ಶ್ರೀನಿವಾಸಪುರ:ಜಗತ್ತಿಗೆ ಕಾಲಜ್ಞಾನ ಹೇಳುವ ಮೂಲಕ ಜಗತ್ತಿನ ಆಗುಹೋಗುಗಳ ಕುರಿತಾಗಿ ಹೆಚ್ಚರಿಕೆ ನೀಡಿದ ಮಹಾನ್ ಪುರುಷ ಪೋತುಲೂರು ವೀರಬ್ರಹ್ಮೇಂದ್ರ ಸ್ವಾಮಿಗಳು ಎಂದು ಶ್ರೀನಿವಾಸಪುರ ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಮೋಹನಾಚಾರಿ ಹೇಳಿದರು.
ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಕಾಳಿಕಕಮಟೇಶ್ವರಿ ದೇವಾಲಯದಲ್ಲಿ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿಯವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ 17ನೇ ಶತಮಾನಕ್ಕೆ ಸೇರಿದವರಾದ ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿಗಳು ತಮ್ಮ ಮಹಾನ್ ಕಂಠದಿಂದ ಜಗತ್ತಿಗೆ ತತ್ವಜ್ಞಾನವನ್ನು ಬೋಧಿಸಿದ ಮಹಾನ್ ಯೋಗಿಗಳು ಜಗತ್ತಿಗೆ ಶಾಂತಿ ಬಯಸಿ ಸರ್ವಜನರ ಶ್ರೆಯಸ್ಸು ಕೋರಿ ಅವರು ಹೇಳಿದಂತ ಕಾಲಜ್ಞಾನದ ವಿಚಾರಗಳು ಇಂದು ಜಗತ್ತಿನಲ್ಲಿ ನಡೆದಿರುತ್ತದೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ಕಾರ್ಯದರ್ಶಿ ರವಿಚಂದ್ರಾಚಾರಿ, ಜಂಟಿ ಕಾರ್ಯದರ್ಶಿ ರಾಮಚಂದ್ರಾಚಾರಿ, ಸದಸ್ಯರಾದ ನಾರಾಯಣಚಾರಿ, ಮಹಿಳಾ ಘಟಕದ ಅಧ್ಯಕ್ಷೆ ಕೆ.ರಾದಮ್ಮ, ಸದಸ್ಯೆ ವಿಜಯಮ್ಮ ಮಂಜುನಾಥಚಾರಿ, ರಮೇಶ್ ಹಾಗು ಮುಂತಾದವರು ಇದ್ದರು
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



