ಶ್ರೀನಿವಾಸಪುರ : KSRTC ಬಸ್ಸುಗಳನ್ನು ಮದುವೆ ರಾಜಕೀಯ ಸಮಾವವೇಶಗಳಿಗೆ ಒಪ್ಪಂದದ ಮೇರೆಗೆ
ದೊಡ್ದ ಸಂಖ್ಯೆಯಲ್ಲಿ ಬಸ್ಸುಗಳನ್ನು ಕಳೆಸುತ್ತಿರುವುದರಿಂದ, ಮಾರ್ಗದಲ್ಲಿ ರೆಗ್ಯೂಲರ್ ಆಗಿ ಒಡಾಡುತ್ತಿದ್ದ ಬಸ್ಸುಗಳಿಲ್ಲದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಹಾಗು ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಒಡಾಡಲು ಪ್ರಯಾಸ ಪಡುವಂತಾಗಿದೆ ಎಂದು ಆರೋಪಿಸಿ ಕೂರಿಗೇಪಲ್ಲಿ ಮುದಿಮಡಗು ಭಾಗದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಬಂದಂತ ಬಸ್ ಅನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲೂಕಿನ ಬಹುತೇಕ ಗಡಿಯಂಚಿನ ಗ್ರಾಮಗಳಿಗೆ ಶ್ರೀನಿವಾಸಪುರ ಹಾಗು ಚಿಂತಾಮಣಿಯಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಗಳನ್ನು ಕೆ ಎಸ್ ಆರ್ ಟಿ ಸಿ ಒದಗಿಸಿದೆ. ಇತ್ತಿಚಿಗೆ ರಾಜಕೀಯ ಸಮಾವೇಶಗಳು ಇತರೆ ಖಾಸಗಿ ಕಾರ್ಯಕ್ರಮಗಳು ಸಬೆ ಸಮಾರಂಬಗಳಿಗೆ ತೆರಳಲು KSRTC ಸಂಸ್ಥೆ ಬಸ್ಸುಗಳನ್ನು ಒಪ್ಪಂದದ ಮೇರೆಗೆ ಕಳಿಸುತ್ತಿರುವ ಹಿನ್ನಲೆಯಲ್ಲಿ ರೆಗ್ಯೂಲರ್ ಆಗಿ ಒಡಾಡುವ ಮಾರ್ಗದಲ್ಲಿ ಬಸ್ ಇಲ್ಲದಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳು ಪಾಸ್ ಇದ್ದರು ಇಂತಹ ಸಂದರ್ಬದಲ್ಲಿ ದುಬಾರಿ ಹಣ ತೆತ್ತು ಒಡಾಡಲು ಕಷ್ಟವಾಗುತ್ತದೆ ಎಂದು ದೂರಿದರು.
ಬಸ್ ತಡೆದ ಆಕ್ರೋಶಿತರು ಈ ಬಗ್ಗೆ ಶ್ರೀನಿವಾಸಪುರ ಘಟಕದ ವ್ಯವಸಾಪಕರಿಗೆ ಹೇಳಿದರೆ ನಿಮ್ಮಿಂದ ಬರುವಂತ ದೂರು ನಾನು ಸ್ವೀಕರಿಸಿದರೆ ನಿಮಗೆ ನನ್ನಿಂದ ಯಾವುದೇ ಉಪಯೋಗವಾಗುದಿಲ್ಲ ಎಂದು ತಲೆ ಜಾರಿಕೊಳ್ಳುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14