ಶ್ರೀನಿವಾಸಪುರ:ಪಂಚಾಯಿತಿ ವ್ಯಾಪ್ತಿಯ ನಿವೇಶನಕ್ಕೆ ಸಂಬಂದಪಟ್ಟಂತೆ ಇ-ಖಾತೆ ಮಾಡಿಕೊಡಲು ಗ್ರಾಮಸ್ಥನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಎಸಿಬಿ ಪೋಲಿಸರ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಲಕ್ಷ್ಮೀಪುರ ಪಂಚಾಯಿತಿಯ ವೆಂಕಟರಾಜು ಎನ್ನುವ ವ್ಯಕ್ತಿ ತನ್ನ ತಂದೆ ಮುನಿವೆಂಕಟಪ್ಪ ಮತ್ತು ಸುಶೀಲಮ್ಮ ತಾಯಿ ಹೆಸರಲ್ಲಿದ್ದ ಗ್ರಾಮದ ವ್ಯಾಪ್ತಿಯ ಕಾಲಿ ನಿವೇಶನಗಳ ಇ-ಖಾತೆ ಮಾಡಿಕೊಡುವ ಸಂಬಂದ ಮಾರ್ಚ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ ಅರ್ಜಿಗೆ ಇದುವರಿಗೂ ಯಾವುದೇ ಸ್ವೀಕೃತಿ ಸಹ ನೀಡದೆ ಪಿಡಿಒ ಸತಾಯಿಸುತ್ತಿದ್ದು ಈ ಸಂಬಂದ ಅರ್ಜಿದಾರನ ತಂದೆ ಖುದ್ದು ಪಿಡಿಒ ಶಂಕರಪ್ಪ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಪಿಡಿಒ ಇ-ಖಾತ ಮಾಡಲು 15 ಸಾವಿರ ಡಿಮ್ಯಾಂಡ್ ಮಾಡಿದ್ದು ಇದಕ್ಕೆ ಅರ್ಜಿದಾರ ಮುನಿವೆಂಕಟಪ್ಪ ತಕ್ಷಣ ಸ್ಥಳದಲ್ಲಿಯೇ 2 ಸಾವಿರ ಹಣವನ್ನು ನೀಡಿರುತ್ತಾರೆ ಉಳಿದ ಹಣ 13 ಸಾವಿರ ತಂದು ಹಣ ತಂದುಕೊಡುವುದಾಗಿ ಹೇಳಿದ್ದು, ಈ ಬಗ್ಗೆ ಅರ್ಜಿದಾರ ಮುನಿವೆಂಕಟಪ್ಪನ ಮಗ ವೆಂಕಟ್ರಾಜು ಜುಲೈ 14 ರಂದು ಕೋಲಾರದ ಎಸಿಬಿ ಪೋಲಿಸರಿಗೆ ದೂರು ನೀಡಿರುತ್ತಾರೆ ಅದರಂತೆ ಉಳಿದ ಹಣ 13ಸಾವಿರವನ್ನು ಲಕ್ಷ್ಮೀಪುರಕ್ರಾಸನಲ್ಲಿರುವ ಮಯೂರಿ ಬಾರ್ ನಿಂದ ಲಕ್ಷ್ಮೀಪುರಕ್ಕೆ ಹೋಗುವ ದಾರಿ ಮದ್ಯ ಇಂದು ಮಂಗಳವಾರ ಪಿಡಿಒ ಶಂಕರಪ್ಪ ಅರ್ಜಿದಾರನಿಂದ ಪಡೆಯುತ್ತಿರುವಾಗ ಎಸಿಬಿ ಪೋಲಿಸರಿಗೆ ಸಿಕ್ಕಿ ಬಿದ್ದಿರುತ್ತಾರೆ.ಎಸಿಬಿ ಡಿವೈಎಸ್ಪಿ ಸುಧೀರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಡಿಒ ಶಂಕರಪ್ಪನನ್ನು ವಶಕ್ಕೆ ಪಡೆದಿರುತ್ತಾರೆ.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27