ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಿಂದ ಒಬೇನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಗುಂಡಿ ಬಿದ್ದು ಹಾಳಾಗಿದೆ ಈ ರಸ್ತೆ ಮಾಡಲು ಯಾರು ಮುಂದಾಗದ ಹಿನ್ನಲೆಯಲ್ಲಿ ಪಂಚಾಯಿತಿ ಸದಸ್ಯ ಹೆಬ್ಬಟಆನಂದ್ ಮುಂದೆ ನಿಂತು ಗುಂಡಿಗಳಿಗೆ ಗೊರಜು ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ ಈ ಬಗ್ಗೆ ಮಾತನಾಡಿದ ಅವರು ಸುಮಾರು ಒಂದು ಕಿಲೋಮೀಟರ್ ಸಂಪೂರ್ಣವಾಗಿ ಹಾಳಾಗಿದೆ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆಗಾಲ ಪ್ರಾರಂಭವಾಗಿರುವುದರಿಂದ ರಸ್ತೆ ಗುಂಡಿಗಳು ಪೂರ್ತಿ ಮಳೆ ನೀರು ಶೇಖರಣೆಯಾಗಿ ರಸ್ತೆ ಕಾಣದಂತಾಗಿ ವಾಹನಗಳು ಓಡಾಡಲು ಸಮಸ್ಯೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಯಾವ ಇಲಾಖೆಯಿಂದ ಬರುತ್ತದೆ ಮಾಹಿತಿ ಇಲ್ಲ ರೈತಾಪಿ ಜನರ ಅನಕೂಲಕ್ಕಾಗಿ ತಾತ್ಕಾಲಿಕ ಪರಿಹಾರವಾಗಿ ಗುಂಡಿಗಳಿಗೆ ಮಣ್ಣು ತುಂಬಿಸುವ ಮೂಲಕ ಓಡಾಟಕ್ಕೆ ಅನುವು ಮಾಡಿಕೊಡುತ್ತಿರುವುದಾಗಿ ಹೇಳಿದರು.




