ನ್ಯೂಜ್ ಡೆಸ್ಕ್:ಸಾಮಾನ್ಯವಾಗಿ ಮಕ್ಕಳಿಗೆ ಮದುವೆ ವಯಸ್ಸು ಬಂದಾಗ ಹೆತ್ತವರು ಅಥಾವ ಪೋಷಕರು ಜವಾಬ್ದಾರಿ ತಗೆದುಕೊಂಡು ಒಳ್ಳೆ ಸಂಬಂಧ ನೋಡಿ ಮದುವೆ ಮಾಡಬೇಕು ಎಂದುಕೊಳ್ಳುತ್ತಾರೆ.ತಮ್ಮ ಮಗ ಅಥಾವ ಮಗಳಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿಗಳನ್ನು ತಿರಿಸಿಕೊಳ್ಳಲು ಆಲೋಚಿಸುತ್ತಾರೆ. ಮಕ್ಕಳು ಕೇಳುವ ಮೊದಲು ಸರಿಯಾದ ಜೋಡಿ ಹುಡಕಲು ಮಕ್ಕಳ ಅಭಿಪ್ರಾಯಗಳನ್ನು ತೆಗೆದುಕೊಂಡು ಮದುವೆಯ ಸಂಬಂಧಗಳನ್ನು ನೋಡಲು ಪ್ರಾರಂಭಿಸುತ್ತಾರೆ.
ಹುಡುಗ ಹುಡುಗಿಯನ್ನು ಇಷ್ಟಪಡದಿದ್ದರೆ ಅಥವಾ ಹುಡುಗಿ ಹುಡುಗನನ್ನು ಇಷ್ಟಪಡದಿದ್ದರೆ ಸಂಬಂಧಗಳು ಸಂಬಂದಗಳು ಮುಂದುವರಿಯದೆ ಅಥಾವ ಕೊಟ್ಟು-ತಗೆದುಕೊಳ್ಳುವ ಒಮ್ಮೊಮ್ಮೆ ಬಗ್ಗೆ ಮದುವೆ ಸಂಬಂದ ಮುರಿದು ಬಿಳುತ್ತವೆ ಇದಕ್ಕೆ ಹುಡುಗನ ಕೆಲಸದ ಬಗ್ಗೆ ಆಸ್ತಿಯ ಬಗ್ಗೆ ಊಹಾಪೊಹಗಳು ಏನೆಲ್ಲಾ ಅಡ್ಡಿ ಆತಂಕದಿಂದ ಮದುವೆಗಳು ನಡೆಯುವುದಿಲ್ಲ ಇದಕ್ಕೆ ಹಲವಾರು ಕಾರಣಗಳು ಇರುತ್ತದೆ, ಆದರೆ ಇಲ್ಲಿನ ಸ್ಟೋರಿಯೇ ಬೆರೆ ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡದೆ ಬರುವಂತ ಮದುವೆ ಸಂಬಂಧವನ್ನು ತಂದೆಯೇ ಹಾಳು ಮಾಡುತ್ತಿದ್ದಾನೆ ಎಂದು ಮಕ್ಕಳೆಲ್ಲ ಕೂಡಿ ತಂದೆ ಕಾಲು ಮುರಿದಿರುವ ಘಟನೆ ಆಂಧ್ರದ ಕರ್ನೂರು ಜಿಲ್ಲೆ ಗೋಣೆಗಂಡ್ಲದಲ್ಲಿ ನಡೆದಿದೆ. ಮಂತರಾಜು(60) ಮತ್ತು ಆದಿಲಕ್ಷ್ಮಿ ದಂಪತಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಿರಿಯ ಮಗಳ ಮದುವೆ ಆಗಿದೆ ಇನ್ನು ಉಳಿದ ಮೂವರಿಗೂ ಮದುವೆ ಆಗಬೇಕಿದೆ
ಆದರೆ,ತಂದೆ ಮಕ್ಕಳಿಗೆ ಮದುವೆ ಸಂಬಂಧ ನೋಡುತ್ತಿಲ್ಲ ಜೊತೆಗೆ ಮದುವೆ ಸಂಬಂಧ ಮಾಡಲು ಬರುವಂತವರಿಗೆ ಇಲ್ಲ ಸಲ್ಲದ ಮಾತು ಹೇಳಿ ಮದುವೆ ಹಂತಕ್ಕೆ ಬರುವಂತ ಸಂಬಂಧ ಹಾಳು ಮಾಡುತ್ತಿದ್ದಾನೆ ಎಂದು ಆರೋಪಿಸಿ ಮಕ್ಕಳು ಮತ್ತು ತಾಯಿ ಮನೆಯ ಯಜಮಾನನಿಂದ ದೂರ ಉಳಿದು ಬೇರೆಯಾಗಿ ವಾಸವಾಗಿದ್ದರು.
ಈ ಬಗ್ಗೆ ಗ್ರಾಮದ ಹಿರಿಯರು ಊರಿನಲ್ಲಿ ಪಂಚಾಯತಿ ಮಾಡಲು ತಂದೆ ಮಂತರಾಜ್ ನನ್ನು ಮಕ್ಕಳ ಮನೆ ಬಳಿ ಕರೆಸಿದ್ದಾರೆ ಇದರಿಂದ ಆಕ್ರೋಶಗೊಂಡ ಮಕ್ಕಳಾದ ನೀಲಕಂಠ, ಜಗದೀಶ್ ಹಾಗೂ ಮಗಳು ದೇವಿ ತಂದೆಯನ್ನು ತಾವು ನಡೆಸುತ್ತಿದ್ದ ಅಂಗಡಿಯೊಳಗೆ ಕರೆದೊಯಿದು ಶಟರ್ ಬಾಗಿಲು ಹಾಕಿ ಕಣ್ಣಿಗೆ ಕಾರದ ಪುಡಿ ಎರಚಿ ಕಾಲು ಮುರಿಯುವಂತೆ ಬಡಿದಿದ್ದಾರೆ ಹೊಡೆತ ತಾಳಲಾರದೆ ಮಂತರಾಜು ಅರಚಾಡಿದಾಗ ಕೇಳಿದ ಪಂಚಾಯಿತಿಗೆ ಬಂದಿದ್ದ ಊರಿನ ಹಿರಿಯರು ದೊಡ್ಡ ವ್ಯಕ್ತಿಗಳು ಶೆಟರ್ ಬಾಗಿಲು ತೆಗಿಸಿ ಗಾಯಗೊಂಡ ಮಂತರಾಜು ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮಕ್ಕಳಾದ ನೀಲಕಂಠ ಹಾಗೂ ಜಗದೀಶರನ್ನು ವಶಕ್ಕೆ ಪಡೆದಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27