ಶ್ರೀನಿವಾಸಪುರ:ಪ್ರೀತಿಸಿ ಅಂತರ್ಜಾತಿ ವಿವಾಹವಾದ ಪ್ರೆಮಿಗಳನ್ನು ತಡೆಯಲು ಯುವತಿಯ ಪೋಷಕರು ಮದುವೆಯನ್ನು ವಿರೋಧಿಸಿ ಅಕೆಯನ್ನು ಸಾರ್ವಜನಿಕವಾಗಿ ದರದರನೆ ಎಳೆದೊಯಿದ ಘಟನೆ ಶ್ರೀನಿವಾಸಪುರ ಪಟ್ಟಣದ ಜನಜಂಗುಳಿ ಪ್ರದೇಶವಾದ ತಾಲೂಕು ಕಚೇರಿ ಆವರಣದಲ್ಲಿ ನಡೆದಿರುತ್ತದೆ.
ಅಪ್ಪಟ ಸಿನಿಮಾ ಶೈಲಿಯಲ್ಲಿ ನಡೆದಂತ ಹೈಡ್ರಾಮಾ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬೆರಗುಗಣ್ಣಿನಿಂದ ನೊಡುತ್ತ ನಿಂತಿದ್ದಾರೆ.
ಕೋಲಾರ ತಾಲ್ಲೂಕು ಸಿಂಗೊಂಡಹಳ್ಳಿ ಗ್ರಾಮದ ಅಲೈಕ್ಯ ಹಾಗು ಶ್ರೀನಿವಾಸಪುರ ತಾಲ್ಲೂಕು ಕನಮಪಲ್ಲಿ ಗ್ರಾಮದ ಮಲ್ಲಿಕಾರ್ಜುನನು ಪ್ರೀತಿಸುತಿದ್ದು ಮೂರ್ನಾಲ್ಕು ದಿನಗಳ ಹಿಂದೆ ದೇವಸ್ಥಾನದವೊಂದರಲ್ಲಿ ಮದುವೆಯಾಗಿದ್ದಾರೆ ಮದುವೆಯನ್ನು ಕಾನೂನು ಬದ್ದವಾಗಿ ನೊಂದಣೆ ಮಾಡಿಸಲು ಶ್ರೀನಿವಾಸಪುರದ ಸಬ್ ರಿಜಿಸ್ಟಾರ್ ಕಚೇರಿಗೆ ಬಂದಿರುತ್ತಾರೆ. ಅಲ್ಲಿ ಯುವತಿಯ ಪೋಷಕರು ಕಾದು ಕುಳತಿದ್ದು ಪ್ರೇಮಿಗಳು ಬರುತ್ತಲೆ ಅವರಿದ್ದ ಕಾರಿನಿಂದ ಯುವತಿ ಅಲಖ್ಯಾಳನ್ನು ದರದರನೆ ಎಳೆದುಕೊಂಡು ಹೋಗಿದ್ದಾರೆ ಈ ಸಂದರ್ಭದಲ್ಲಿ ಯುವತಿ ರೋಧನೆ ಮುಗಿಲು ಮುಟ್ಟಿತ್ತು ನಂತರ ಯುವಕನೊಂದಿಗೆ ಬಂದಿದ್ದ ಕೆಲವರು ಯುವತಿ ಪೊಷಕರ ನಡೆಯನ್ನು ವಿರೋಧಿಸಿ ದಬಾಸಿದಾಗ ಪೊಷಕರಿಗೂ ಅಲ್ಲಿದ್ದವರಿಗೂ ವಾಗ್ವಾದ ನಡೆಯಿತು ಯುವಕ ಮಲ್ಲಿಕಾರ್ಜುನ್ ನಿಸ್ಸಹಾಯಕನಾಗಿ ಘಟನೆ ನೊಡುತ್ತ ನಿಂತಿದ್ದು ಪೋಲಿಸರ ಮದ್ಯಪ್ರಶದಿಂದ ಹೈಡ್ರಾಮಾ ಕೋಲಾರದ ಮಹಿಳಾ ಪೋಲಿಸ್ ಠಾಣೆ ಆವರಣಕ್ಕೆ ವರ್ಗಾವಣೆಯಾಗಿದೆ ಅಲ್ಲಿ ಯುವತಿ ಅಲಖ್ಯ ಕಾಣೆಯಾಗಿದ್ದಾಳೆ ಎಂದು ಆಕೆ ಪೋಷಕರು ದೂರು ನೀಡಿದ್ದು ವಿಚಾರಣೆ ನಡೆದಾಗ ಯುವತಿ ನನ್ನ ಸ್ವಯಿಚ್ಚೆಯಿಂದ ಹೋಗಿದ್ದಾಗಿ ಪೋಲಿಸರ ಮುಂದೆ ಹೇಳಿಕೆ ನೀಡಿದಾಗ ಕಾನೂನಿಲ್ಲಿ ಅವಕಾಶ ಇದೆ ಎನ್ನುವ ಬಗ್ಗೆ ಪೋಲಿಸರು ಯುವತಿ ಪೋಷಕರಿಗೆ ಮನವರಿಕೆ ಮಾಡಿದರು ಅವರು ಅಂತರ ಜಾತಿ ವಿವಾಹಕ್ಕೆ ಬಿಲ್ ಕುಲ್ ಒಪ್ಪದೆ ಹಠ ಹಿಡಿದು ಯುವತಿ ಮನವೊಲಿಕೆಗೆ ಮುಂದಾಗಿದ್ದಾರೆ ಶ್ರೀನಿವಾಸಪುರದಲ್ಲಿ ಸಾರ್ವಜನಿಕವಾಗಿ ಕೂಗಾಡಿ ಬಿದಿ ರಂಪ ಮಾಡಿದ ಪೋಷಕರು ಕೋಲಾರದಲ್ಲಿ ಯುವತಿಯನ್ನ ಅಂಗಲಾಚಿ ಬೇಡಿಕೊಂಡಿದ್ದಾರೆ ಹತ್ತು ಕರೆದು ರಂಪಾಟ ಮಾಡುವಾಗ ಯುವತಿ ತಂದೆ ನಾಗೇಶ್ ತಲೆ ಸುತ್ತಿ ಬಿದ್ದು ಆಸ್ಪತ್ರೆಗೆ ದಾಖಲಾದರು ಕ್ಯಾರೆ ಎನ್ನದ ಯುವತಿ ಅಲೈಕ್ಯ ಪ್ರೀತಿಸಿದ ಯುವಕ ಮಲ್ಲಿಕಾರ್ಜುನ್ ನನ್ನೆ ಮದುವೆಯಾದಳು ಎನ್ನುವುದು ಯುವತಿ ಕುಟುಂಬಸ್ಥರ ಆರೋಪ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Monday, June 16