆ ಪೂಜೆಯನ್ನು ಸತ್ಸಂಗ ಬಳಗದ ಗುರುಗಳಾದ ಸತ್ಯಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸತ್ಯಮೂರ್ತಿಯವರು ಮಾತನಾಡಿ ಜೇಷ್ಠಮಾಸ ಅಂತ್ಯ ಹಾಗು ಆಷಾಡ ಮಾಸದ ಆರಂಭದಲ್ಲಿ ಶಕ್ತಿದೇವತೆಗೆ ಅನಾವರಣ ಪೂಜೆ ಮಾಡಲಾಗುತ್ತದೆ ಇದೊಂದು ವೈಶಿಷ್ಟಪೂರ್ಣವಾದ ಲೋಕಕಲ್ಯಾಣಾರ್ಥವಾಗಿ ಮಾಡುವಂತ ಪೂಜೆಯಾಗಿದ್ದು ಗ್ರಾಮದ ಸುಹಾಸಿನಿಯರಿಂದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರೀಚಕ್ರ ಪೂಜೆಯಲ್ಲಿ ಒಂಬತ್ತು ಆವರಣಗಳಲ್ಲಿ ನವ ದುರ್ಗೆಯರನ್ನು ಅಹ್ವಾನಿಸಿ ಪೂಜಿಸಲಾಗುತ್ತದೆ ಒಂಬತ್ತು ಬಾರಿ ಅಭಿಷೇಕ ಒಂಬತ್ತು ಬಾರಿ ಆರತಿ ಮತ್ತು ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ಅಲಂಕಾರ ಮಾಡಿ ಲೋಕದಲ್ಲಿನ ಸಮಸ್ಯೆಗಳು ದೂರವಾಗಿ ಜನತೆ ಸುಖ ಶಾಂತಿಃ ನೆಮ್ಮದಿಯ ಜೀವನ ಮಾಡಲು ನೇರವಾಗುವಂತೆ ದೇವರನ್ನು ಕೋರಲಾಗುತ್ತದೆ ಎಂದರು.
ಸೋಮವಾರದಿಂದ ಶಂಕರ ಮಠದಲ್ಲಿ ವಾರಾಹಿ ನವರಾತ್ರಿ ಉತ್ಸವಗಳು ಒಂಬತ್ತು ದಿನಗಳಕಾಲ ನಡೆಯಲಿದ್ದು ಪ್ರತಿದಿನ ಸಂಜೆ ಪೂಜಾಕಾರ್ಯಕ್ರಮ ಹಾಗು ಪ್ರವಚನ ಕಾರ್ಯಕ್ರಮ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಶಾಂತಮ್ಮ, ಸತ್ಸಂಗ ಬಳಗದ ಸಂಚಾಲಕಿ ಮಂಗಳಾ,ಎಸ್.ಎಸ್.ವಿ.ಎಸ್.ಟ್ರಸ್ಟ್ ಮುಖ್ಯಸ್ಥರಾದ ವನಜಾಕ್ಷಮ್ಮ,ಧನಲಕ್ಷ್ಮೀ,ಮಾಲಿನಿ, ಮುನಿಯಮ್ಮ, ಚಂದ್ರೇಗೌಡ,ಪ್ರಧಾನ ಅರ್ಚಕ ವೇದ ಬ್ರಹ್ಮಸುಬ್ರಮಣ್ಯ,ಮುಂತಾದವರು ಪಾಲ್ಗೋಂಡಿದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



