ನ್ಯೂಜ್ ಡೆಸ್ಕ್:ಹೌದು ನಿಜ ಕಣ್ರಿ ಯುವಕನೊಬ್ಬನನ್ನು ಅವನ ಗೆಳತಿಯೆ ಕಿಡ್ನಾಪ್ ಮಾಡಿದ ಘಟನೆ ನಡೆದಿದೆ ತಾನು ಪ್ರೀತಿಸುತ್ತಿರುವ ಗೆಳೆಯ ತನ್ನಿಂದ ಎಲ್ಲಿ ಕೈಜಾರುತ್ತಾನೋ ಎಂದು ಪ್ರೇಮಿಯೊಬ್ಬಳು ಸಿನಿಮಾ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಕಾರಿನಲ್ಲಿ ಪ್ರಿಯಕರನನ್ನು ಅಪಹರಿಸಿದ್ದಾಳೆ ಈ ಘಟನೆಯಲ್ಲಿ ಅನಿರೀಕ್ಷಿತವಾಗಿ ಪೊಲೀಸರು ಪ್ರವೇಶಿಸಿದಾಗ ಕಥೆ ಅಡ್ದ ತಿರುವು ಪಡೆದುಕೊಂಡು ಪ್ರೇಮಿಯ ಪ್ಲಾನ್ ವಿಫಲವಾಗಿದೆ.
ತಿರುಪತಿ ನಗರದಲ್ಲಿ ಲಾಡ್ಜ್ ನಡೆಸುತ್ತಿರುವ ಶ್ರೀನಿವಾಸುಲು ಅಲಿಯಾಸ್ ನಾನಿ (31) ಎಂಬ ಅವಿವಾಹಿತ ಯುವಕನಿಗೆ ಮದನಪಲ್ಲಿಯ ಭಾನು ಎಂಬ ವಿವಾಹಿತೆಯೊಂದಿಗೆ ಪ್ರೇಮಾಂಕುರವಾಗಿದೆ ಈಕೆಯ ಪತಿ ಇತ್ತೀಚೆಗೆ ನಿಧನರಾಗಿದ್ದು ಇಬ್ಬರೂ ಪರಸ್ಪರ ಪರಿಚಯವಾಗಿ ಪ್ರೀತಿ-ಪ್ರೇಮಕ್ಕೆ ತಿರುಗಿತು. ಇದರಿಂದ ಇಬ್ಬರು ಸುಮಾರು 8 ತಿಂಗಳಿಂದ ಆತ್ಮೀಯರಾಗಿದ್ದರು.ಅದರೆ ಏನಾಯಿತೋ ಏನೋ ಕಳೆದ ಮೂರು ತಿಂಗಳಿನಿಂದ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ ಇಬ್ಬರಿಗೂ ಮಾತಿಲ್ಲ ಕಥೆಯಿಲ್ಲ ಇದು ಭಾನುಗೆ ಕೋಪ ತರಿಸಿದೆ ನಾನಿ ನನ್ನತ್ತ ಗಮನ ಹರಿಸುತ್ತಿಲ್ಲ ಎಂದು ಕೊನೆಗೆ ನಾನಿಯನ್ನು ಅಪಹರಿಸಲು ನಿರ್ಧರಿಸಿ ಇದಕ್ಕಾಗಿ ಮದನಪಲ್ಲಿಯ ಐವರು ಯುವಕರನ್ನು ಜೋತೆ ಮಾಡಿಕೊಂಡು ಗುರುವಾರ ಮಧ್ಯಾಹ್ನ ಇನೋವಾ ಕಾರಿನಲ್ಲಿ ತಿರುಪತಿಗೆ ಬಂದು ನಾನಿಯನ್ನು ಅಪಹರಿಸಿದ್ದಾಳೆ ಇದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶೇಷ ತಂಡದೊಂದಿಗೆ ಬೆನ್ನಟ್ಟಿದ ಪೋಲಿಸರು ವಾಯಲ್ಪಾಡು ಬಳಿ ಕಿಡ್ನಾಪರುಗಳಿದ್ದ ಕಾರನ್ನು ಅಡ್ಡಗಟ್ಟಿ ನಾನಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ಕಂಡ ಅಪಹರಣಕಾರರು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಮದನಪಲ್ಲಿಯ ಬಾಬಾ ಫಕ್ರುದ್ದೀನ್, ಮೋಕ್ಷಿತ್, ರಾಜೇಶ್, ರಿಯಾಜ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ನಾನಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



