ಶ್ರೀನಿವಾಸಪುರ:ಗ್ರಾಮದೇವತೆ ಶ್ರೀಚೌಡೇಶ್ವರಿ ದೇವರಿಗೆ ಜೇಷ್ಠಮಾಸದ ಅಮಾವಸ್ಯೆ ಪೂಜೆಯನ್ನು ಸತ್ಸಂಗ ಬಳಗದ ಗುರುಗಳಾದ ಸತ್ಯಮೂರ್ತಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸತ್ಯಮೂರ್ತಿಯವರು ಮಾತನಾಡಿ ಜೇಷ್ಠಮಾಸ ಅಂತ್ಯ ಹಾಗು ಆಷಾಡ ಮಾಸದ ಆರಂಭದಲ್ಲಿ ಶಕ್ತಿದೇವತೆಗೆ ಅನಾವರಣ ಪೂಜೆ ಮಾಡಲಾಗುತ್ತದೆ ಇದೊಂದು ವೈಶಿಷ್ಟಪೂರ್ಣವಾದ ಲೋಕಕಲ್ಯಾಣಾರ್ಥವಾಗಿ ಮಾಡುವಂತ ಪೂಜೆಯಾಗಿದ್ದು ಗ್ರಾಮದ ಸುಹಾಸಿನಿಯರಿಂದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರೀಚಕ್ರ ಪೂಜೆಯಲ್ಲಿ ಒಂಬತ್ತು ಆವರಣಗಳಲ್ಲಿ ನವ ದುರ್ಗೆಯರನ್ನು ಅಹ್ವಾನಿಸಿ ಪೂಜಿಸಲಾಗುತ್ತದೆ ಒಂಬತ್ತು ಬಾರಿ ಅಭಿಷೇಕ ಒಂಬತ್ತು ಬಾರಿ ಆರತಿ ಮತ್ತು ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಮತ್ತು ಅಲಂಕಾರ ಮಾಡಿ ಲೋಕದಲ್ಲಿನ ಸಮಸ್ಯೆಗಳು ದೂರವಾಗಿ ಜನತೆ ಸುಖ ಶಾಂತಿಃ ನೆಮ್ಮದಿಯ ಜೀವನ ಮಾಡಲು ನೇರವಾಗುವಂತೆ ದೇವರನ್ನು ಕೋರಲಾಗುತ್ತದೆ ಎಂದರು.
ಸೋಮವಾರದಿಂದ ಶಂಕರ ಮಠದಲ್ಲಿ ವಾರಾಹಿ ನವರಾತ್ರಿ ಉತ್ಸವಗಳು ಒಂಬತ್ತು ದಿನಗಳಕಾಲ ನಡೆಯಲಿದ್ದು ಪ್ರತಿದಿನ ಸಂಜೆ ಪೂಜಾಕಾರ್ಯಕ್ರಮ ಹಾಗು ಪ್ರವಚನ ಕಾರ್ಯಕ್ರಮ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಶಾಂತಮ್ಮ, ಸತ್ಸಂಗ ಬಳಗದ ಸಂಚಾಲಕಿ ಮಂಗಳಾ,ಎಸ್.ಎಸ್.ವಿ.ಎಸ್.ಟ್ರಸ್ಟ್ ಮುಖ್ಯಸ್ಥರಾದ ವನಜಾಕ್ಷಮ್ಮ,ಧನಲಕ್ಷ್ಮೀ,ಮಾಲಿನಿ, ಮುನಿಯಮ್ಮ, ಚಂದ್ರೇಗೌಡ,ಪ್ರಧಾನ ಅರ್ಚಕ ವೇದ ಬ್ರಹ್ಮಸುಬ್ರಮಣ್ಯ,ಮುಂತಾದವರು ಪಾಲ್ಗೋಂಡಿದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28