ಮುಳಬಾಗಿಲು:ಮೂರು ದ್ವಿಚಕ್ರ ವಾಹನಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಗಳಲ್ಲಿದ್ದ ಐವರು ಸಾವನಪ್ಪಿರುವ ದಾರುಣ ಘಟನೆಗೆ ಕಾರಣ ಇದೆನಾ ಎಂಬ ಪ್ರಶ್ನೆ ಉದ್ಭಸಿದೆ.
ಬೊಲೆರೊ ವಾಹನ ಚಾಲಕ ಮಣಿಕಂಠ ಮೊಬೈಲ್ ನಲ್ಲಿ ಮಾತನಾಡಿಕೊಂಡು ಅಜಾಗುರುಕತೆಯಿಂದ ಚಾಲನೆ ಮಾಡಿದ ಪರಿಣಾಮ ಎದುರುಗಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂರು ದ್ವಿಚಕ್ರ ವಾಹನಗಳು ಕೆಳಗೆ ಬಿದ್ದಿವೆ ಅದರಲ್ಲಿ ಕುಳಿತವರೊಗೆ ತಲೆ ಎದೆಗೆ ತೀವ್ರವಾಗಿ ಗಾಯಗಳಾಗಿ ನಾಲ್ವರು ಸ್ಥಳದಲ್ಲಿ ಮೃತ ಪಟ್ಟರೆ ಒರ್ವ ಮಹಿಳೆ ಅಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.
ಮುಳಬಾಗಿಲು ತಾಲ್ಲೂಕು ಎನ್.ವಡ್ಡಹಳ್ಳಿ-ಗುಡಿಪಲ್ಲಿ ಮಾರ್ಗದಲ್ಲಿ ಬುಧವಾರ ಸಂಜೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲ ಕೃಷಿ ಕಾರ್ಮಿಕರು ಎಂಬುದು ಧಾರುಣ,
ಮೃತ ಪಟ್ಟವರು ಎಂದಿನಂತೆ ಕೃಷಿ ಕಾರ್ಯ ಮುಗಿಸಿಕೊಂಡು ಊರಿಗೆ ಹೋರಟಿದ್ದರು ಇದರಿಗೆ ಮೃತ್ಯ ಎದುರಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಇಲ್ಲದೆ ಗ್ರಾಮ ಸೇರಿಕೊಳ್ಳುವ ಅವಸರದಲ್ಲಿ ಹೋರಟವರಿಗೆ ಎದುರಿಗೆ ಮೃತ್ಯು ಬೊಲೊರೊ ವಾಹನದ ರೂಪದಲ್ಲಿ ಬಂದು ಆವರಿಸಿದೆ.
ಬೊಲೊರೊ ವಾಹನ ನಡೆಸುತ್ತಿದ್ದ ಚಿಗುರು ಮೀಸೆ ಯುವಕ ಮಣಿಕಂಠ ಸ್ಟೈಲ್ ಆಗಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ಅತಿಯಾದ ವೇಗದಿಂದ ವಾಹನ ನಡೆಸಿದ್ದಾನೆ ಎಂಬ ಆರೋಪ ಇದೆ ಇದರಿಂದಾಗಿಯೆ ಅಪಘಾತವಾಯಿತು ಎನ್ನುತ್ತಾರೆ ಸ್ಥಳಿಯರು
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26