ಶ್ರೀನಿವಾಸಪುರ:ವಾಸವಿ ಮಾತೆ ಅನ್ಯಾಯದ ವಿರುದ್ಧ ಹೋರಾಡಿ,ಅಗ್ನಿ ಪ್ರವೇಶ ಮಾಡಿ, ಅಹಿಂಸೆಯ ಮೂಲಕ ಲೋಕಕ್ಕೆ ಮಾದರಿಯಾದ ಜಗನ್ಮಾತೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಶ್ರೀವಾಸವಿ ಕನ್ಯಕಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸವಿ ಜಯಂತಿ ಶುಭಾಶಯಕೋರಿ ಮಾತನಾಡಿದರು.ವಾಸವಿ ಮಾತೆಯನ್ನು ಆರಾಧಿಸುವ ಆರ್ಯ ವೈಶ್ಯ ಸಮಾಜದವರು ಅಹಿಂಸೆ ಮತ್ತು ತ್ಯಾಗವನ್ನು ನಂಬಿದ ಜನಾಂಗವಾಗಿದ್ದು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವಂತ ಸಹೃದಯಿಗಳು ಎಂದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಆರ್ಯ ವೈಶ್ಯ ಸಮಾಜ ಶಿಸ್ತಿನೊಂದಿಗೆ ಯೋಚಿಸಿ ತೀರ್ಮಾನ ಮಾಡುವ ಸಮಾಜ. ಅವರು ದುಡಿಮೆಯ ಲೆಕ್ಕಾಚಾರದಲ್ಲಿ ಸಮಾಜಕ್ಕೂ ಕೊಡುಗೆ ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬೀಮಗುಂಟಪಲ್ಲಿಶಿವಾರೆಡ್ಡಿ,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ ಆರ್ಯವೈಶ್ಯ ಮಂಡಳಿ ಪ್ರಮುಖರಾದ ಎಸ್.ಬಿ.ಅಮರನಾಥ್,ಯೈಆರ್.ಎಸ್.ಪ್ರಕಾಶ್.ಸೂರ್ಯನಾರಯಣಶೆಟ್ಟಿ, ಸತ್ಯನಾರಯಣಶೆಟ್ಟಿ,ಜೆರಾಕ್ಸ್ ಬದ್ರಿ,ಸುಜಯ್,ಮ್ಯಾಂಗೋ ವ್ಯಾಲಿ ಅಮರನಾಥ್,ಅಂಜನಾದ್ರಿ ನಾಗರಾಜ್,ಸೀತಾರಾಮ್ ಮುಂತಾದವರು ಇದ್ದರು
ಮಾಜಿ ಸ್ಪೀಕರ್ ಭೇಟಿ
ಮೂರು ದಿನಗಳ ಕಾಲ ಆಯೋಜಿಸಿದ್ದ ವಾಸವಿ ಜಯಂತಿ ಅಂಗವಾಗಿ ಎರಡನೆ ದಿನವಾದ ಶನಿವಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕನ್ಯಾಕಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಆರ್ಯ ವೈಶ್ಯ ಸಮಾಜಕ್ಕೆ ವಾಸವಿಜಯಂತಿ ಶುಭಾಶಯ ಕೋರಿದರು.
Trending
- ಶ್ರೀನಿವಾಸಪುರ:ವಾಸವಿ ಜಯಂತಿಯಲ್ಲಿ ಪಾಲ್ಗೊಂಡ ದಳಪತಿಗಳು!
- ಕೋಲಾರ:ಸೇವಾ ನ್ಯೂನತೆ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ!
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
Sunday, April 26



