ಶ್ರೀನಿವಾಸಪುರ:ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕದ ವಿವಿಧ ಕನ್ನಡ ಹಾಗು ಇತರೆ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ರಾಜ್ಯ ಬಂದ್ಗೆ ಶ್ರೀನಿವಾಸಪುರದಲ್ಲಿ ಸ್ಪಂದನೆ ಸಿಗದೆ ಬಂದ್ ನಡೆಯಲೆ ಇಲ್ಲ.ಶ್ರೀನಿವಾಸಪುರ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತಾದರು ಶುಕ್ರವಾರ ಎಲ್ಲವೂ ಎಂದಿನಂತೆ ಮಾಮೂಲಾಗಿತ್ತು,ಸ್ಥಳೀಯವಾಗಿ ಯಾವುದೆ ಕನ್ನಡ ಹಾಗು ಇತರೆ ಸಂಘಟನೆಗಳು ಬಂದ್ ನಿರ್ವಹಣೆಗೆ ಮುಂದಾಗದ ಪರಿಣಾಮ ಮುಂಜಾನೆಯಿಂದಲೆ ಅಂಗಡಿ-ಮುಂಗಟ್ಟುಗಳನ್ನು ತೆರೆದಿದ್ದ ವ್ಯಾಪರಸ್ಥರು ವ್ಯಾಪರ ವಹಿವಾಟನ್ನು ನಡೆಸಿಕೊಂಡಿದ್ದರು,ತಿಂಡಿ ಹೋಟೆಲ್ಗಳು ಟೀ ಅಂಗಡಿಗಳು ತೆರೆದಿದ್ದವು,ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮಾಮೂಲಿನಂತೆ ಸಂಚಿರಿಸಿತಾದರೂ ಜನ ಸಂಚಾರ ಇಲ್ಲದ ಹಿನ್ನಲೆಯಲ್ಲಿ ಮಧ್ಯಾನದ ಹೊತ್ತಿಗೆ ಬಸ್ಸುಗಳ ಓಡಾಟ ನಿಲ್ಲಿಸಲಾಯಿತು.ಬಹುತೇಕ ಖಾಸಗಿ ಶಾಲೆಗಳು ಬಾಗಿಲು ತೆರೆಯಲಿಲ್ಲ, ಬ್ಯಾಂಕ್ ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿದರೆ, ಸದಾ ಗಿಜಗೂಡುತ್ತಿದ್ದ ತಾಲೂಕು ಕಚೇರಿ ಅವರಣದಲ್ಲಿ ಜನ ಸಂಚಾರ ಕಡಿಮೆ ಇದ್ದು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.ಪಟ್ಟಣದಲ್ಲಿ ಸರ್ಕಾರಿ ಶಾಲ-ಕಾಲೇಜುಗಳು ಬಾಗಿಲು ತೆಗೆತ್ತಿದ್ದಾರೂ ವಿಧ್ಯಾರ್ಥಿಗಳು ಬಾರದ ಹಿನ್ನಲೆಯಲ್ಲಿ ಮಧ್ಯಾನಃದ ಹೊತ್ತಿಗೆ ಬಾಗಿಲು ಹಾಕಲಾಯಿತು,ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ಇದ್ದು ವಿದ್ಯಾರ್ಥಿಗಳ ಹಾಜರಿ ಇತ್ತಾದರೂ ಶಿಕ್ಷಕರು ಉಪನ್ಯಾಸಕರ ಹಾಜರಾತಿ ಇರಲಿಲ್ಲ. ಇನ್ಸಪೇಕ್ಟರ್ ದಯಾನಂದ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬೀಗಿ ಪೋಲಿಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28