ತಿರುಪತಿ:ದಕ್ಷಿಣ ಭಾರತದ ಪ್ರಖ್ಯಾತ ರಾಹು-ಕೇತು ಪೂಜೆ ನಡೆಯುವ ಆಂಧ್ರದ ಶ್ರೀಕಾಳಹಸ್ತೀಶ್ವರ ದೇವಾಲಯದಲ್ಲಿ ಭಾನುವಾರ ನಡೆದಂತ ರಾಹು-ಕೇತು ಪೂಜೆಗಳು ಸಾರ್ವಕಾಲಿಕ ದಾಖಲೆಯಾಗಿದೆ.
ದೇವಸ್ಥಾನದಲ್ಲಿ ಐದು ವಿವಿಧ ಧರದ ಟಿಕೆಟ್ ಗಳಲ್ಲಿ ರಾಹು-ಕೇತು ಸರ್ಪದೋಷ ನಿವಾರಣಾ ಪೂಜೆಗಳು ನಡೆಯುತ್ತವೆ ರಾಹು-ಕೇತು ಪೂಜೆಗಳ ದಾಖಲೆ
ರಾಹು-ಕೇತು ಪೂಜಾ ಟಿಕೆಟ್ ಗಳು ಭಾನುವಾರ ಒಂದೇ ದಿನ 9,168 ಟಿಕೆಟ್ಗಳು ಮಾರಾಟವಾಗಿವೆ. 14 ತಿಂಗಳ ಹಿಂದೆ ಐದು ವಿಭಾಗಗಳಲ್ಲಿ ದಾಖಲೆಯ 7,200 ಟಿಕೆಟ್ಗಳು ಮಾರಾಟವಾಗಿದ್ದು, ಆಷಾಢ ಮಾಸದ ಭಾನುವಾರ ಅಮಾವಾಸ್ಯೆ ಬಂದಿದ್ದರಿಂದ ಜನತೆ ದೇವಾಲಯದಲ್ಲಿ ಪೂಜೆ ಮಾಡಲು ಮುಗಿಬಿದಿದ್ದು ಒಂದೇ ದಿನ 9,168 ರಾಹುಕೇತು ಪೂಜೆಯ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶ್ರೀಕಾಳಹಸ್ತೀಶ್ವರ ದೇವಸ್ಥಾನದ ರಾಹುಕೇತು ಮಂಟಪಗಳು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕಾಡುತಿತ್ತು 5,000 ರೂ ಮೊತ್ತದ 154 ಟಿಕೆಟ್ ಗಳು,2,500 ರೂ ಮೊತ್ತದ 610ಟಿಕೆಟ್ ಗಳು,1,500 ರೂ ಮೊತ್ತದ 933ಟಿಕೆಟ್ ಗಳು,750 ರೂ ಮೊತ್ತದ 2,288 ಟಿಕೆಟ್ ಗಳು,500 ರೂ ಮೊತ್ತದ 5,183ಟಿಕೆಟ್ ಗಳು,,. ಸೇರಿ ಒಟ್ಟು 9,168 ರಾಹುಕೇತು ಪೂಜಾ ಟಿಕೆಟಗಳು ಮಾರಾಟವಾಗಿದೆ ಎನ್ನುತ್ತಾರೆ ದೇವಾಲಯದ ಇವಿಒಎಸ್ ಎನ್ ಮೂರ್ತಿ.
ಇದಲ್ಲದೆ, ಐದು ಬಗೆಯ ಪ್ರಸಾದಗಳ 29,505 ಪ್ಯಾಕೆಟ್ಗಳು ಮಾರಾಟವಾಗಿದ್ದು, ಇದು ಸಹ ದಾಖಲೆಯ ಮಾರಾಟ ಎನ್ನುತ್ತಾರೆ ಭಾನುವಾರವಷ್ಟೇ ದೇವಸ್ಥಾನಕ್ಕೆ ವಿವಿಧ ಪೂಜೆ, ಸೇವಾ ಟಿಕೆಟ್ ಗಳ ಮೂಲಕ ಸುಮಾರು ಎರಡು ಕೋಟಿ ಅದಾಯ ಬಂದಿದೆ ಎನ್ನುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27