ಶ್ರೀನಿವಾಸಪುರ:- ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದ ಕುರಿ ವ್ಯಾಪಾರಸ್ಥನನ್ನು ಪಟ್ಟಣದ ಹೊರ ವಲಯದ ಮಾವಿನ ತೋಟದಲ್ಲಿ ಕತ್ತು ಕೊಯ್ದು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನಡೆದಿರುತ್ತದೆ.
ಹತ್ಯೆಯಾದ ವ್ಯಕ್ತಿಯನ್ನು ತಾಲೂಕಿನ ಕಸಬಾ ಹೋಬಳಿ ಗುಂಡಮನತ್ತ ಗ್ರಾಮದ ಮುನಿಶಾಮಿ(65) ಎಂದು ಗುರುತಿಸಲಾಗಿದೆ ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದು ವ್ಯಕ್ತಿಯ ಜೇಬಿನಲ್ಲಿ ಸದಾಕಾಲ ಹತ್ತಾರು ಸಾವಿರ ನಗದು ಇರುತಿತ್ತು ಎಂದು ಹೇಳಲಾಗಿದೆ.
ಇಂದು ಗುಂಡಮನತ್ತ ಗ್ರಾಮದ ಮನೆಯಿಂದ ಹೊರಟ ಮುನಿಶಾಮಿ ಮಧ್ಯಾಹ್ನ ಹೊತ್ತಿಗೆ ಬಸ್ ನಿಲ್ದಾಣದ ಬಳಿಯಿಂದ ತಮ್ಮ ಬಂಧು ಯುವಕನ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ವೃತ್ತಕ್ಕೆ ಡ್ರಾಪ್ ಪಡೆದುಕೊಂಡಿದ್ದಾರೆ ನಂತರ ಏನಾಯಿತು ಎಂಬ ಮಾಹಿತಿ ಯಾರಿಗೂ ಇಲ್ಲ ನಂತರ ಸಂಜೆ ಹೊತ್ತಿಗೆ ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗು ಇಂದಿರಾ ನಗರದ ಹಿಂಬಾಗದ ನೂರ್ ಎಂಬುವರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದು ಹಂತಕರು ಆತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಹೊರಬಿದ್ದಿದೆ ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ಮುಳಬಾಗಿಲು ಡಿ.ವೈ.ಎಸ್.ಪಿ ಗಿರಿ ಹಾಗು ಪೋಲಿಸ್ ಇನ್ಸ್ ಪೇಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಶೀಲನೆ ನಡೆಸಿರುತ್ತಾರೆ. ಮೃತನ ಮಗ ಗೋಪಾಲ್ ಈ ಸಂಬಂಧ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾನೆ.
ಹತ್ಯೆಯಾದ ಸ್ಥಳಕ್ಕೆ ಪೋಲಿಸ್ ಶ್ವಾನಗಳನ್ನು ಕರೆಯಿಸಿದ್ದು ಶ್ವಾನಗಳು ಹತ್ಯೆಯಾದ ಜಾಗದಿಂದ ತೋಟಗಳ ಮದ್ಯೆ ಹಾದು ಚಿಂತಾಮಣಿ-ಕೋಲಾರ ರಸ್ತೆಗಳ ನಡುವಿನ ಬೈಪಾಸ್ ರಸ್ತೆಯಲ್ಲಿ ಸಾಗಿ ಮುಂದೆ ನಂಬಿಹಳ್ಳಿ ಗೆಟ್ ಬಳಿಯವರಿಗೂ ಹೋಗಿ ವಾಪಸ್ಸಾಗಿವೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



