ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಾಗು ಜನ ಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳ ಮೇಲೆನ ಜಿಎಸ್ಟಿ ಹಿಂಪಡೆಯ ಬೇಕು ಎಂದು ರೈತ ಹಾಗು ಕಾರ್ಮಿಕ ಮುಖಂಡ ಪಾತಕೋಟ ನವೀನ್ ಕುಮಾರ್ ಅಗ್ರಹಿಸಿದರು.ಅವರು ಮಾತನಾಡಿ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಿಂಪಡೆಯಬೇಕು ಎಂದು ಉತ್ತಾಯಿಸಿ ಆಂದೋಲನ ಪ್ರಾರಂಭಿಸಿದ್ದು ಅದರಂತೆ ತಾಲ್ಲೂಕಿನ ನೆಲವಂಕಿ ಹೋಬಳಿಯ ಲಕ್ಷ್ಮೀಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ರೈತ ವಿರೋದಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿತಿಗಳಿಂದ ರೈತರು ಜನಸಾಮಾನ್ಯರು ನರಳುವಂತಾಗಿದೆ ಎಂದು ದೂರಿದರು ಜನಸಾಮನ್ಯರ ಅನಕೂಲಕ್ಕಾಗಿ ಯಾವುದೆ ಅಜೆಂಡ ಇಲ್ಲದೆ ಸರ್ಕಾರಗಳನ್ನು ನಡೆಸುತ್ತಿದ್ದಾರೆ ಮಿತಿಮೀರಿದ ತೆರೆಗಳನ್ನು ವಿಧಿಸುತ್ತಿರುವುದರಿಂದ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಮುಖಂಡ ವೀರಪ್ಪರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಕೃಷಿ ಸಾಂಪ್ರದಾಯಿಕ ಪರಿಕಲ್ಪನೆಗೆ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು ನೆಲವಂಕಿ ಹೋಬಳಿಯ ಗೌರವಾಧ್ಯಕ್ಷ ಜಯರಾಮರೆಡ್ಡಿ ಅಧ್ಯಕ್ಷ ಪಿಜಿ ನಾರಾಯಣಸ್ವಾಮಿ ಕಾರ್ಯದರ್ಶಿಸೀನಪ್ಪ ಉಪಾಧ್ಯಕ್ಷ ರಾಜಾರೆಡ್ಡಿ ಮತ್ತು ನಾಗರಾಜ ಶಾಸ್ತ್ರಿ ಸಹ ಕಾರ್ಯದರ್ಶಿ ವೆಂಕಟಸ್ವಾಮಿರೆಡ್ಡಿ ಮತ್ತು ಗಂಗಪ್ಪ ಸದಸ್ಯರಾದ ಬಿವಿ ವೆಂಕಟೇಶ್ ಆರ್ ವೆಂಕಟರವಣಪ್ಪ ಓಬಣ್ಣ ನಾಗರಾಜು ಕೃಷ್ಣಮೂರ್ತಿ ನಾರಾಯಣಸ್ವಾಮಿ ಪಿಎಂ ನಾಗರಾಜ ವೆಂಕಟರೆಡ್ಡಿ ಕಿವಿ ಬಂಗಾರಪ್ಪ ವೆಂಕಟರಾಮಪ್ಪ ತಾಲೂಕು ಮುಖಂಡರಾದ ಆರ್ ವೆಂಕಟೇಶ್ ಸೈಯದ್ ಫಾರೂಕ್ ಮುಂತಾದವ್ರು ಇದ್ದರು.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27