ಕೋಲಾರ :ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೆಸೆತ್ತು ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬಳು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತರನ್ನು ತಾಯಿ ಪ್ರಮೀಳ (36) ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಎಂದು ಗುರತಿಸಲಾಗಿದ್ದು. ಇವರು ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿಯ ಬೆಗ್ಲಿಬೆಣಜೇನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಆಟೋ ಚಾಲಕರಾಗಿರುವ ಸುರೇಶ್ ಅವರ ಪತ್ನಿ ಪ್ರಮೀಳಾ ಗೃಹಿಣಿ. ಇವರ ಮಗಳು ಸ್ವಪ್ನಾ ಬಿಕಾಂ ಪದವೀಧರೆಯಾಗಿ, ಉನ್ನತ ವ್ಯಾಸಂಗಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಮಗ ರಾಮ್ಚರಣ್ ಪಿಯುಸಿ ವ್ಯಾಸಂಗ ಮುಗಿಸಿದ್ದು, ಬಿಇ ವ್ಯಾಸಂಗ ಮಾಡಲು ಕಾಲೇಜೊಂದರಲ್ಲಿ ಸೀಟು ಪಡೆದುಕೊಂಡಿದ್ದ ಸುರೇಶ್ ಆಟೋ ನಡೆಸಿಕೊಂಡು ಜೀವನ ಮಾಡುತಿದ್ದು,ಸುಮಾರು 15 ಲಕ್ಷ ರೂಪಾಯಿ ಸಾಲ ಮಾಡಿ ನೂತನವಾಗಿ ಕಟ್ಟಿಕೊಂಡಿದ್ದು ಮನೆ ಸಾಲ ತೀರಿಸಲು ಹೆಣಗಾಡುತ್ತಿದ್ದ ಎನ್ನಲಾಗಿದ್ದು ಇತ್ತಿಚಿಗೆ ತಾನು ಒಡಿಸುತ್ತಿದ್ದ ಆಟೋ ಫೈನಾನ್ಸ್ ಸಂಸ್ಥೆಯವರು ಸಿಝ್ ಮಾಡಿದ್ದು ಈ ವಿಚಾರದಲ್ಲಿ ಸುಂದರ ಸಂಸಾರದಲ್ಲಿ ಸಾಲದ ಕೋಲಾ ಹಲ ಎದ್ದು ದಂಪತಿ ನಡುವೆ ಜಗಳವಾಗುತ್ತಿತ್ತು. ಎಂದಿನಂತೆ ಬೆಳಗ್ಗೆ ಸುರೇಶ್ ಬಾಡಿಗೆ ಆಟೋ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಪ್ರಮಿಳಾ ತನ್ನಿಬ್ಬರು ಮಕ್ಕಳನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದು ರಾತ್ರಿ 9 ಗಂಟೆ ಸುಮಾರಿನಲ್ಲಿ ಸುರೇಶ್ ಮನೆಗೆ ಬಂದಾಗ ಪತ್ನಿ ಮತ್ತು ಮಕ್ಕಳು ಇಲ್ಲದಿರುವುದನ್ನು ಗಮನಿಸಿ ಪತ್ನಿಯ ಮೊಬೈಲ್ಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿ ನಾವು ಹೊರಗೆ ಬಂದಿದ್ದೇವೆ, ಕೆಲ ಸಮಯದ ಬಳಿಕ ಬರುತ್ತೇವೆಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.ಈ ಮೂವರು ಪಕ್ಕದ ಊರಾದ ಛತ್ರಿಕೋಡಿಹಳ್ಳಿಗೆ ಹೋಗಿದ್ದು, ಅಲ್ಲಿನ ಕೃಷಿಹೊಂಡಕ್ಕೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.
ಪತ್ನಿ, ಮಕ್ಕಳು ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದಿದ್ದಾಗ ಗಾಬರಿಯಾದ ಸುರೇಶ್ ಪರಿಚಯಿಸ್ಥರನ್ನು ನಂಟರನ್ನು ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ.ಮತ್ತೆ ಬೆಳಿಗ್ಗೆ ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಂಡು ಹೋದಾಗ ಕೃಷಿಹೊಂಡದಲ್ಲಿ ಮೂವರ ಶವಗಳು ಪತ್ತೆಯಾಗಿವೆ.ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ!
- ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!
- ಖಾಸಗಿ ಫೈನಾನ್ಸ್ ಕಿರುಕುಳ,ತಾಯಿ ಮಗ ಮಗಳು ಆತ್ಮಹತ್ಯೆ!
- ಕೋಲಾರ ಜಿಲ್ಲೆಗೆ ಆಗಸ್ಟ್ 1ರಿಂದ ಹೊಸ ಜಿಲ್ಲಾಧಿಕಾರಿ ರವಿಕುಮಾರ್. M.R
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
Sunday, July 26



