ನ್ಯೂಜ್ ಡೆಸ್ಕ್:ಮಕ್ಕಳು ಹುಟ್ಟಿದರೆ ತಂದೆ-ತಾಯಿಗಳು ಸಂಭ್ರಮಿಸುತ್ತಾರೆ ಅದರಲ್ಲೂ ಗಂಡು ಮಕ್ಕಳು ಹುಟ್ಟಿದರೆ ಅನಂದ ಪರವಶರಾಗುತ್ತಾರೆ ಗಂಡುಮಗುವಿಗೆ ಜನ್ಮ ನೀಡಿದೆ ಎಂದು ಬೀಗುತ್ತಾರೆ ಪ್ರೀತಿ ಧಾರೆ ಎರೆದು ಪೊಷಿಸುತ್ತಾರೆ. ನಂತರದಲ್ಲಿ ಗಂಡು ಮಗು ಬೆಳೆದು ದೊಡ್ಡವರಾದಂತೆ,ಹೆತ್ತವರು ಹೋರೆಯಾಗಿದ್ದಾರೇನೋ ಎಂಬಂತೆ ಕೆಲ ಮಕ್ಕಳು ವರ್ತಿಸುತ್ತಾರೆ ನಾವ್ಯಾಕೆ ಪೋಷಕರನ್ನು ಪೊಷಿಸಬೇಕು ಎಂಬ ಭಾವನೆಯಲ್ಲಿ ದುಷ್ಟ ಮಕ್ಕಳು ನಡೆದುಕೊಳ್ಳುತ್ತಾರೆ ಅಂತ ಸಾಲಿನಲ್ಲಿ ದುಷ್ಟ ಮಗನೊಬ್ಬ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಕರೆದುಕೊಂಡು ಹೋಗಿ ಹರಿಯುವ ನದಿ ಕಾಲುವೆಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾಯಕ ಘಟನೆ ಆಂಧ್ರದ ಪಲ್ನಾಡು ಜಿಲ್ಲೆಯ ಇಪುರ್ ಮಂಡಲದಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಹೇಳಿರುವಂತೆ ನದಿ ದಂಡೆ ಮೇಲೆ ಕಾರನ್ನು ನಿಲ್ಲಿಸಿದ ವ್ಯಕ್ತಿ ವೃದ್ದ ಕೊಂಡಯ್ಯನನ್ನು ಕಾರಿನಿಂದ ಹೊರತೆಗೆದು, ತನ್ನ ಕೈಗಳಿಂದ ಎತ್ತಿ ಕಾಲುವೆಗೆ ಎಸೆದಿರುತ್ತಾನೆ ಅಲ್ಲಿದ್ದ ರೈತರು ತಕ್ಷಣ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಹಿಡಿದು ಕಾಲುವೆಯಲ್ಲಿ ಬಿದ್ದ ವೃದ್ದನ ಉಳಿಸಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಲಿಲ್ಲ ವೃದ್ಧ ಕೊಂಡಯ್ಯ ನೀರಿನಲ್ಲಿ ಮುಳುಗಿದ್ದಾರೆ ದುಷ್ಟ ಮಗನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



