ಶ್ರೀನಿವಾಸಪುರ: ಟ್ರಾಫಿಕ್ ಸಮಸ್ಯೆಯಿಂದ ಯುವನೊರ್ವ ಟಿಪ್ಪರ್ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿರುತ್ತದೆ.
ಲಾರಿಗೆ ಸಿಲುಕಿ ಮೃತ ಪಟ್ಟ ದ್ವಿಚಕ್ರ ವಾಹನ ಸವಾರನನ್ನು ಶ್ರೀನಿವಾಸಪುರ ಪಟ್ಟಣದ ದಿಗವಪಲ್ಲಿ ಚಲಪತಿ@ಥಿಯೆಟರ್ ಚಲಪತಿ ಮಗ ರಕ್ಷಿತ(23) ಎಂದು ಗುರುತಿಸಲಾಗಿದೆ.ಮೃತ ಯುವಕ ರಕ್ಷಿತ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಊರಿಗೆ ಬಂದಿದ್ದು ಬಾಲ್ಯ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಮಿಡ್ಲ್ ಸ್ಕೂಲ್ ಆವರಣಕ್ಕೆ ಹೋಗುತ್ತಿರಬೇಕಾದರೆ ಅಪಘಾತ ಆಗಿದೆ ಎನ್ನುತ್ತಾರೆ.
ಮಿಡ್ಲ್ ಸ್ಕೂಲ್ ಆವರಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರಬೇಕಾದರೆ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಯುವಕ ರಕ್ಷಿತ್ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಸವರಿಕೊಂಡು ಹೋಗಿದೆ ಇನ್ನೊಂದಡೆ ಹಬ್ಬಕ್ಕೆ ತೆಂಗಿನ ಕಾಯಿ ಮಾರುವ ಆಟೋ ನಿಂತಿದ್ದು ಇಕ್ಕಾಟಾದ ಜಾಗದಲ್ಲಿ ದ್ವಿಚಕ್ರ ವಾಹನ ಆಯಾ ತಪ್ಪಿದೆ ಸವಾರ ರಕ್ಷಿತ್ ಅನಾಮತ್ ಲಾರಿ ಚಕ್ರದಡಿ ಬಿದ್ದಿರುತ್ತಾನೆ ಚಲಿಸುತ್ತಿದ್ದ ಲಾರಿ ಚಕ್ರಕ್ಕೆ ಅರ್ದ ದೇಹ ಸಿಲುಕಿದೆ ಟಿಪ್ಪರ್ ಲಾರಿ ಯುವಕನ ಮೆಲೆ ಹತ್ತಿದ್ದು ಕೆಲ ಹೊತ್ತು ನರಳಾಡಿ ನರಳಾಡಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.ಸಾರ್ವಜನಿಕವಾಗಿ ನಡೆದ ಘಟನೆಯಿಂದ ಪ್ರತ್ಯಕ್ಷವಾಗಿ ನೋಡಿದ ಜನ ತತ್ತರಿಸಿ ಹೋಗಿದ್ದಾರೆ,ಅಪಘಾತವಾದಾಗ ಮೃತ ಯುವಕ ಕೆಲ ಸೆಕೆಂಡುಗಳ ಕಾಲ ರಸ್ತೆ ಮೆಲೆ ನರಳಾಡಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು ಮನ ಕಲುಕುವಂತಿದೆ.ಘಟನೆ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲುಮಾಡಿಕೊಂಡಿದ್ದಾರೆ.
ಪೋಲಿಸರ ನಿರ್ಲಕ್ಷ್ಯ ಹದಗೆಟ್ಟ ಟ್ರಾಫಿಕ್
ಪಟ್ಟಣದಲ್ಲಿ ಸಂಪುರ್ಣವಾಗಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ ಮಕ್ಕಳು ವೃದ್ಧರು ಒಡಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿ ಫುಟ್ ಬಾತ್ ಅಲ್ಲ ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ವ್ಯವಹಾರ ಮಾಡಲಾಗುತ್ತಿದೆ,ಇದಕ್ಕೆ ಪ್ರತಿ ಅಂಗಡಿ ವ್ಯಾಪಾರಿಯ ಹಿಂದೆ ಮರಿ ರಾಜಕಾರಣಿ ಇನ್ಫುಲಿಯನ್ಸ್ ಹಾಗಾಗಿ ಸ್ಥಳೀಯ ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳತಿದ್ದಾರೆ.ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆಯ ಇಂದಿರಾಭವನ್ ವೃತ್ತ,ಎಸ್.ಬಿ.ಎಂ ಭಾಗದಲ್ಲಿ,ವಾಸವಿ ದೇವಾಲಯದ ಬಳಿ ಬಹುತೇಕ ತರಕಾರಿ ಅಂಗಡಿಗಳು ರಸ್ತೆಯಲ್ಲೆ ವ್ಯಾಪಾರ ನಡೆಸುವುದು!
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28