ಶ್ರೀನಿವಾಸಪುರ:ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮೊಬೈಲ್ ಅಂಗಡಿಗಳ ಸೈನ್ ಬೋರ್ಡ್ ಸೇರಿದಂತೆ ನಾಮಫಲಕಳು ವಿದ್ಯತ್ ತಂತಿಗಳು ಸುಟ್ಟು ಕರಕಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಜೆ.ಸಿ.ರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿರುವ ರಜನಿ ಮೋಬೈಲ್ ಅಂಗಡಿಯಲ್ಲಿ ನಡೆದಿದ್ದು ಅದೃಷವತ್ ಪ್ರಾಣ ಹಾನಿಯಂತಹವು ನಡೆದಿಲ್ಲ ಸಮಯಕ್ಕೆ ಅಗ್ನಿ ಶಾಮಕ ದಳ ಕಾರ್ಯಚರಣೆ ನಡೆಸಿದ ಪರಿಣಾಮ ದೊಡ್ದ ಮಟ್ಟದ ನಷ್ಟ ಸಹ ಆಗಿರುವುದಿಲ್ಲ.
ಜೆ.ಸಿ.ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಹಡಿ ಏರಲು ಇರುವಂತ ಮೆಟ್ಟಿಲ ಕೆಳಗೆ ಹಣ್ಣುಗಳ ಅಂಗಡಿಯ ಮರದ ಟೆಬಲ್ ಕೆಳಗೆ ಕೂತಿರುವ ಕಿಡಿಗೇಡಿಗಳು ಶನಿವಾರ ತಡ ರಾತ್ರಿ ಚಳಿಕಾಯಿಸಲು ಬೆಂಕಿಹಾಕಿದ್ದು ನಂತರ ಅದನ್ನು ನಿರ್ಲಕ್ಷಿಸಿ ಹೋಗಿದ್ದಾರೆ ಉರಿಯುತ್ತಿದ್ದ ಬೆಂಕಿ ರಜನಿ ಮೊಬೈಲ್ ಅಂಗಡಿಯ ಪ್ಲಾಸ್ಟಿಕ್ ಸೈನ್ ಬೋರ್ಡ್ ಗೆ ತಾಕಿ ಅಂಗಡಿ ಮುಂದಿನ ಎಲ್ಲಾ ಪ್ಲಾಸಟಿಕ್ ಬೋರ್ಡ್ ಗಳು ಸುಟ್ಟಿದೆ ಅಲ್ಲೆ ಹಾದು ಹೋಗಿರುವ ಬೆಸ್ಕಾಂ ಮೈನ್ ವಿದ್ಯತ್ ತಂತಿಗೂ ಹೊತ್ತಿಕೊಂಡು ಸುಟ್ಟಿದೆ ಎಂದು ಹೇಳಲಾಗಿದ್ದು ತಡ ರಾತ್ರಿಯಲ್ಲಿ ಬೆಂಕಿ ದೃಶ್ಯ ಕಂಡವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿರುತ್ತಾರೆ ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27