ಶ್ರೀನಿವಾಸಪುರ:ಮನೆಗೆ ಬಂದು ಹೋಗುತ್ತಿದ್ದ ಗಂಡನ ಸ್ನೇಹಿತನೊಂದಿಗೆ ಸಲುಗೆ ಏರ್ಪಟ್ಟು ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಸುತ್ತಾಡಿ ಗಂಡನಿಂದ ದೂರವಾಗಿದ್ದಾಳೆ ನಂತರ ಪ್ರಿಯಕರನಿಗೂ ಸಾಕಾದ ಮೇಲೆ ಮಹಿಳೆಯೊಬ್ಬಳು ಪ್ರಿಯಕರ ಮೋಸ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಗೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಹೋಗಿ ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ ಕುಳಿತ ಘಟನೆ ಪಟ್ಟಣದ ವಲ್ಲಭಾಯ್ ರಸ್ತೆಯಲ್ಲಿ ನಡೆದಿದೆ.ಈ ಸಂಬಂದ ಮಹಿಳೆ ದೂರಿನನ್ವಯ ಅಮರ್ ಎಂಬಾತನನ್ನು ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ತಿಳಿದವರು ಹೇಳಿದಂತೆ
ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಮಹಿಳೆ ಗಂಡನ ಸ್ನೇಹಿತನ ಸಹವಾಸಕ್ಕೆ ಬಿದ್ದು ಗಂಡನನ್ನು ಕಡಗಣಿಸಿ ಪ್ರಿಯಕರನೊಂದಿಗೆ ಸುತ್ತಾಡಿಕೊಂಡಿದ್ದಳು ಕಾಲ ಕಳೆದಂತೆ ಪ್ರಿಯಕರನಿಗೆ ಮಹಿಳೆ ಮೇಲಿನ ಮೋಹ ಕಡಿಮೆಯಾಗಿ ಕೊನೆಗೆ ಮಹಿಳೆಯನ್ನು ದೂರಮಾಡುವ ಪ್ರಯತ್ನಮಾಡಿದ್ದಾನೆ ಇದರ ಅರಿವು ಮಹಿಳೆಗೆ ಬರುವಷ್ಟರಲ್ಲಿ ಆಕೆ ಆರು ತಿಂಗಳ ಬಸುರಿಯಾಗಿದ್ದಾಳೆ ಮುಂದೆ ತುರ್ತಾಗಿ ನಿರ್ಧಾರ ಮಾಡುವ ಪ್ರಯತ್ನದಲ್ಲಿ ಹಳೆ ಗಂಡನನ್ನು ಬಿಟ್ಟಿದ್ದೀನಿ ಈಗ ನನ್ನ ಮದುವೆ ಆಗುವಂತೆ ಪ್ರಿಯಕರನನ್ನು ಒತ್ತಾಯಿಸಿದ್ದಾಳೆ ಮದುವೆ ವಿಚಾರ ಪ್ರಸ್ತಾವನೆ ಆಗುತ್ತಿದ್ದಂತೆ ಆಕೆಯೊಂದಿಗೆ ಪ್ರಿಯಕರ ಬಹು ದೂರ ಸರಿದಿದ್ದಾನೆ ದಿಕ್ಕು ತೊಚದೆ ಮಹಿಳೆ ನನಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸುವಂತೆ ಅಂಗಲಾಚಿ ಬಾಬಾಸಾಹೇಬ್ ಅಂಬೇಡ್ಕರ್ ಫೋಟೊ ಹಿಡಿದುಕೊಂಡು ಪ್ರಿಯಕರನ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದಾಳೆ.ಮಹಿಳೆ ಹೇಳುವಂತೆ ಪ್ರಿಯಕರ ನಾಲ್ಕು ಬಾರಿ ಗರ್ಭಪಾತ ಮಾಡಿಸಿದ್ದಾನಂತೆ
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



