ನ್ಯೂಜ್ ಡೆಸ್ಕ್:ಪ್ರೀತಿಗೆ ಜಾತಿ, ಧರ್ಮ,ಭಾಷೆ,ಪ್ರಾದೇಶಿಕತೆ ಖಂಡಗಳು ಯಾವುದು ಅಡ್ಡಿಯಾಗುವುದಿಲ್ಲ, ಪ್ರೇಮಿಗಳು ಪ್ರೀತಿಯನ್ನು ಗೆಲ್ಲಲು ಎಂತಹ ಕಷ್ಟ ಕೋಟಲೆಗಳನ್ನು ಎದುರಿಸಲು ಸಿದ್ಧವಾಗುತ್ತಿದ್ದ ಕಾಲವೊಂದಿತ್ತು, ಈಗ ಹೈಟೆಕ್ ಯುಗ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿ ಅವರನ್ನು ಒಪ್ಪಿಸಿ ಮದುವೆಯಾಗುವಂತ ಕಾಲ ನಡೆಯುತ್ತಿದೆ, ಇಂತಹ ಪ್ರಯತ್ನದಲ್ಲಿ ಆಂಧ್ರದ ಯುವತಿಯೊಬ್ಬಳು ತನ್ನ ಖಂಡಾಂತರದಾಚಗಿನ ಪ್ರೀತಿಯನ್ನು ಹಿರಿಯರಿಗೆ ತಿಳಿಸಿ ಅವರ ಮನವೊಲಿಸಿ.ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಅಮ್ಮಾಯಿ ಅಮೇರಿಕಾದ ಅಬ್ಬಾಯಿ ಹಿಂದು ಸಂಪ್ರದಾತದಂತೆ ಮದುವೆಯಾದ ಅಪರೂಪದ ಘಟನೆ ನಡೆದಿದೆ.
ಪಲಮನೇರು ಪಟ್ಟಣದ ಸಾಯಿನಗರದ ಪಂಚಾಯಿತಿ ಅಧಿಕಾರಿ ಭಾಸ್ಕರ್ ಮತ್ತು ಶಿಕ್ಷಕಿ ಸುಮಲತಾ ರೆಡ್ಡಿ ದಂಪತಿಯ ಪುತ್ರಿ ರೇವೂರಿ ಮೀನಾ ನಾಲ್ಕು ವರ್ಷಗಳಿಂದ ಅಮೆರಿಕ ದೇಶದ ಮಿಚಿಗನ್ ರಾಜ್ಯದ ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮೇರಿಕಾ ದೇಶದ ವಾಟರ್ಪೋರ್ಟ್ ಟೌನ್ನ ಬ್ರಾಡ್ಲಿ ಟೆರ್ರಿ ಎಂಬ ಯುವಕನೊಂದಿಗೆ ಲವ್ ಆಗಿದೆ ನಂತರದಲ್ಲಿ ಪ್ರೀತಿ ಮ್ರೇಮಾಂಕುರವಾದಾಗಿ ಮೀನಾ ತನ್ನ ಹೆತ್ತವರಿಗೆ ವಿಷಯ ಮುಟ್ಟಿಸಿದ್ದಾಳೆ ಇದಾದ ಮೇಲೆ ಯುವಕ ಬ್ರಾಡ್ಲಿ ಟೆರ್ರಿ ತನ್ನ ಹೆತ್ತವರಿಗೆ ವಿಷಯ ತಿಳಿಸಿದ್ದಾನೆ ಇಬ್ಬರ ಕಡೆಯಿಂದಲೂ ಒಪ್ಪಿಗೆ ಬಂದ ನಂತರ ಅಮೆರಿಕದ ಹುಡುಗ ಹಾಗು ಅವರ ಹೆತ್ತವರು ಬಂಧುಗಳನ್ನು ಪಲಮನೇರಿಗೆ ಕರಸಿ ಹಿರಿಯರ ಹಾಗು ತಮ್ಮ ಆಪ್ತರು ಬಂಧುಗಳ ಸಮ್ಮುಖದಲ್ಲಿ ಪಟ್ಟಣದ ವಿಜಯಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಧಾರೆ ಎರೆದು ಮದುವೆ ಮಾಡಿಕೊಟ್ಟಿದ್ದಾರೆ.ಇವರ ವಿವಾಹಕ್ಕೆ ಯುವತಿಯ ಬಂಧುಗಳೊಂದಿಗೆ ಯುವಕನ ಹೆತ್ತವರು ಏಪ್ರೊಲ್ ಟೆರ್ರಿ,ಡೆಲ್ ಟೆರ್ರಿ ಸೇರಿದಂತೆ ಕೆಲ ಬಂಧುಗಳು ಅಮೇರಿಕಾದಿಂದ ಪಲಮನೇರಿಗೆ ಬಂದು ಅಶಿರ್ವಾದ ಮಾಡಿದ್ದಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14