ಕೋಲಾರ:ಜೆಡಿಎಸ್ JD(S) ಮುಖಂಡ ಸಿಎಂಆರ್.ಶ್ರೀನಾಥ್ ಅವರ ನಿವಾಸಕ್ಕೆ ಉಡುಪಿ ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳು ಕೋಲಾರ ನಗರದ ಪೇಟೆಚಾಮನಹಳ್ಳಿಯಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಈ ಸಂದರ್ಭದಲ್ಲಿ ಸಿಎಂಆರ್.ಶ್ರೀನಾಥ್ ಕುಟುಂಬದವರು ಶ್ರೀಗಳನ್ನು ಮನೆಯ ದ್ವಾರದಲ್ಲಿ ಸ್ವಾಗತಿಸಿದರು.ನಂತರ ಶ್ರೀಗಳ ಪಾದಪೂಜೆ ನೆರವೇರಿಸಿದರು ಪಾದಪೂಜೆ ಸ್ವೀಕರಿಸಿದ ಶ್ರೀಗಳು ಫಲ ಮಂತ್ರಾಕ್ಷತೆ ಹಾಗು ಆಶೀರ್ವಚನ ನೀಡಿ ಭಕ್ತರನ್ನು ಆಶೀರ್ವದಿಸಿದರು.
ಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳ
ಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳದಲ್ಲಿ ಕಾಣಸಿಗುತಿತ್ತು ಇಡೀ ಜಗತ್ತಿನಲ್ಲೇ ಅತ್ಯಂತ ಅದ್ಬುತ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಇಷ್ಟೊಂದು ಮಂದಿ ಒಂದು ಕಡೆ ಕಾರ್ಯಕ್ರಮಕ್ಕೆ ಸೇರುವುದು ಮತ್ತೆಲ್ಲೂ ಸಾಧ್ಯವಿಲ್ಲ ಎಂದು ಪೇಜಾವರದ ಶ್ರೀವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಧರ್ಮಶ್ರದ್ಧೆ ಎಂತದ್ದು ಎಂಬುದಕ್ಕಿ ಇದು ಸಾಕ್ಷಿಯಾಗಿದೆ ಮತ್ತು ಮೇಳ ಯಶಸ್ವಿಯಾಗಿದೆ,ಕುಂಭಮೇಳಕ್ಕೆ ಬಂದಂತ ಜನಸ್ತೋಮಕ್ಕೆ ಮಾಡಿದ್ದ ವ್ಯವಸ್ಥೆಗಳು ನಿಜಕ್ಕೂ ಅನನ್ಯ ಎಂದ ಅವರು, ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಜಾಗದಲ್ಲಿ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ವ್ಯವಸ್ಥೆ ಮಾಡಿದ್ದು, ಶ್ಲಾಘನೀಯ ಇದು ನಮ್ಮ ಸನಾತನ ಧರ್ಮ ಶಕ್ತಿ ಎಂದ ಶ್ರೀಗಳು ಇದರ ಮೂಲಕ ರಾಜ್ಯ,ದೇಶ,ವಿಶ್ವಕ್ಕೆ ಎದುರಾಗುವ ಎಲ್ಲಾ ಅನಾಹುತಗಳು ದೂರವಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಸಿಎಂಆರ್ಶ್ರೀನಾಥ್, ಸಹೋದರರಾದ ಸಿಎಂಆರ್.ಪದ್ಮನಾಭ್, ಸಿಎಂಆರ್.ಹರೀಶ್,ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ವೈಶ್ಯ ಸಮುದಾಯದ ಮುಖಂಡ ಗೋವಿಂದರಾಜು,ಬ್ರಾಹ್ಮಣ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26