ನೂಜ್ ಡೆಸ್ಕ್:ಎಣ್ಣೆ ಹೊಡೆದವರು ಯಾವುದೆ ಸಾಹಸ ಮಾಡಲು ಹಿಂಜರಿಯುವುದಿಲ್ಲ ತಮಗೆ ತಾವೆ ಮಹಾರಾಜರಂತೆ ವರ್ತಿಸುತ್ತಾರೆ ತೆಲಗು ಸಿನಿಮಾ ಗಬ್ಬರ್ ಸಿಂಗ್ ನ ಹಾಡು “ಮಂದು ಬಾಬುಲಮ್ ಮೆಮು ಮಂದು ಬಾಬುಲಯ್ ಮಂದು ಕೊಡಿತೆ ಮಾಕು ಮೇಮೆ ಮಹಾರಾಜುಲಮ್” ಎನ್ನುವಂತೆ ಮದ್ಯ ಕುಡಿದವರ ವರ್ತನೆಗಳನ್ನು ಡೈಲಾಗ್ ಬಗ್ಗೆ ಹೇಳುತ್ತ ಹೋದರೆ ದಿನ ಸಾಲದು ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ ಇವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಲೆಕ್ಕವಿಲ್ಲದಷ್ಟು ವೀಡಿಯೊಗಳಿವೆ. ಇಷ್ಟೆಲ್ಲ ಯಾಕೆ ಪ್ರಸ್ತಾವನೆ ಅಂದರೆ ಇತ್ತೀಚೆಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ಕುಡುಕನೊಬ್ಬ ಘೋರ ಪ್ರಮಾದ ಮಾಡಿದ್ದಾನೆ ಸದ್ಯ ಯಾವುದೆ ಸಾವು ನೋವು ಆಗಿಲ್ಲ.
ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ಒಬ್ಬಂಟಿಯಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೊತ್ತಚರವು-ಹಿಂದೂಪುರ ಬಸ್ ಹತ್ತಲು ಬಂದಿದ್ದಾನೆ ನಂತರ ಬಸ್ ಕೆಳಗೆ ಹೋಗಿ ಸ್ಟಪನಿ ಟೈರ್ ಹಿಡಿದುಕೊಂಡು ಜೋತಾಡುತ್ತ ಇದ್ದಾನೆ ಬಸ್ ಚಲಿಸಿದೆ ಅದೂ ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ.ಸುಮಾರು 15 ಕಿಲೋಮೀಟರ್ ಬಸ್ ಚಲಿಸಿದೆ ಬಸ್ ಚಲಿಸುತ್ತಿದ್ದರೆ ಬಸ್ ಹಿಂದೆ ಹೋಗುವರು ಟೈರ್ ಕೆಳಗೆ ಜೋತಾಡುತ್ತ ಇರುವುದನ್ನು ಗಮನಿಸಿ ಅಥವಾ ಕೆಲವು ವಾಹನ ಚಾಲಕರು ಬಸ್ ನಿಲ್ಲಿಸಿ ಚಾಲಕನ ಗಮನಕ್ಕೆ ತಂದಿದ್ದಾರೆ ವಿಷಯ ತಿಳಿದ ಚಾಲಕ ಬಸ್ ನಿಲ್ಲಿಸಿ ಬಸ್ಸಿನ ಕೆಳಗೆ ನೇತಾಡುತ್ತಿದ್ದ ವ್ಯಕ್ತಿ ಬಸ್ಸಿನ ಕೆಳಗಿರುವ ಬಿಡಿ ಟೈರ್ ಹಿಡಿದಿದ್ದು ಬಸ್ ಚಾಲಕ ಅವನನ್ನು ಎಳೆದು ಹಾಕಿದ್ದಾನೆ.ಕುಡುಕನ ಮೋಜೋ ಮಸ್ತಿನೋ ಅದೃಷ್ಟವಶಾತ್,ಬದುಕುಳಿದಿರುವುದೆ ಪವಾಡ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Thursday, June 12