ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಾಗು ಜನ ಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳ ಮೇಲೆನ ಜಿಎಸ್ಟಿ ಹಿಂಪಡೆಯ ಬೇಕು ಎಂದು ರೈತ ಹಾಗು ಕಾರ್ಮಿಕ ಮುಖಂಡ ಪಾತಕೋಟ ನವೀನ್ ಕುಮಾರ್ ಅಗ್ರಹಿಸಿದರು.ಅವರು ಮಾತನಾಡಿ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಿಂಪಡೆಯಬೇಕು ಎಂದು ಉತ್ತಾಯಿಸಿ ಆಂದೋಲನ ಪ್ರಾರಂಭಿಸಿದ್ದು ಅದರಂತೆ ತಾಲ್ಲೂಕಿನ ನೆಲವಂಕಿ ಹೋಬಳಿಯ ಲಕ್ಷ್ಮೀಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ರೈತ ವಿರೋದಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿತಿಗಳಿಂದ ರೈತರು ಜನಸಾಮಾನ್ಯರು ನರಳುವಂತಾಗಿದೆ ಎಂದು ದೂರಿದರು ಜನಸಾಮನ್ಯರ ಅನಕೂಲಕ್ಕಾಗಿ ಯಾವುದೆ ಅಜೆಂಡ ಇಲ್ಲದೆ ಸರ್ಕಾರಗಳನ್ನು ನಡೆಸುತ್ತಿದ್ದಾರೆ ಮಿತಿಮೀರಿದ ತೆರೆಗಳನ್ನು ವಿಧಿಸುತ್ತಿರುವುದರಿಂದ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಮುಖಂಡ ವೀರಪ್ಪರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಕೃಷಿ ಸಾಂಪ್ರದಾಯಿಕ ಪರಿಕಲ್ಪನೆಗೆ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು ನೆಲವಂಕಿ ಹೋಬಳಿಯ ಗೌರವಾಧ್ಯಕ್ಷ ಜಯರಾಮರೆಡ್ಡಿ ಅಧ್ಯಕ್ಷ ಪಿಜಿ ನಾರಾಯಣಸ್ವಾಮಿ ಕಾರ್ಯದರ್ಶಿಸೀನಪ್ಪ ಉಪಾಧ್ಯಕ್ಷ ರಾಜಾರೆಡ್ಡಿ ಮತ್ತು ನಾಗರಾಜ ಶಾಸ್ತ್ರಿ ಸಹ ಕಾರ್ಯದರ್ಶಿ ವೆಂಕಟಸ್ವಾಮಿರೆಡ್ಡಿ ಮತ್ತು ಗಂಗಪ್ಪ ಸದಸ್ಯರಾದ ಬಿವಿ ವೆಂಕಟೇಶ್ ಆರ್ ವೆಂಕಟರವಣಪ್ಪ ಓಬಣ್ಣ ನಾಗರಾಜು ಕೃಷ್ಣಮೂರ್ತಿ ನಾರಾಯಣಸ್ವಾಮಿ ಪಿಎಂ ನಾಗರಾಜ ವೆಂಕಟರೆಡ್ಡಿ ಕಿವಿ ಬಂಗಾರಪ್ಪ ವೆಂಕಟರಾಮಪ್ಪ ತಾಲೂಕು ಮುಖಂಡರಾದ ಆರ್ ವೆಂಕಟೇಶ್ ಸೈಯದ್ ಫಾರೂಕ್ ಮುಂತಾದವ್ರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15