ಶಿಕ್ಷಕಿ ವೀಣಾ ಅಮಾನತ್ತು ಮಾಡಿರುವ ಶಿಕ್ಷಣ ಇಲಾಖೆ
ಶ್ರೀನಿವಾಸಪುರ:ಶಾಲ ಶಿಕ್ಷಕರ ನಡುವೆ ಸಾಮರಸ್ಯ ಇಲ್ಲದೆ ಸರ್ಕಾರಿ ಶಾಲೆಯೊಂದು ಶೈಕ್ಷಣಿಕವಾಗಿ ಸೊರಗುತ್ತಿದೆ ಎಂದು ದಳಸನೂರು ಗ್ರಾಮಸ್ಥರು ಆರೋಪಿಸಿರುತ್ತಾರೆ. ಇಲ್ಲಿನ ಶಿಕ್ಷಕರಲ್ಲಿ ಹೊಂದಾವಣಿಕೆ ಇಲ್ಲದೆ ಸರ್ಕಾರಿ ಶಾಲೆಯಲ್ಲಿ ಒಂದೆ ದಿನ 18 ವಿಧ್ಯಾರ್ಥಿಗಳು ವರ್ಗಾವಣೆ ತಗೆದುಕೊಂಡು ಹೊಗಿದ್ದಾರೆ ಇದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪೋಷಕರು ಮತ್ತು ಎಸ್ ಡಿ ಎಂ ಸಿ ಆಡಳಿತ ಮಂಡಳಿ ಸದಸ್ಯರು ಕಳಕಳ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಐಎ ಎಸ್, ಐಪಿಎಸ್ ಹಾಗು ಕೆ ಎ ಎಸ್ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳಾಗಿದ್ದಾರೆ ಆದರೆ ಇಂದು ಶಾಲೆಯ ಪರಿಸ್ಥಿತಿ ಶೋಚನಿಯ ಮಟ್ಟ ತಲುಪಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.
ಹಿಂದೆಲ್ಲ ನ್ಯಾಯ ಪಂಚಾಯಿತಿ ನಡೆದಿತ್ತು
ಇಲ್ಲಿರುವ ಆರು ಮಂದಿ ಶಿಕ್ಷಕರ ನಡುವೆ ಸಾಮರಸ್ಯ ಕೊರತೆ ಇಂದು ನಿನ್ನೆಯದಲ್ಲ ಈ ಹಿಂದೆ ಹಲವಾರು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಎಸ್.ಡಿ.ಎಂ ಸಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಶಿಕ್ಷಕರನ್ನೂ ಕೂರಿಸಿ ಬುದ್ದಿವಾದ ಹೇಳಿ ಶಾಲಾ ಗೌರವ ಕಾಪಾಡುವಂತೆ ಸೂಚಿಸಿದ್ದರು ನಂತರದಲ್ಲಿ ಮತ್ತದೇ ಚಾಳಿ ಮುಂದುವರೆದಿದೆ ಎಂಬ ಆರೋಪಿಸುತ್ತಾರೆ.
ಶಿಕ್ಷಕಿ ವೀಣಾ ದುಂಡಾವರ್ತನೆ ಕಾರಣನಾ?
ಇಲ್ಲಿ ಶಿಕ್ಷಕಿಯಾಗಿರುವ ವೀಣಾ ಇತರೆ ಶಿಕ್ಷಕರೊಂದಿಗೆ ಸಾಮಾರಸ್ಯದಿಂದ ವರ್ತಿಸದೆ ಮೊಂಡುತನ ಪ್ರದರ್ಶಿಸುತ್ತಿರುವುದೆ ವಿವಾದಕ್ಕೆ ಕಾರಣವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ, ಶಾಲ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಶಿಕ್ಷಕಿ ವೀಣಾ ವಿದ್ಯಾರ್ಥಿಗಳ ಮುಂದೆ ಮನೆಯಿಂದ ತಂದಿರುವ ತಿಂಡಿ ತಿನಿಸು ತಿನ್ನುತ್ತ ಕೂರುವುದು ಇಲ್ಲದಿದ್ದರೆ ಏರು ಧನಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು,ಇತರೆ ಸಹದ್ಯೋಗಿ ಶಿಕ್ಷಕರೊಂದಿಗೆ ಜಗಳ ಕಾಯುವುದು ಸೇರಿದಂತೆ ಅವರ ವರ್ತನೆಯಿಂದ ಬೆಸೆತ್ತ ಶಿಕ್ಷಕರು ಶಿಕ್ಷಣ ಇಲಾಖೆಗೆ ವೈಯುಕ್ತಿಕವಾಗಿ ದೂರು ನೀಡಿದ್ದರು ಈ ಮೆರೆಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುವಾಗ ಅವರೊಂದಿಗೂ ದೌರ್ಜನ್ಯವಾಗಿ ವರ್ತಿಸಿದ್ದರು ಈ ಹಿಂದೆ ಶಿಕ್ಷಕಿ ವೀಣಾ ತಾಲೂಕಿನ ಎದರೂರು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇಂತಹದೆ ವರ್ತನೆಯಿಂದ 2012 ರಲ್ಲಿ ಅಮಾನತ್ ಶಿಕ್ಷೆಗೆ ಒಳಗಾಗಿದ್ದರು ನಂತರದಲ್ಲಿ ಅಮಾನತ್ ತೆರವಾದ ನಂತರ ದಳಸನೂರು ಶಾಲೆಗೆ ಬಂದರು ಅಂದಿನಿಂದಲೂ ಅವರ ನಡವಳಿಕೆ ಹೀಗೆ ಮುಂದುವರದಿದೆ ಇದಕ್ಕೆ ವಿಧ್ಯಾರ್ಥಿಗಳ ಪೋಷಕರು,ಎಸ್.ಡಿ.ಎಂ ಸಿ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ಶಾಲ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಿಕ್ಷಕಿ ವೀಣಾ ಅವರನ್ನು ಅಮಾನತ್ತು ಮಾಡಿರುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27